Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

Published : Jan 17, 2024, 01:16 PM IST

ಬೆಂಗಳೂರಿನಲ್ಲಿ ಸುಖ ಸಂಸಾರ ಮಾಡಿಕೊಂಡಿದ್ದ ಒಂಟಿ ಮಹಿಳೆಯ ಕೊಲೆಗೈದು ಒಂದೇ ಒಂದು ಸುಳಿವು ಸಿಗದೇ ಪರಾರಿಯಾಗಿದ್ದ ಕೊಲೆಗಾರನನ್ನು ಪೊಲೀಸರು ಪತ್ತೆ ಮಾಡಿದ್ದೇ ರೋಚಕ. 

 

 

ಬೆಂಗಳೂರು (ಜ.17):  ಬೆಂಗಳೂರಿನಲ್ಲಿ ಪೇಂಟಿಂಗ್ ಕೆಲಸಕ್ಕೆ ಅಂತ ದಶಕದ ಹಿಂದೆ ಉತ್ತರ ಪ್ರದೇಶದಿಂದ ಬಂದವನು ಇವತ್ತು ಕಾಂಟ್ರಾಕ್ಟರ್ ಲೆವೆಲ್ಲಿಗೆ ಬೆಳದಿದ್ದನು. ಒಳ್ಳೆ ಬ್ಯುಸಿನೆಸ್.. ಅರ್ಥ ಮಾಡಿಕೊಳ್ಳೋ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇನ್ನೇನು ಬೇಕು ಆ ಜೀವಕ್ಕೆ. ಆದ್ರೆ ಆವತ್ತು ಮನೆಯಲ್ಲಿದ್ದ ಹೆಂಡತಿಯನ್ನ ಹಂತಕರು ಕೊಂದು ಮುಗಿಸಿದ್ರು. ಅಷ್ಟೇ ಅಲ್ಲ ಮೈಮೇಲಿದ್ದ ಒಡವೆ, ಮನೆಯಲ್ಲಿದ್ದ ದುಡ್ಡನ್ನೆಲ್ಲಾ ದೋಚಿ ಎಸ್ಕೇಪ್ ಆಗಿದ್ದರು. ಆರಂಭದಲ್ಲಿ ಇದು ಮರ್ಡರ್ ಫಾರ್ ಗೇನ್ ಅಂತಲೇ ಅಂದುಕೊಂಡಿದ್ದರು. ಇನ್ನು ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಬರೊಬ್ಬರಿ 800 ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲಿಸಿದರೂ ಹಂತಕನ ಸುಳಿವು ಮಾತ್ರ ಸಿಗಲೇ ಇಲ್ಲ. ಹಾಗಾದ್ರೆ ಆ ಮಹಿಳೆಯನ್ನ ಕೊಂದಿದ್ಯಾರು.? ಎನ್ನುವುದೇ ದೊಡ್ಡ ರಹಸ್ಯವಾಗಿತ್ತು.

ಸೀನ್ ಆಫ್ ಕ್ರೈಂ ನೋಡಿದ ಪೊಲೀಸರಿಗೆ ಇದು ಮರ್ಡರ್ ಫಾರ್ ಗೇನ್ ಅಂತಲೆ ಅನ್ನಿಸಿತ್ತು. ಆದ್ರೆ ಗೇಟ್ ತೆರೆದಿತ್ತು. ಬಾಗಿಲು ಹೊಡೆದಿಲ್ಲ. ಇದು ಪರಿಚಯಸ್ಥರೇ ಮಾಡಿರಬಹುದಾದ ಅನುಮಾನ. ಇನ್ನೂ ಯಾವುದಾದ್ರೂ ಕ್ಲೂ ಸಿಗುತ್ತಾ ಅಂತ ಅಕ್ಕಪಕ್ಕದ ಏರಿಯಾಗಳ ಅಂದಾಜು 800 ಸಿಸಿ ಕ್ಯಾಮರಾಗಳನ್ನೆಲ್ಲಾ ಪರಿಶೀಲನೆ ಮಾಡಿದ್ದರು.  ಆದರ, ಹೀಗೆ ಹುಡುಕುತ್ತಿರುವಾಗ್ಲೇ ಒಂದು ವಿಡಿಯೋದಲ್ಲಿ ಕಂಡ ಕಾಲಿನ ದೃಶ್ಯ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟಿತ್ತು. ಹಾಗಾದ್ರೆ ಕೊಲೆಯಾದ ಮಹಿಳೆ ನೀಲಂನ ಹೆಣ ಹಾಕಿದ್ಯಾರು? ಸಿಸಿ ಟಿವಿಯಲ್ಲಿ ಸಿಕ್ಕ ಆ ಕಾಲು ಯಾರದ್ದು? ಎನ್ನುವುದರ ಹಿಂದೆ ಪೊಲೀಸರಿ ಬಿದ್ದಿದ್ದರು.

24 ವರ್ಷ ಅಪ್ಪನ ಕ್ರೌರ್ಯ, 7 ಮಕ್ಕಳ ಹೆತ್ತ ಮಗಳು, ಭಯಹುಟ್ಟಿಸುತ್ತೆ ಅಪರಾಧ ಜಗತ್ತು

ಲಕ್ಷಲಕ್ಷ ಹಣದ ಆಸೆಯಲ್ಲಿ ಹಂತಕ ನೀಲಂ ಮನೆಗೆ ಎಂಟ್ರಿ ಕೊಟ್ಟಿದ್ದ. ಪರಿಚಯದವನೇ ಆಗಿದ್ರಿಂದ ನೀಲಂ ಬಾಗಿಲು ತೆಗೆದು ಮನೆಯೊಳಗೆ ಬಿಟ್ಟುಕೊಂಡಿದ್ದಳು. ಆದ್ರೆ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದ ಆತ ನೀಲಂ ಕಥೆ ಮುಗಿಸಿ ಮನೆಯನ್ನೆಲ್ಲಾ ತಡಕಾಡಿದ. ಆದ್ರೆ ಆತನಿಗೆ ಸಿಕ್ಕಿದ್ದು ಕೇವಲ 8 ಸಾವಿರ.. ಅದೇ 8 ಸಾವಿರ ಜೇಬಿನಲ್ಲಿಟ್ಟುಕೊಂಡು ಬಂದ ದಾರಿಯಲ್ಲೇ ವಾಪಸ್ ಆಗಿದ್ದ. ಆದ್ರೆ ಆ ಕಿಲಾಡಿ ಹಂತಕ ಆ ಏರಿಯಾದ ಒಂದೇ ಒಂದು ಸಿಸಿ ಟಿವಿಗಳಲ್ಲೂ ಸೆರೆಯಾಗದಂತೆ ಪಕ್ಕಾ ಪ್ಲಾನ್ ಮಾಡಿದ್ದನು. ಮೊಬೈಲ್ ಅನ್ನ ಮನೆಯಲ್ಲೇ ಬಿಟ್ಟು ಹೋಗಿದ್ದನು. ಎರಡ್ಮೂರು ಜೊತೆ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದನು. ಪ್ರತೀ ರಸ್ತೆಯಲ್ಲೂ ತನ್ನ ಶರ್ಟ್‌ಗಳನ್ನು ಬದಲಿಸಿದ್ದನು. ಆದ್ರೆ ಆತ ಧರಿಸಿದ್ದ ಪ್ಯಾಂಟ್ ಪೊಲೀಸರಿಗೆ ಸುಳಿವು ಕೊಟ್ಟಿತ್ತು.

ಹಣಕ್ಕಾಗಿ ಜನ ಏನ್ ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ನೀಲಂ ಕೊಲೆಯೂ ಒಂದು ಸಾಕ್ಷಿಯಾಗಿದ್ದು ವಿಪರ್ಯಾಸ. ಅದಕ್ಕೇ ಹೇಳೋದು ಯಾರನ್ನ ನಂಬಬೇಕೋ, ಯಾರನ್ನ ಬಿಡಬೇಕೋ ಅಂತ. ಯಾರನ್ನಾದರೂ ನಂಬೋದಕ್ಕೂ ಮೊದಲು ಹುಷಾರ್ ಆಗಿರಬೇಕು.

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more