ಮಗನಿಂದಲೇ ಬಯಲಾಗುತ್ತಾ ಅಪ್ಪನ ಬಂಡವಾಳ? ಅಡಕತ್ತರಿಯಲ್ಲಿ ತಾಂಡವ್​, ಸಿಕ್ಕಿಬೀಳ್ತಾಳಾ ಸುಂದ್ರಿ?

Published : Jan 31, 2024, 05:13 PM IST
ಮಗನಿಂದಲೇ ಬಯಲಾಗುತ್ತಾ ಅಪ್ಪನ ಬಂಡವಾಳ? ಅಡಕತ್ತರಿಯಲ್ಲಿ ತಾಂಡವ್​, ಸಿಕ್ಕಿಬೀಳ್ತಾಳಾ ಸುಂದ್ರಿ?

ಸಾರಾಂಶ

ಮನೆಯಲ್ಲಿ ಕಳ್ಳತನ ಮಾಡಿದ ಸುಂದ್ರಿ ಯಾರ ಕೈಗೂ ಸಿಗದಂತೆ ಮಾಡುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಆದರೆ ಮಗನ ಕೈಯಿಂದ ಸಿಕ್ಕಿ ಬೀಳ್ತಾನಾ?  

ಭಾಗ್ಯಳಿಂದ ದೂರವಾಗಿ ಶ್ರೇಷ್ಠಾಳ ಜೊತೆ ನೆಲೆಸಿರುವ ತಾಂಡವ್​, ಸ್ವಂತ  ಅಪ್ಪ-ಅಮ್ಮಂದಿರನ್ನು ಬಿಟ್ಟು ನಕಲಿ ಅಪ್ಪ-ಅಮ್ಮನ ಹಿಂದೆ ಹೋಗಿದ್ದಾನೆ. ಶ್ರೇಷ್ಠಾಳ ಮನೆಯವರಿಗೆ ಹಾಗೂ ತಾನು ನೆಲೆಸಿರುವ ಮನೆಯವರಿಗೆ ಇದೇ ನಕಲಿ ಅಪ್ಪ-ಅಮ್ಮನೇ ಅಸಲಿ ಎಂದು ಹೇಳಿದ್ದಾನೆ. ಇನ್ನು ಈ ನಕಲಿಗಳೋ ಪಕ್ಕಾ ಕಳ್ಳರು. ಖುದ್ದು ಭಾಗ್ಯಳ ಮನೆಯಲ್ಲಿ ಕದ್ದಿದ್ದಾಳೆ ನಕಲಿ ಅಮ್ಮ ಸುಂದ್ರಿ. ಆದರೆ ಇದೀಗ ಅವಳು ಸಿಕ್ಕಿಬಿದ್ದಿದ್ದು, ತಾಂಡವ್​ ಮಗ ಗುಂಡಾ ಆಕೆಯನ್ನು ಕೂಡಿ ಹಾಕಿದ್ದಾನೆ. ಎಲ್ಲಿ ತನ್ನ ಬಂಡವಾಳ ಬಯಲಾಗುತ್ತೋ ಎಂದು ಮಗನನ್ನು ಆಚೆಗೆ ಕಳುಹಿಸಿ ಸುಂದ್ರಿಯನ್ನು ಕೊಠಡಿಯಿಂದ ಹೊರಕ್ಕೆ ಕಳುಹಿಸಿದ್ದಾನೆ ತಾಂಡವ್​.

ಈ ಕುತಂತ್ರ ಸದ್ಯ ಯಾರಿಗೂ ಗೊತ್ತಿಲ್ಲ. ಆದರೆ ಗುಂಡ ಬಿಡಬೇಕಲ್ಲಾ? ನಾನೇ ಖುದ್ದು ಆ ಕಳ್ಳಿಯನ್ನು ನೋಡಿದ್ದೇನೆ ಎನ್ನುತ್ತಿದ್ದರೆ ತಾಂಡವ್​ ಅದೆಲ್ಲಾ ಸುಳ್ಳು ಎಂದಿದ್ದಾನೆ. ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೇನು ಸಿಕ್ಕಿಬೀಳುವ ಹಂತದಲ್ಲಿದ್ದಾನೆ ತಾಂಡವ್​. ಸುಂದ್ರಿಯೇನೋ ತಪ್ಪಿಸಿಕೊಂಡಿದ್ದಾಳೆ. ಆದರೆ ಗುಂಡ ಮಾತ್ರ ಅಪ್ಪನ ಮೇಲೆ ಸಂಶಯ ತೋರಿದ್ದಾನೆ. ಸದಾ ಸುಳ್ಳು ಹೇಳುವ ಅಪ್ಪ ಎಂದಿದ್ದಾನೆ. ಕುಸುಮಾ, ಭಾಗ್ಯ ಸೇರಿದಂತೆ ಎಲ್ಲರಿಗೂ ಯಾರು ಸರಿ, ಯಾರು ತಪ್ಪು ಎನ್ನುವುದು ತಿಳಿಯುತ್ತಿಲ್ಲ. ಅಷ್ಟಕ್ಕೂ ಕಳ್ಳಿಯನ್ನು ತಾಂಡವ್​ ಕಳುಹಿಸಿಕೊಡುವುದು ಏಕೆ ಎನ್ನುವುದು ತಿಳಿಯದೇ ಇರುವ ಪ್ರಶ್ನೆ ಅವರಿಗೆಲ್ಲ. ಅವರಿಗೇನು ಗೊತ್ತು, ಇದೇ ಕಳ್ಳಿಯನ್ನು ತಾಂಡವ್​ ತನ್ನ ಅಮ್ಮ ಎಂದಿದ್ದಾನೆ ಎಂದು.

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಒಟ್ಟಿನಲ್ಲಿ ಈಗ ತಾಂಡವ್​ಗೆ ಫಜೀತಿ ಶುರುವಾಗಿದೆ. ಇದನ್ನು ನೋಡಿ ಕುಸುಮಾಗೆ ಸಂದೇಹ ಬಂದಿದೆ. ಆ ಕಳ್ಳಿ ಹೇಗೆ ಇದ್ದಳು ಎಂದು ಕೇಳಿದಾಗ, ಗುಂಡ ಅವಳು ಹೀಗಿಗೆ ಇದ್ದಳು ಎಂದಿದ್ದಾನೆ. ಆಗ ಕುಸುಮಾ ಯಾರಿಗೋ ಕರೆ ಮಾಡಿ, ಒಬ್ಬಳ ಫೋಟೋ ಕಳುಹಿಸುವಂತೆ ಕೇಳಿದ್ದಾಳೆ. ಸುಂದ್ರಿ ಸಿಕ್ಕಿಬಿದ್ದರೆ ತಾಂಡವ್​ ಸಿಕ್ಕಿಬಿದ್ದಂತೆಯೇ. ಪ್ರತಿಬಾರಿಯೂ ಹೇಗ್ಹೇಗೋ ತಪ್ಪಿಸಿಕೊಳ್ತಿದ್ದ ತಾಂಡವ್​ ಈ ಬಾರಿಯೂ ತಪ್ಪಿಸಿಕೊಳ್ತಾನಾ ಅಥವಾ ಸಿಕ್ಕಿಬೀಳ್ತಾನಾ ಎನ್ನುವುದೇ ಪ್ರಶ್ನೆ.

ಇಷ್ಟೆಲ್ಲಾ ಆಗಿದ್ದರೂ ತಾಂಡವ್​, ಶ್ರೇಷ್ಠಾಳ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾನೆ ಎನ್ನುವುದು ಇದುವರೆಗೆ ಮನೆಯವರಿಗೆ ತಿಳಿದಿಲ್ಲ. ಶ್ರೇಷ್ಠಾ ತನ್ನ ಮದುವೆ ಫಿಕ್ಸ್​ ಆಗಿದೆ ಎಂದಿದ್ದಳೇ ವಿನಾ, ಹುಡುಗ ಇದೇ ತಾಂಡವ್ ಎಂದು ಹೇಳಿರಲಿಲ್ಲ. ಇದೇ ಕಾರಣಕ್ಕೆ ಇವರಿಬ್ಬರ ಸಂಬಂಧದ ಬಗ್ಗೆ ಮನೆಯಲ್ಲಿ ಯಾರಿಗೂ ಅರಿವಿಲ್ಲ.ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಬಿಗ್​ಬಾಸ್​ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?