ಭಯಾನಕ ಹತ್ಯೆಗೆ ಬೆಚ್ಚಿದ ಬೆಂಗಳೂರು: ನೇಪಾಳದ ಮಹಾಲಕ್ಷ್ಮೀ ಇಲ್ಲಿ ಭೀಕರವಾಗಿ ಕೊಲೆಯಾಗಿದ್ದೇಕೆ..?

Sep 23, 2024, 4:11 PM IST

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆಯ ಕೊಲೆ ಬೆಂಗಳೂರಿಗರನ್ನು ನಿದ್ದೆಗೆಡಿಸಿದೆ. ಈ ಭೀಕರ ಕೊಲೆಗೆ ಬೆಂಗಳೂರಿನ ಜನ ಭಯಬಿದ್ದಿದ್ದಾರೆ. ನಿನ್ನೆ ಬೆಳಕಿಗೆ ಬಂದಿದ್ದು ಅದೆಂತ ಕೊಲೆ! ಎರಡು ವರ್ಷಗಳ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಶ್ರದ್ಧಾ ವಾಕರ್ ಕೊಲೆಗಿಂತಲೂ ಭೀಕರವಾದ ಕೊಲೆ ಇದಾಗಿತ್ತು. 

ಕ್ರೈಂ ಸಿನಿಮಾಗಳನ್ನೇ ಮೀರಿಸುವ ಕೊಲೆ ಇದಾಗಿದೆ. ಹಾಗಿದ್ರೆ ಇಷ್ಟೊಂದ ಭೀಕರ ಕೊಲೆಗೆ ಕಾರಣವೇನು? ಅಷ್ಟೊಂದು ಕ್ರೂರವಾಗಿ ಕೊಲೆಯಾಗುವಂತ ಕೆಲಸವನ್ನು ಆ ಮಹಿಳೆ ಮಾಡಿದ್ದಾದರೂ ಏನು? ಇಲ್ಲಿದೆ ಭಯಾನಕ ಕೊಲೆಯ ಅಸಲಿ ಕಹಾನಿ