ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!

ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!

Published : Dec 19, 2025, 07:50 PM IST

ಬಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್​​​​​​​ ಫ್ಯಾನ್ಸ್​ ಮಧ್ಯೆ ಸಿಲುಕಿ ಸುಸ್ತು ಹೊಡೆದಿದ್ದಾರೆ. ಸಾಕಪ್ಪಾ ಸಾಕು. ಇನ್ಮುಂದೆ ಈ ಫ್ಯಾನ್ಸ್ ಸಹವಾಸವೇ ಸಾಕು ಅನ್ನೋ ಮಟ್ಟಕ್ಕಾಗಿದೆ. ಸಿಕ್ಕಿದ್ದೇ ಚಾನ್ಸು ಅಂತ ನಿಧಿಗೆ ಮೂರು ಲೋಕ ತೋರಿಸಿದ್ದಾ ಅಲ್ಲಿದ್ದ ಜನ.

ಬಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್​​​​​​​ ಫ್ಯಾನ್ಸ್​ ಮಧ್ಯೆ ಸಿಲುಕಿ ಸುಸ್ತು ಹೊಡೆದಿದ್ದಾರೆ. ಸಾಕಪ್ಪಾ ಸಾಕು. ಇನ್ಮುಂದೆ  ಈ ಫ್ಯಾನ್ಸ್ ಸಹವಾಸವೇ ಸಾಕು ಅನ್ನೋ ಮಟ್ಟಕ್ಕಾಗಿದೆ. ಸಿಕ್ಕಿದ್ದೇ ಚಾನ್ಸು ಅಂತ ನಿಧಿಗೆ ಮೂರು ಲೋಕ ತೋರಿಸಿದ್ದಾ ಅಲ್ಲಿದ್ದ ಜನ. ನಿಧಿಗಾದ ಕರಾಳ ಅನುಭವದ ವಿರುಧ್ಧ ಈಗ ಧ್ವನಿ ಎದ್ದಿದೆ. ಹಾಗಾದ್ರೆ ಅಂಥದ್ದೇನಾಯ್ತು.? ಸೆಲೆಬ್ರೆಟಿಗಳು ನೋಡಲು ಜನ ಮುಗಿಬೀಳುವುದು ಸರ್ವೇ ಸಾಮಾನ್ಯ. ಆದ್ರೆ ಇದರಿಂದ  ಕಲಾವಿದರಿಗೆ ಸಮಸ್ಯೆ ತಂದೊಡ್ಡೋತ್ತೆ. ಈಗ ಬಾಲಿವುಡ್ ನಟಿ ನಿಧಿ ಅಗರ್ವಾಲ್​ಗೂ ಅಂತದ್ದೇ ಅನುಭವ ಆಗಿದೆ. ಜನರ ಮಧ್ಯೆ ಸಿಲುಗಿ ನಟಿ ನಿಧಿ ಅಗರ್ವಾಲ್ ಮೂರು ಲೋಕ ನೋಡಿ ಎದ್ನೋ ಬಿದ್ನೋ ಅಂತ ಹೊರ ಬಂದಿದ್ದಾರೆ. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಅಲ್ಲಿದ್ದ ಜನ ಎಳೆದಾದ್ದಾರೆ.

ಹಾಟ್ ಬ್ಯೂಟಿ ನಿಧಿ ಅಗರ್ವಾಲ್ ಹಾಗು ಡಾರ್ಲಿಂಗ್ ಪ್ರಭಾಸ್​ ನಟನೆಯ ದಿ ರಾಜಾಸಾಬ್ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಹೈದರಾಬಾದ್​ನ ಮಾಲ್​​ ಒಂದರಲ್ಲಿ ನಡೆದಿತ್ತು. ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದಂತೆ ನಿಧಿಯನ್ನ ಅಲ್ಲಿದ್ದ ಜನ ಮುತ್ತಿಕೊಂಡು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಅಂತೂ ಇಂತೂ ಬಾಡಿಗಾರ್ಡ್ಸ್ ನಿಧಿಯನ್ನ ಸುರಕ್ಷಿತವಾಗಿ ಕಾರ್ ಹತ್ತಿಸಿದ್ದಾರೆ. ಆದ್ರೆ ಕೆಲ ಕ್ಷಣಗಳು ಪರಿಸ್ಥಿತಿ ಕೈ ಮೀರಿದ್ದಂತು ನಿಜ. ಕಾರ್​ ಹತ್ತಿದ ನಟಿ ನಿಧಿ ನಿಟ್ಟುಸಿರು ಬಿಟ್ಟಿದ್ದಾರೆ. ನಟಿ ಶ್ರೀಲೀಲಾಗೂ ಇಂತದ್ದೇ ಅನುಭವ ಆಗಿದೆ. ಆಶಿಕಿ3 ಸಿನಿಮಾದ ಪ್ರಚಾರಕ್ಕೆ ಅಂತ ಹೋದಾಗ ನಟಿ ಶ್ರೀಲೀಲಾರನ್ನ ಕೈ ಹಿಡಿದು ಎಳೆದಿದ್ದ ಫ್ಯಾನ್ಸ್ ತಮ್ಮ ಗುಂಪಿನೊಳಕೆ ಸೇರಿಸಿಕೊಂಡಿದ್ರು.

ಆದ್ರೆ ತಕ್ಷಣ ಅಲರ್ಟ್ ಆದ ಬಾಡಿಗಾರ್ಡ್ಸ್​​ ಶ್ರೀಲೀಲಾರನ್ನ ಅಲ್ಲಿಂದ ಪಾರು ಮಾಡಿದ್ರು. ನಟಿ ರಾಗಿಣಿಗೂ ಇದೇ ಅನುಭವ ಆಗಿದೆ. ಪಬ್ ಒಂದರ ಕಾರ್ಯಕ್ರಮಕ್ಕೆ ಹೋಗಿದ್ದ ರಾಗಿಣಿ ಕೈ ಹಿಡಿದು ಅಭಿಮಾನಿಯೊಬ್ಬ ಎಳೆದಿದ್ದ. ಕೂಡಲೇ ನಟಿ ರಾಂಗ್ ಆಗಿದ್ದ ರಾಗಿಣಿ, ಕೈ ಹಿಡಿದು ಎಳೆದ ಆ ವ್ಯಕ್ತಿಗೆ ರಪ್ ಅಂತ ಅಲ್ಲೇ ಕೆನ್ನೆಗೆ ಬಾರಿಸಿದ್ರು. ಅಷ್ಟೆ ಅಲ್ಲ ನಟಿ ತಮನ್ನಾಗೂ ಹೀಗೆ ಆಗಿತ್ತು. ಡೈ ಹಾರ್ಟ್ ಫ್ಯಾನ್ ಬಾಯ್ ಒಬ್ಬ ತಮನ್ನಾ ಬಳಿ ಫೊಟೋ ಕೇಳಲು ಹೋಗಿ ನುಗ್ಗಿದ್ದ, ಕೊನೆಗೆ ಆತನನ್ನ ಸಮಾಧಾನ ಮಾಡಿ ಫೋಟೋ ಕೊಟ್ಟು ಕೊಳುಹಿಸಿದ್ರು ತಮನ್ನಾ. ಎನಿ ವೇ ಫ್ಯಾನ್ಸ್ ಹೆಸರಲ್ಲಿ ಜನರ ಮಧ್ಯೆ ಇರೋ ಕೆಲ ಕಿಡಿಗೇಡಿಗಳು ನಟಿಯರ ಜೊತೆ ಅತಿರೇಕದ ವರ್ಥನೆಯ ಘಟನೆಗಳು ನಡೀತಾನೆ ಇರುತ್ತೆ. ಆದ್ರೆ ನಟಿ ನಿಧಿ ಅಗರ್ವಾಲ್​​​ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಆದಂತಿದೆ. 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more