ಬೆಂಗಳೂರು ಗಲಭೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ನವೀನ್ ಹತ್ಯೆಗೆ ಸಂಚು?

Aug 13, 2020, 11:04 AM IST

ಬೆಂಗಳೂರು(ಆ.13):  ಪೂರ್ವ ಬೆಂಗಳೂರಿನ ಕೆಜಿ ಹಳ್ಳ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾತ್ಮಕ ಗಲಭೆ ಆಕಸ್ಮಿಕವಲ್ಲ ಅದು ವ್ಯವಸ್ಥಿತವಾಗಿ ನಡೆದ ಸಂಚು ಎಂಬುವುದು ಬಹುತೇಕ ಖಚಿತವಾಗಿದೆ. 

ಹೌದು SDPI ಮುಖಂಡರೇ ಈ ಗಲಭೆಗೆ ಬಿಗ್ ಸ್ಕೆಚ್ ಹಾಕಿದ್ದರೆನ್ನಲಾಗಿದೆ. ಅಲ್ಲದೇ ಅವಹೇಳನಕಾರಿ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಲಾಗಿದ್ದು, ನವೀನ್ ಬಂಧನ ಕೂಡಾ ನಡೆದಿತ್ತು.

ಆದರೆ ಅತ್ತ ಪುಂಡರ ತಂಡ ನವೀನ್ ಇದ್ದ ಪೊಲೀಸ್ ಠಾಣೆಗೆ ದಾಳಿ ನಡೆಸಿ ನವೀನ್ ಹತ್ಯೆಗೂ ಪ್ಲಾನ್ ನಡೆಸಿತ್ತು. ಇದರಲ್ಲಿ ಭಾಗಶಃ ಅವರು ಯಶಸ್ವಿಯೂ ಆಗಿದ್ದರು. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.