ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಟ್ವಿಸ್ಟ್..ಬಟ್ಟೆ ಬದಲಿಸಿದ್ದು ಯಾಕೆ?

Aug 13, 2021, 5:42 PM IST

ಬೆಂಗಳೂರು(ಆ. 13) ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನೂರಕ್ಕೂ ಅಧಿಕ ಸಿಸಿಟಿವಿ ವಶಕ್ಕೆ ಪಡೆದು ದೃಶ್ಯಾವಳಿ ಮಾಹಿತಿ ಕಲೆ ಹಾಕಿದ್ದಾರೆ. ಪಕ್ಕಾ  ಪ್ಲಾನ್ ನಡೆಸಿಕೊಂಡು ತಂಡ ಅಖಾಡಕ್ಕೆ ಇಳಿದಿದ್ದು ಗೊತ್ತಾಗಿದೆ. ಸಿಸಿಟಿವಿ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟವರು ಯಾರು? ಇಲ್ಲಿದೆ ಸ್ಫೋಟಕ ವಿಡಿಯೋ

ದುಷ್ಕರ್ಮಿಗಳು ಮೂರ್ನಾಲ್ಕು ಸಾರಿ ಬಟ್ಟೆ ಬದಲಾಯಿಸಿದ್ದು ಗೊತ್ತಾಗಿದೆ.  ಮಧ್ಯರಾತ್ರಿ 1:23ರ ಸುಮಾರಿಗೆ ಬಂದ ಇಬ್ಬರು ದುಷ್ಕರ್ಮಿಗಳು ಒಂದು ಲೀಟರ್ ಬಾಟಲ್ ಪೆಟ್ರೋಲ್ ತಂದು ಕಾರಿಗೆ ಬೆಂಕಿ ಹಚ್ಚಿ ಕೆಲವೇ ಹೊತ್ತಿನಲ್ಲಿ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ.  ಘಟನೆ ನಂತರ ಬೊಮ್ಮನಹಳ್ಳಿ ಪೊಲೀಸರಿಂದ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ.