ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಣ್ಣೆದುರಲ್ಲೇ ನಡೆದು ಹೋಯಿತು ಪವಾಡ!

Jan 7, 2020, 12:06 PM IST

ರಾಮನ ಬಂಟ ಆಂಜನೇಯ ಒಂದು ಕಣ್ಣು ತೆರೆದು ಪವಾಡ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಬೆಳಗಾವಿಯ ಖಾನಾಪುರದ ನಂದಗಡ ಗ್ರಾಮದಲ್ಲಿ ಇಂತದ್ದೊಂದು ಅಚ್ಚರಿ ನಡೆದಿದೆ. ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭವೋ, ಅಶುಭವೋ ಎಂಬ ಚರ್ಚೆ ಶುರುವಾಗಿದೆ.  ಇದು ಕಿಡಿಗೇಡಿಗಳ ಕೆಲಸ ಎಂದು ಕೆಲವರು ವಾದಿಸುತ್ತಿದ್ದಾರೆ.  ಸತ್ಯವೋ, ಸುಳ್ಳೋ ಎಂಬುದನ್ನು ಆಂಜನೇಯ ಸ್ವಾಮಿಯೇ ಹೇಳಬೇಕಪ್ಪಾ!