105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

Published : Dec 19, 2023, 10:11 AM IST

ಕನ್ನಡದ ಬಿಗ್‌ಬಾಸ್‌ ಸೀಸನ್ 10 ಆರಂಭವಾಗಿ 60 ದಿನ ದಾಟಿಯಾಗಿದೆ. ಆದ್ರೆ ತೆಲುಗು ಬಿಗ್‌ಬಾಸ್ ಸೀಸನ್ 7 ಮೊದಲೇ ಆರಂಭವಾಗಿತ್ತು. ಆದ್ರೀಗ ತೆಲುಗು ಬಿಗ್‌ಬಾಸ್‌ ಸೀಸನ್ 7 ಅಂತ್ಯವಾಗಿದ್ದು, 17 ಸ್ಪರ್ಧಿಗಳ ಪೈಕಿ ಒಬ್ಬ  ಬಿಗ್‌ಬಾಸ್‌ ಟ್ರೋಫಿಯನ್ನ ಪಡೆದುಕೊಂಡಿದ್ದಾರೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್‌ಬಾಸ್ ಸೀಸನ್ 7 ಆರಂಭವಾಗಿತ್ತು. ಬರೋಬ್ಬರಿ 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್‌ಬಾಸ್ ತೆಲುಗು ಸೀಸನ್ 7ರಲ್ಲಿ(Bigg Boss Telugu Season 7)ಆಡಿದರು. ಈ ಸರ್ತಿಯ ತೆಲುಗು ಬಿಗ್‌ಬಾಸ್‌ನಲ್ಲಿ 17 ಸ್ಪರ್ಧಿಗಳಲ್ಲಿ ಅನೇಕರು ಬೇರೆ ಬೇರೆ ಬ್ಯಾಗ್ರೌಂಡ್‌ನಿಂದ ಬಂದಿದ್ರು. ಆದ್ರೆ ಫಿನಾಲೆಗೆ ಟ್ರೋಫಿಗೆ ಮುತ್ತಿಟ್ಟಿದ್ದು ಮಾತ್ರ ಒಬ್ಬ ರೈತನ ಮಗ. ನಟ ನಾಗಾರ್ಜುನ(Nagarjuna) ನೇತೃತ್ವದ 'ತೆಲುಗು ಬಿಗ್ ಬಾಸ್‌ 7' ಶೋಗೆ ತೆರೆಬಿದ್ದಿದ್ದು, ನಿರೀಕ್ಷೆಯಂತೆ ರೈತನ ಮಗ ಪಲ್ಲವಿ ಪ್ರಶಾಂತ್ ಈ ಬಾರಿಯ 'ಬಿಗ್ ಬಾಸ್' ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ.'ಬಿಗ್ ಬಾಸ್' ಶೋಗೆ ಮಾಮೂಲಿಯಾಗಿ ವ್ಯಕ್ತಿಯಾಗಿ ಎಂಟ್ರಿಕೊಟ್ಟು, ತಮ್ಮ ಅಸಾಧಾರಣ ಪ್ರತಿಭೆಯಿಂದ ಎಲ್ಲರ ಮನಗೆದ್ದ ಪಲ್ಲವಿ ಪ್ರಶಾಂತ್, ಈಗ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ರೈತನ ಮಗನಿಗೆ(Farmer son) 'ಬಿಗ್ ಬಾಸ್' ಪಟ್ಟ ದಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ, ಅಲ್ಲಿ ಸಿಕ್ಕ ಜನಪ್ರಿಯತೆಯಿಂದ 'ಬಿಗ್ ಬಾಸ್‌' ಮನೆ ಪ್ರವೇಶಿಸಿದ ರೈತನ ಮಗ ಪಲ್ಲವಿ ಪ್ರಶಾಂತ್‌ಗೆ 'ಬಿಗ್ ಬಾಸ್‌ 7'ರ ವಿನ್ನರ್ ಪಟ್ಟ ಸಿಕ್ಕಿದೆ. ಅವರಿಗೆ ವಿನ್ನರ್‌ ಟ್ರೋಫಿ ಜೊತೆಗೆ 35 ಲಕ್ಷ ರೂ. ನಗದು, 15 ಲಕ್ಷ ರೂ. ಬೆಲೆಯ ಕಾರು, ವಜ್ರದ ಚಿನ್ನಾಭರಣ ಬಹುಮಾನವಾಗಿ ಸಿಕ್ಕಿದೆ.'ನಾನೊಬ್ಬ ರೈತ, ರೈತನ ಮಗ. ನನಗೆ ಸಿಕ್ಕಿರುವ ಈ ಹಣದಲ್ಲಿ ರೈತರಿಗೆ ಸಹಾಯ ಮಾಡುತ್ತೇನೆ' ಎಂದು ಪಲ್ಲವಿ ಪ್ರಶಾಂತ್ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರೇಮಮಯಿ ಲೀಲಾವತಿ 11ನೇ ದಿನದ ವೈಕುಂಠ ಸಮಾರಾಧನೆ ಮಾಡಿದ ಮಗ..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more