Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

Published : Jan 06, 2024, 10:44 AM IST

ನಟಿ ನಯನತಾರಾ ಕನ್ನಡದ ನಟ ಅಚ್ಯುತ್ ಕುಮಾರ್‌ರನ್ನು ಹೊಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
 

ನಟ ಅಚ್ಯುತ್ ಕುಮಾರ್ ವರ್ಸಟೈಲ್ ಆ್ಯಕ್ಟರ್, ಸೆಟಲ್ ಆ್ಯಕ್ಟರ್. ಮೆಚ್ಯೂರ್ಡ್ ಆ್ಯಕ್ಟರ್. ಕಲಾವಿದನಿಗೆ  ಭಾಷೆಯ ಬೇಲಿಯಿಲ್ಲ. ಹಾಗಾಗಿ ಅವರು  ಭಾಷೆ ಬರದಿದ್ದರೂ ನಟಿಸಬಲ್ಲರು. ಅಚ್ಯುತ್ ಕುಮಾರ್(Achyut Kumar)  ಅವರಿಗೆ ತಮಿಳು ಅಷ್ಟೊಂದು ಬರದೇ ಹೋದ್ರೂ ಇತ್ತೀಚೆಗೆ ತೆರಕಂಡಿರೋ ನಯನತಾರ(Nayanthara) ಮುಖ್ಯಭೂಮಿಕೆಯಲ್ಲಿರೋ ಅನ್ನ ಪೂರ್ಣಿ ಅನ್ನೋ ತಮಿಳು ಸಿನಿಮಾದಲ್ಲಿ(Tamil Movie) ನಟಿಸಿದ್ದರು. ನಯನತಾರ ತಂದೆಯ ಪಾತ್ರವದು. ಶ್ರೀರಂಗಸ್ವಾಮಿಗೆ ಪೂಜೆ ಮಾಡುತ್ತಾ ಪ್ರಸಾದ ಮಾಡುವ  ಬಹಳ  ಪೂಜಾರಿ ಪಾತ್ರವದು. ನಯನತಾರ ನಟನೆಯ ಅನ್ನಪೂರ್ಣಿ ಸಿನಿಮಾದ ತಂದೆಯ ಪಾತ್ರದ ಬಗ್ಗೆ ಬಾರೀ ಚರ್ಚೆಯಾಯಿತು. ‘ದೊಡ್ಡ ಸ್ಟಾರ್‌ಗಳ ಹೆಸರು ಲಿಸ್ಟ್ನಲ್ಲಿ ಇತ್ತು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ನಿರ್ದೇಶಕರು ಫೈನಲ್ ಮಾಡಿದರು. ‘ಈ ಮೊದಲ ಸಿನಿಮಾಗಳಲ್ಲಿ ನನ್ನ ತಂದೆಯ ಪಾತ್ರವನ್ನು ಅವರು ಮಾಡಿರಬಾರದು. ಅಂಥ ಕಲಾವಿದರನ್ನು ಹುಡುಕುತ್ತಿದ್ದೆವು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ಫೈನಲ್ ಮಾಡಿದೆವು’.  ಅವರು ಸಿನಿಮಾ ಸೆಟ್ನಲ್ಲೂ ಇರುತ್ತಿದ್ದರು. ತುಂಬಾನೇ ಗಂಭೀರವಾಗಿ ಇರುತ್ತಿದ್ದರು. ಊಟ ಆಯ್ತಾ ಎಂದು ಕೇಳಿದರೆ ಹೌದು ಎಂದು ಕೂಡ ಹೇಳುತ್ತಿರಲಿಲ್ಲ. ಮುಖದಲ್ಲೇ ಸನ್ನೆ ಮಾಡುತ್ತಿದ್ದರು. ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಅವರಿಗೆ ತಮಿಳು ಬರುವುದಿಲ್ಲ. ಆದರೆ, ಅವರ ಪರ್ಫಾರ್ಮೆನ್ಸ್ ಮಾಡಿದ್ದು ಅದ್ಭುತವಾಗಿತ್ತು. ನನಗೆ ತಂದೆ ರೀತಿಯೇ ಫೀಲ್ ಆಯಿತು’ ಎಂದಿದ್ದಾರೆ ನಯನತಾರಾ.

ಇದನ್ನೂ ವೀಕ್ಷಿಸಿ:  Drone Pratap: ಡ್ರೋನ್ ಪ್ರತಾಪ್‌ ಆಸ್ಪತ್ರೆಗೆ ದಾಖಲು..ಬಿಗ್ ಬಾಸ್ ಮನೆಗೆ ಪೊಲೀಸರ ಎಂಟ್ರಿ!

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
Read more