ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ; ಹೌದು ಸ್ವಾಮಿ!

Published : Sep 16, 2024, 11:57 AM ISTUpdated : Sep 16, 2024, 12:03 PM IST
ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ; ಹೌದು ಸ್ವಾಮಿ!

ಸಾರಾಂಶ

ಇದೀಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್​ ಅವರು ಕಾಣಿಸಿಕೊಂಡು ಈ ಮೊದಲು ಎದ್ದಿದ್ದ ಎಲ್ಲ ಅಂತೆ-ಕಂತೆಗಳಿಗೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ...ಕೆಲವರು 'ನಾವು ಬಿಗ್​ ಬಾಸ್​ ನೋಡುವುದೇ ಸುದೀಪ್​ ಅವರಿಗೋಸ್ಕರ' ಎಂದಿದ್ದರೆ ಇನ್ನೂ ಕೆಲವರು 'ಹೌದು ಸ್ವಾಮಿ'..

ನಿರೀಕ್ಷೆ ನಿಜವಾಗಿಸುವ ನಿಟ್ಟಿನಲ್ಲಿ ಕಲರ್ಸ್ ಕನ್ನಡ ವಾಹಿನಿ (Colors Kannada) ದೊಡ್ಡ ಹೆಜ್ಜೆ ಇಟ್ಟಿದೆ. ಕೆಲವೇ ಸಮಯದ 'ಬಿಗ್​ ಬಾಸ್​ ಕನ್ನಡ ಸೀಸನ್​ 11' ಪ್ರೋಮೋ (Bigg Boss Kannada Season 11) ಹೊರಬಿದ್ದಿದೆ. ಪ್ರೋಮೋ ನೋಡಿದ ಕಿರುತೆರೆ ವೀಕ್ಷಕರು ವಿಭಿನ್ನ ರೀತಿಯಲ್ಲಿ ಕಾಮೆಂಟ್​ ಮಾಡತೊಡಗಿದ್ದಾರೆ. ನಿರೀಕ್ಷೆಯಂತೆ ವೈರಲ್ ಪ್ರೋಮೋದಲ್ಲಿ ಅತಿ ಹೆಚ್ಚು ಹೈಲೈಟ್​ ಆಗಿರುವುದು ಹೋಸ್ಟ್ ಕಿಚ್ಚ ಸುದೀಪ್. ಈ ಬಾರಿ ಆ್ಯಂಕರ್ ಚೇಂಗ್ ಆಗುತ್ತಾರೆ ಎಂಬ ಬಗ್ಗೆ ಗುಮಾನಿಗೆ ಇಂಬು ಕೊಡುವಂತೆ ಮೊದಲು ಬಂದಿದ್ದ ಪ್ರೋಮೋ ಇತ್ತು. ಆದರೆ ಸುದೀಪ್ (Kichcha Sudeep) ಫಿಕ್ಸ್ ಆಗಿದ್ದಾರೆ.

ಆದರೆ ಇದೀಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್​ ಅವರು ಕಾಣಿಸಿಕೊಂಡು ಈ ಮೊದಲು ಎದ್ದಿದ್ದ ಎಲ್ಲ ಅಂತೆ-ಕಂತೆಗಳಿಗೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ. 'ಬಿಗ್ ಬಾಸ್ ಕನ್ನಡ  11' ಪ್ರೋಮೋ ನೋಡಿದ ಜನರು ತಮಗನ್ನಿಸಿದ ರೀತಿಯಲ್ಲಿ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಕಿಚ್ಚ ಸುದೀಪ್ ಬಗ್ಗೆಯೇ ಬಹಳಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಲರ್ಸ್​ ಕನ್ನಡ ತನ್ನ ಅಧೀಕೃತ ಸೋಷಿಯಲ್​ ಮೀಡಿಯಾದಲ್ಲಿ 'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಪ್ರೋಮೋವನ್ನು ಹಂಚಿಕೊಂಡಿದೆ. ಅದಕ್ಕೆ ಅಸಂಖ್ಯಾತ ಮಂದಿ ಕಮೆಂಟ್​ ಮಾಡುತ್ತಲೇ ಇದ್ದಾರೆ. 

10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು

'ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ; ಕಿಚ್ಚ ಸುದೀಪ್ ಅವರಿಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ' ಎಂಬ ಸ್ಲೋಗನ್‌ ಕೂಡ ಬಂದಿದೆ. ಹೀಗಂತ ಒಬ್ಬರು ಫ್ಯಾನ್ಸ್​ ಅಭಿಪ್ರಾಯ ತಿಳಿಸಿ ಕಾಮೆಂಟ್ ಮಾಡಿದ್ದಾರೆ. 'ಕಿಚ್ಚ ಸುದೀಪ್​ ಅವರೇ ನಿರೂಪಕರು​ ಎಂಬುದನ್ನು ತಿಳಿದು ಈಗ ಸಮಾಧಾನ ಆಗಿದೆ' ಎಂದು ಅನೇಕರು ತಮ್ಮ ಅಭಿಪ್ರಾಯ ಶೇರ್ ಮಾಡಿದ್ದಾರೆ.

ಕೆಲವರು 'ನಾವು ಬಿಗ್​ ಬಾಸ್​ ನೋಡುವುದೇ ಸುದೀಪ್​ ಅವರಿಗೋಸ್ಕರ' ಎಂದಿದ್ದರೆ ಇನ್ನೂ ಕೆಲವರು 'ಹೌದು ಸ್ವಾಮಿ' ಕಾಮೆಂಟ್​ ಮಾಡಿದ್ದಾರೆ. 'ಬದಲಾವಣೆ ಜಗದ ನಿಯಮ' ಎಂದಾಗ ಬಿಗ್ ಬಾಸ್‍ ಹೇಳೋದು 'ಹೌದು ಸ್ವಾಮಿ'. 'ಆದರೆ ಇವರ ವಿಚಾರದಲ್ಲಿ ಬದಲಾವಣೆ ನೋ ವೇ, ಚಾನ್ಸೇ ಇಲ್ಲ' ಎಂದು ಈ ಪ್ರೋಮೋಗೆ ಕ್ಯಾಪ್ಷನ್​ ನೀಡಲಾಗಿದೆ. ಈ ಮಾತನ್ನು ಸುದೀಪ್​ ಫ್ಯಾನ್ಸ್ ಕೂಡ 'ನಿಜ..ನಿಜ..' ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಲವರು 'ಇನ್ಮೇಲೆ ಕಲರ್ಸ್​ ಕನ್ನಡ ಚಾನೆಲ್ ನಂಬರ್​ 1 ಆಗುತ್ತೆ ನೋಡ್ತಾ ಇರಿ..' ಎಂದು ಭವಿಷ್ಯ ನುಡಿದಿದ್ದಾರೆ. ಇದು 11ನೇ ಸೀಸನ್, ಈ ಬಾರಿ ಬಿಗ್​ ಬಾಸ್​ ಶೋ ಬಹಳಷ್ಟು ಸ್ಪೆಷಲ್​ ಆಗಿರಲಿದೆ ಎಂಬ ನಿರೀಕ್ಷೆ ಕಿರುತೆರೆ ವೀಕ್ಷಕರಲ್ಲಿ ಇದೆ ಎನ್ನಬಹುದು. ಅದು ಖಂಡಿತ ಹೌದು ಎಂಬಂತೆ ಪ್ರೋಮೋದಲ್ಲಿ ಸುದೀಪ್​ ಅವರು 'ಇದು ಹೊಸ ಅಧ್ಯಾಯ' ಎಂದು ಹೇಳಿದ್ದಾರೆ. ಹೊಸ ನಿರೀಕ್ಷೆ, ಹೊಸ ಕ್ರೇಜ್‌ನೊಂದಿಗೆ ಬಿಗ್ ಬಾಸ್ ಕನ್ನಡ 11 ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿದೆ. 

ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?

ಹೌದು, ಸೆಪ್ಟೆಂಬರ್​ 29ರಂದು (29 September 2024) 'ಬಿಗ್ ಬಾಸ್​ ಕನ್ನಡ ಸೀಸನ್​ 11' ಪ್ರಾರಂಭ ಆಗಲಿದೆ. ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು 'ಬರುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ. ಇನ್ನು, ನಟ ಕಿಚ್ಚ ಸುದೀಪ್​ ಅವರು ತಮ್ಮ 'ಮ್ಯಾಕ್ಸ್' ಸಿನಿಮಾದ ಬಿಡುಗಡೆ, ಪ್ರಚಾರದ ಕೆಲಸಗಳಲ್ಲೂ ನಿರತರಾಗಿದ್ದಾರೆ. ಈ ನಡುವೆ ಅವರು ಬಿಗ್​ ಬಾಸ್​ ಕನ್ನಡದ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಕಿರುತೆರೆ ವೀಕ್ಷಕರು ಖುಷಿಯಾಗಿದ್ದಾರೆ, ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Landlord Movie: ದುನಿಯಾ ವಿಜಯ್‌, Rachita Ram ಸಿನಿಮಾದಲ್ಲಿ ವಿಗ್‌ ಹಾಕಿ ನಟಿಸಿದ್ದೇಕೆ ರಾಜ್‌ ಬಿ ಶೆಟ್ಟಿ?
Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?