ಈ ಕ್ಷಣಕ್ಕಾಗಿ ನಾನು ಹಂಬಲಿಸುತ್ತಿದ್ದೆ; ಭಾವುಕರಾದ ರವಿಚಂದ್ರನ್

May 2, 2022, 5:51 PM IST

ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, ಲಹರಿ ವೇಲು ಅವತ್ತು ಹೇಗೆ ಇದ್ದರೂ ಇವತ್ತು ಹಾಗೆ ಇದ್ದಾರೆ. ಆಡಿಯೋಗೆ ಲಕ್ಷಗಟ್ಟಲೇ ಕೊಡಬಹದು ಎಂದು ಧೈರ್ಯ ಬರಲಿಕ್ಕೆ ಕಾರಣ ಲಹರಿ. ಅವತ್ತು ಹಾಕಿದ ಫೌಂಡೇಶನ್ ಇವತ್ತಿನ ವರೆಗೂ ಕಾಪಾಡಿಕೊಂಡು ಬಂದಿದ್ದಾರೆ. ಸಿನಿಮಾದಲ್ಲಿ ಸಕ್ಸಸ್ ಯಾರು ಕೊಡ್ತಾರೆ ಎನ್ನುವುದು ಮುಖ್ಯವಲ್ಲ ಯಾರು ಕೊಟ್ರು ಸಕ್ಸಸ್. ದಾಖಲೆಗಳು ಇರುವುದೇ ಮುರಿತ ಹೋಗುವುದಕ್ಕೆ. ಇಡೀ ಪ್ರಪಂಚ ಕನ್ನಡ ಸಿನಿಮಾರಂಗದ ಕಡೆ ನೋಡುತ್ತಿದೆ. ಈ ಕ್ಷಣಕ್ಕಾಗಿ ನಾನು ಹಂಬಲಿಸುತ್ತಿದ್ದವನು ಈಗ ತುಂಬಾ ಹೆಮ್ಮೆಯಾಗುತ್ತಿದೆ ಎಂದು ರವಿಚಂದ್ರನ್ ಭಾವುಕರಾಗಿದ್ದಾರೆ.