2 ವರ್ಷ ಹಿಂದೆ ಪತ್ನಿ ಜೊತೆ ಹೋಗಿದ್ದ ಜಾಗಕ್ಕೆ ಮತ್ತೆ ಭೇಟಿ ನೀಡಿದ ವಿಜಯ್ ರಾಘವೇಂದ್ರ; ಅದೇ ಶರ್ಟ್‌ ಹಾಕಿರುವುದು ಆಶ್ಚರ್ಯ

Published : Feb 26, 2025, 08:59 AM ISTUpdated : Feb 26, 2025, 09:20 AM IST
2 ವರ್ಷ ಹಿಂದೆ ಪತ್ನಿ ಜೊತೆ ಹೋಗಿದ್ದ ಜಾಗಕ್ಕೆ ಮತ್ತೆ ಭೇಟಿ ನೀಡಿದ ವಿಜಯ್ ರಾಘವೇಂದ್ರ; ಅದೇ ಶರ್ಟ್‌ ಹಾಕಿರುವುದು ಆಶ್ಚರ್ಯ

ಸಾರಾಂಶ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಸ್ಪಂದನಾ ಜೊತೆ ದರ್ಶನ ಪಡೆದಾಗ ಧರಿಸಿದ್ದ ಶರ್ಟನ್ನೇ ಈಗಲೂ ಧರಿಸಿರುವುದು ವಿಶೇಷ. ಸ್ಪಂದನಾ ನೆನಪು ಸದಾ ಇರುತ್ತದೆ ಎಂದು ವಿಜಯ್ ಹೇಳಿದ್ದಾರೆ. ಅಭಿಮಾನಿಗಳು ಸ್ಪಂದನಾ ಮೇಲಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪಂದನಾ 2023ರಲ್ಲಿ ಹೃದಯಾಘಾತದಿಂದ ನಿಧನರಾದರು.

ಕನ್ನಡ ಚಿತ್ರರಂಗ ಚಿನ್ನಾರಿ ಮುತ್ತ, ಚಾಕೋಲೇಟೆ ಹೀರೋ ಹಾಗೂ ದಿ ಬೆಸ್ಟ್‌ ಹ್ಯೂಮನ್ ಎಂದು ಜನರಿಂದ ಬಿರುದು ಪಡೆದಿರುವ ವಿಜಯ್ ರಾಘವೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಗನ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ದೇವರ ಆಶೀರ್ವಾದ ತುಂಬಾ ಮುಖ್ಯವಾಗಿದೆ. ಆಶ್ಚರ್ಯ ಏನೆಂದರೆ ಎರಡು ವರ್ಷಗಳ ಹಿಂದೆ ವಿಜಯ್ ಧರಿಸಿದ್ದ ಶರ್ಟ್ ಹಾಗೂ ಈ ಸಲ ಭೇಟಿ ನೀಡಿದಾಗ ಧರಿಸಿರುವ ಶರ್ಟ್ ಒಂದೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೆ ಸ್ಪಂದನಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

'ಎರಡು ವರ್ಷಗಳ ಹಿಂದೆ ಜೊತೆಯಲ್ಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ದಾಕಿದ್ದ ಶರ್ಟನ್ನೇ ನನಗರಿಯದೆಯೇ ಈ ದಿನವೂ ಕೊಲ್ಲೂರು ಅಮ್ಮನ ದರ್ಶನ ಪಡೆಯಲು ಹೋದಾಗ ಹಾಕಿದ್ದೆ...ಐ ಲವ್ ಯು ಚಿನ್ನ' ಎಂದು ವಿಜಯ್ ರಾಘವೇಂದ್ರ ಬರೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಜೊತೆ ಭೇಟಿ ನೀಡಿದ್ದಾಗ ನೀಲಿ ಬಣ್ಣದ ಶರ್ಟ್‌ಗೆ ಪಂಚೆ ಶೆಲ್ಯೆ ಧರಿಸಿದ್ದರು ಹಗೂ ಸ್ಪಂದಾನ ನೇರಳ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ನೀಲಿ ಬಣ್ಣದ ಶರ್ಟ್‌ ಮತ್ತೆ ಧರಿಸಿದ್ದಾರೆ. ಇದು ವಿಜಯ್‌ಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಆಶ್ಚರ್ಯವಾಗಿದೆ.

26 ವರ್ಷದ ಬಿಗ್ ಬಾಸ್ ಭವ್ಯಾ ಗೌಡ ಒಂದು ಸೀರಿಯಲ್ ಒಂದು ಶೋಯಿಂದ ಮಾಡಿರೋ ಆಸ್ತೆ ಎಷ್ಟು?

'ನಿಜವಾದ ಪ್ರೀತಿ ಅಂದ್ರೆ ಇದೇ ಸರ್. ನೀವು ಎಲ್ಲೇ ಹೋದರು ಅಲ್ಲಿ ಮೇಡಂ ನೆನಪು ಮತ್ತು ಫೋಟೋ ಇದ್ದೇ ಇರುತ್ತದೆ. ನೆರಳಾಗಿ ಅವರು ನಿಮ್ಮೊಟ್ಟಿಗೆ ಈಗಲೂ ಪಕ್ಕದಲ್ಲಿ ಇದ್ದಾರೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮಹಾಲಕ್ಷ್ಮಿ ರೀತಿಯಲ್ಲಿ ಕೈಗೆ ಬಳೆ ಹಣೆಯಲ್ಲಿ ಕುಂಕುಮ ಇಟ್ಟಿರುವ ಸ್ಪಂದನಾರನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಮಾಳವಿಕಾ ಫೋನ್‌ ರಿಂಗ್‌ ಆದ್ರೂ ನಾನು ಮುಟ್ಟಲ್ಲ, ಮದ್ವೆ ಆದ್ಮೇಲೆ ಸ್ಪೇಸ್‌ ಬೇಕು: ನಟ ಅವಿನಾಶ್

ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಮಾಡಿಕೊಂಡರು. ಸ್ಪಂದನಾ ಮೂಲತಃ ಬೆಳ್ತಂಗಡಿಯವರು. ಮದುವೆ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. 2007ರಲ್ಲಿ ಆಗಸ್ಟ್‌ 26ರಂದ ವಿಜಯ್ ಮತ್ತು ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಈಗ 14 ವರ್ಷ ಮಗನಿದ್ದಾನೆ. 2023ರ ಆಗಸ್ಟ್‌ 6ರಂದು ಬ್ಯಾಂಕಾಂಕ್ ಪ್ರಯಾಣ ಮಾಡಿದ್ದಾಗ ಸ್ಪಂದನಾ ಹೃದಯಾಘಾತದಿಂದ ನಿಧನರಾದರು. ಸದ್ಯ ಸಿಂಗಲ್ ಪೇರೆಂಟ್ ಆಗಿ ವಿಜಯ್ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. 

ಮೆಹೆಂದಿ ಹಾಕಿಸಿಕೊಂಡ boys vs girls ರಮ್ಯಾ; ಬೇಜಾರ್ ಆದಾಗ ಗಂಡ ಬದಲಾಯಿಸೋದಾ ಎಂದ ನೆಟ್ಟಿಗರು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?