7 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!

7 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!

Published : Nov 21, 2025, 02:09 PM IST

ರಾಜ್ಯ ಮಾತ್ರವಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ ಎಟಿಎಂ ವಾಹನ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್​​.ಐ.ಆರ್​​.

ಬುಧವಾರ ಮಧ್ಯಾಹ್ನ 12.20ಕ್ಕೆ ರಾಬರಿ... ಗುರುವಾರ 12.20ಕ್ಕೆ ಸರಿಯಾಗಿ ದರೋಡೆಕೋರರ ಬಂಧನ.. ಇದೇ ಅಲ್ವಾ ರೋಚಕ ತನಿಖೆ ಆಂತ ಹೇಳೋದು.. ಯಸ್​​​ ನಾವು ಹೆಳೋಕೆ ಹೊರಟಿರೋದು.. ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಿಗ್ಗೆಸ್ಟ್​​ ಬ್ಯಾಂಕ್​ ರಾಬರಿ ಬಗ್ಗೆ.. ಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ರಾಬರ್ಸ್​​ ಆರ್​​.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್​ ಆಗಿದ್ರು.. ಆದ್ರೆ ಈ ಕೇಸ್​​ ಅನ್ನ ಸೀರಿಯಸ್ಸಾಗಿ ತಗೆದುಕೊಂಡ ಬೆಂಗಳೂರು ಪೊಲೀಸರು ದರೋಡೆಕೋರರ ಹಿಂದೆ ಬಿದ್ದಿದ್ರು.. ಸಣ್ಣ ಸುಳಿವು ಬಿಡದೇ ಎಲ್ಲಾ ಆ್ಯಂಗಲ್​ನಲ್ಲೂ ತನಿಖೆ ನಡೆಸಿದ್ರು.. ಪರಿಣಾಮ ಘಟನೆ ನಡೆದು 24 ಗಂಟೆಯಲ್ಲೇ ಕಳ್ಳರು ತಗ್ಲಾಕಿಕೊಂಡಿದ್ದಾರೆ.. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್​​.ಐ.ಆರ್​​. ನಿನ್ನೆ ಇಷ್ಟು ಮಾಹಿತಿ ಸಿಕ್ಕಿತ್ತು.. ಸ್ವತಃ ಗೃಹಮಂತ್ರಿಗಳೇ ಖದೀಮರ ಸುಳಿವು ಸಿಕ್ಕಿದೆ ಅಂತಲೂ ಹೇಳಿದ್ರು.. ಅವರು ಹೇಳಿದಂತೆಯೇ ಪೊಲೀಸರು ಇಬ್ಬರನ್ನ ಲಾಕ್​ ಮಾಡಿದ್ದಾರೆ.

ಅಷ್ಟಕ್ಕೂ ಈ ಕಳ್ಳರು ಪೊಲೀಸರ ಕೈಗೆ ಸಿಕ್ಕಿದ್ದೇಗೆ?
ಅವರು ಬಳಸಿದ್ದು ಮೂರು ಕಾರು.. ಒಂದು ಕಾರಿನಲ್ಲಿ ಡೈರಿ ಸರ್ಕಲ್​ನಲ್ಲಿ ಬಂದು ಹಣ ಕದ್ದರೆ.. ಎಸ್ಕೇಪ್​ ಆಗುವಾಗ ಮಾರ್ಗ ಮಧ್ಯೆ ಮತ್ತೊಂದು ಕಾರಿಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.. ಮೂರನೇ ಕಾರನ್ನ ಕಳ್ಳರು ರಾಜ್ಯವನ್ನ ದಾಟೋಕೆ ಬಳಸುತ್ತಾರೆ.. ಆದ್ರೆ ಮೂರೂ ಕಾರಿನ ಮಾಹಿತಿ ಸಿಕ್ಕ ಪೊಲೀಸರು ಆ ಕಾರುಗಳ ಹಿಂದೆ ಬಿದ್ದರು.. ವಿಶೇಷವಾಗಿ ಅವರು ಹೋಗುತ್ತಿದ್ದ ಮಾರ್ಗದ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇಟ್ಟರು.. ಆಗಲೇ ನೋಡಿ ಕಳ್ಳರ ಪಿನ್​ ಟು ಪಿನ್​ ಇನ್ಫಾರ್ಮೇಷನ್​ ಸಿಗೋದು.. ಎಲ್ಲಾ ಮಹಿತಿಯನ್ನ ಪಡೆದು ಕೊನೆಗೆ ತಿರುಪತಿಯಲ್ಲಿ ಖದೀಮರನ್ನ ಲಾಕ್​ ಮಾಡಿದ್ರು.

ಹೌದು.. ಇವತ್ತು ಕಳ್ಳರು ಸಿಕ್ಕಿಹಾಕಿಕೊಂಡಿದ್ದಾರೆ.. ಎಲ್ಲವೂ ಸುಖಾಂತ್ಯ ಕಾಣುತ್ತಿದೆ.. ಬಟ್​​ ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳೋ ಜವಾಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more