ಸಂಚಾರ ನಿಯಂತ್ರಿಸಲು ದ್ರೋಣ್ ಬಳಸಿದ ಪೊಲೀಸರು, ದಿಕ್ಕಾಪಾಲಾಗಿ ಓಡಿದ ಹುಡುಗರು..!

Apr 12, 2020, 7:07 PM IST

ಬೆಳಗಾವಿ(ಏ.12): ಲಾಕ್‌ಡೌನ್ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಯುವಕರ ಡ್ರೋಣ್ ಕ್ಯಾಮರ ಕಂಡಾಕ್ಷಣ ಎದ್ದು ಬಿದ್ದು ಓಡಿದ ಘಟನೆ ಬೆಳಗಾವಿಯ ಉಜ್ವಲ ನಗರ, ಗಾಂಧಿನಗರದಲ್ಲಿ ನಡೆದಿದೆ.

ಅಯ್ಯೋ ದೇವರೇ, ಕೊರೋನಾ ವಾರಿಯರ್ಸ್ ಮೇಲೆಯೇ ಹಲ್ಲೆ..!

ಸಂಚಾರ ನಿಯಂತ್ರಿಸಲು ಹಾಗೂ ಬೇಕಾಬಿಟ್ಟಿ ತಿರುಗಾಡುವವರ ಮೇಲೆ ಹದ್ದಿನ ಕಣ್ಣಿಡಲು ಬೆಳಗಾವಿ ಪೊಲೀಸರು ಡ್ರೋಣ್ ಬಳಸಿದ್ದರು. ಈ ವೇಳೆ ಕ್ರಿಕೆಟ್ ಆಡುತ್ತಿದ್ದ ಹುಡುಗರು ದ್ರೋಣ್ ನೋಡುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿರುವ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. 

ಅಕ್ರಮವಾಗಿ ಕಳ್ಳಬಟ್ಟಿ ವ್ಯಾಪಾರ ಮಾಡುತ್ತಿದ್ದವ ಅರೆಸ್ಟ್..!

ಈಗಾಗಲೇ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆಯಾಗಿದೆ. ಇನ್ನು ಕರ್ನಾಟಕದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

"