ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

Published : Nov 03, 2024, 05:25 PM IST
ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

ಸಾರಾಂಶ

ಬಿಗ್​ಬಾಸ್​ಗೆ ಪುಟ್ಟಕ್ಕನ ಮಗಳು ಸ್ನೇಹಾ ಉರ್ಫ್​ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..  

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾಳ ಪಾತ್ರ ಮುಗಿದಿದೆ. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು.  ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.

ಇದೀಗ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಜನಾ ಅವರು, ಈ ಸೀರಿಯಲ್​ ಕುರಿತು ಮಾತನಾಡಿದ್ದಾರೆ. ಸೀರಿಯಲ್​ ಬಿಡಲು ನನಗೂ ಮನಸ್ಸು ಇರಲಿಲ್ಲ. ತುಂಬಾ ನೋವಿನಿಂದಲೇ ಹೊರಕ್ಕೆ ಬಂದಿದ್ದೇನೆ. ಮೂರು ತಿಂಗಳ ಹಿಂದೆಯೇ ನೋಟಿಸ್​ ಪಿರಿಯಡ್​ ಕೊಟ್ಟಿದ್ದೆ. ಈ ಮೂಲಕ ಸೀರಿಯಲ್​ಗಳಿಗೆ ಬೈ ಹೇಳುತ್ತಿದ್ದೇನೆ. ಆದರೆ ನಟಿಯಾಗಿ ಮುಂದುವರೆಯುತ್ತಿದ್ದೇನೆ ಎಂದಿರುವ ಸಂಜನಾ, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದಾಗಲೇ ಕೆಲವು ಪ್ರಾಜೆಕ್ಟ್​ಗಳನ್ನು ಮಾಡಿದ್ದೇನೆ. ಅದಾವುದೂ ಇನ್ನೂ ಬಿಡುಗಡೆಯಾಗಿಲ್ಲ. ನಟಿಯಾಗಿ ಇರುತ್ತೇನೆ. ನನಗೆ ಇಷ್ಟದ ಪಾತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ನನಗೆ ಚಾಲೆಂಜಿಂಗ್​ ಪಾತ್ರಗಳು ಎಂದರೆ ಇಷ್ಟ. ಹುಚ್ಚಿಯಂಥ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ನಾಯಕಿಯೇ ಆಗಬೇಕೆಂದೇನೂ ಇಲ್ಲ. ನನಗೆ ಇಷ್ಟ ಆಗುವ ಪಾತ್ರಗಳು ಆಗಬೇಕಷ್ಟೇ ಎಂದಿದ್ದಾರೆ ಸಂಜನಾ.
ಸೀರಿಯಲ್​ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್​ ಹೇಳೇಬಿಟ್ರು!

ಇದೇ ವೇಳೆ, ಬಿಗ್​ಬಾಸ್​ಗೆ ಹೋಗುವ ಬಗ್ಗೆ ಮಾತನಾಡಿರುವ ಸಂಜನಾ ಬುರ್ಲಿ, ನಾನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ಬಿಟ್ಟಾಗ ಸೋಷಿಯಲ್​ ಮೀಡಿಯಾಗಳಲ್ಲಿ ನಾನು ಬಿಗ್​ಬಾಸ್​ಗೆ ಹೋಗಲು ಸೀರಿಯಲ್​ ಬಿಟ್ಟೆ ಎಂದೇ ಪೋಸ್ಟ್​ಗಳನ್ನು ಹಾಕುತ್ತಿದ್ದರು. ನಿರ್ದೇಶಕರು ಹೊಸ ಪಾತ್ರಕ್ಕೆ ಹುಡುಗಿಯನ್ನು ಸರ್ಚ್​ ಮಾಡುವ ಪೋಸ್ಟ್​ ಹಾಕಿದಾಗಲೇ ಎಲ್ಲರೂ ನಾನು ಬಿಗ್​ಬಾಸ್​ಗೆ ಹೋಗ್ತಾ  ಇದ್ದೇನೆ ಎಂದುಕೊಂಡಿದ್ದರು. ಅದನ್ನೆಲ್ಲಾ ನಾನು ನೋಡುತ್ತಿದ್ದೆ. ಆದರೆ ಆ ಕ್ಷಣ ರಿಯಾಕ್ಟ್​ ಮಾಡಲು ಹೋಗಲಿಲ್ಲ. ಹೇಗಿದ್ದರೂ ಬಿಗ್​ಬಾಸ್​ ಶುರುವಾದ ಮೇಲೆ ಸತ್ಯ ಗೊತ್ತಾಗತ್ತಲ್ಲಾ ಎಂದು. ಈಗ ಹೇಗೆ ಮಾತಾಡ್ತಾ ಇದ್ದಾರೆ ಎಂದ್ರೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತೇನೆ ಅನ್ನುತ್ತಿದ್ದಾರೆ. ನಿಜಕ್ಕೂ ಈ ನೆಟ್ಟಿಗರ ಕ್ರಿಯೇಟಿವಿಟಿ ಮೆಚ್ಚಬೇಕು. ತಮ್ಮದೇ ಆದ ರೀತಿಯಲ್ಲಿ ಹೇಗೆಲ್ಲಾ ಕಲ್ಪನೆ ಮಾಡಿಕೊಳ್ಳುತ್ತಾರೆ ಎಂದು ನಕ್ಕಿರುವ ಸಂಜನಾ ಅವರು, ನಾನು ಬಿಗ್​ಬಾಸ್ ಅಷ್ಟೇ ಅಲ್ಲದೇ, ಯಾವುದೇ ರಿಯಾಲಿಟಿ ಷೋಗಳಿಗೂ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮೂಲಕ ಅವರ ಫ್ಯಾನ್ಸ್​ಗೆ ಉತ್ತರ ಕೊಟ್ಟಿದ್ದಾರೆ. 

ಅದೇ ವೇಳೆ, ಸಾವಿನ ದೃಶ್ಯ ಮಾಡುವಾಗ ಭಯವಿತ್ತು. ನಂತರ ಉಮಾಶ್ರೀ ಮೇಡಂ ಅವರಲ್ಲಿ ಕೇಳಿದೆ. ಇವೆಲ್ಲಾ ಮಾಮೂಲು. ನಾನೂ ಮಾಡಿದ್ದೇನೆ. ಡೋಂಟ್​ ವರಿ ಎಂದರು. ಅವರಂಥ ನಟಿಯಿಂದ ಸ್ಫೂರ್ತಿ ಸಿಗುವುದು ಅಪರೂಪ. ಎಲ್ಲರನ್ನೂ ಬಿಟ್ಟು ಹೋಗುವಾಗ ಮನಸ್ಸು ತುಂಬಾ ನೋವಾಯಿತು. ಈ ಮೂರು ವರ್ಷಗಳ ಜರ್ನಿಯಲ್ಲಿ, ಇಡೀ ಸೀರಿಯಲ್​ ತಂಡ ಕುಟುಂಬದಂತೆ ಇದ್ವಿ. ಆದ್ದರಿಂದ ಮನಸ್ಸು ಭಾರವಾಯಿತು.  ಕೊನೆಯ ದಿನ ಎಲ್ಲರೂ ಸಿಕ್ಕಾಪಟ್ಟೆ ಅತ್ತರು. ನಾವು ಮೂವರು ಸಹೋದರಿಯರು ಅಂದ್ರೆ ಸಹನಾ ಮತ್ತು ಸುಮಾ ಜೊತೆ ಫೋಟೋ ತೆಗೆದುಕೊಳ್ಳುವಾಗ ಅಕ್ಷರಶಃ ಅತ್ತುಬಿಟ್ವಿ. ಹೊರಗಡೆ ಸಿಗುತ್ತೇವೆ ನಿಜ. ಅದರೆ ಸೀರಿಯಲ್​ ಸೆಟ್​​ ಮಿಸ್​ ಮಾಡ್ಕೋತಾ ಇದ್ದೇನೆ ಎಂದಿದ್ದಾರೆ ಸಂಜನಾ.

ಸ್ನೇಹಾಳ ಸಾಯಿಸೋ ಉದ್ದೇಶವೇ ಇರ್ಲಿಲ್ಲ- ನಟಿಗಾಗಿ ಬದಲಾಯ್ತಾ ಕಥೆ? ಅವಾರ್ಡ್​ನಲ್ಲಿ ಸಂಜನಾಗೆ ಮೋಸ ಎಂದ ಫ್ಯಾನ್ಸ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!