ಎಷ್ಟೇ PR ತಂತ್ರ ಮಾಡಿ, ನೆಗೆಟಿವ್‌ ಕಾಮೆಂಟ್ಸ್‌ ಹಾಕಿ; Bigg Boss ಗೆಲ್ಲೋದು ಪ್ರತಿಭೆಯೇ; ಕಂಪೆನಿ HR ಏನಂದ್ರು?

Published : Jan 10, 2026, 11:03 AM IST
BBK 12

ಸಾರಾಂಶ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಇನ್ನು ಒಂದು ವಾರ ಸಮಯ ಇದ್ದು, ಗ್ರ್ಯಾಂಡ್‌ ಫಿನಾಲೆ ಹತ್ತಿರ ಇದೆ. ಹೀಗಿರುವಾಗ ಸ್ಪರ್ಧಿಗಳ ಮನೆಯವರು ಹೊರಗಡೆ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ವಿನ್ನರ್‌ ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ಸಮಯ ಹತ್ತಿರ ಬಂದಿದೆ. ಹೀಗಿರುವಾಗ ಸ್ಪರ್ಧಿಗಳಿಗೂ, ಸ್ಪರ್ಧಿಗಳ ಕುಟುಂಬಸ್ಥರಿಗೂ ನೆಗೆಟಿವ್‌ ಕಾಮೆಂಟ್ಸ್‌ಗಳು ಬರುತ್ತಿವೆ. ಚುನಾವಣೆ ಎನ್ನೋ ರೇಂಜ್‌ಗೆ ಭರ್ಜರಿ ಪ್ರಚಾರಗಳು ನಡೆಯುತ್ತವೆ. ಪಿಆರ್‌ ತಂತ್ರಗಳ ಬಗ್ಗೆ ಖಾಸಗಿ ಕಂಪೆನಿ HR ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಂಕೇತ್‌ ರಾಮಕೃಷ್ಣಮೂರ್ತಿ ಹೇಳಿದ್ದೇನು?

ನಾನು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನೋಡುತ್ತ, ಒಂದು ವಿಷಯವನ್ನು ತುಂಬಾ ಗಟ್ಟಿಯಾಗಿ ಫೀಲ್ ಮಾಡ್ತಿದ್ದೀನಿ…

ಇದೀಗ ಬಿಗ್‌ ಬಾಸ್ ಅಂತಂದ್ರೆ ಹೌಸ್ ಒಳಗಿರುವ ಆಟ ಅಷ್ಟೇ ಅಲ್ಲ… ಹೌಸ್ ಹೊರಗೆ ನಡೆಯುವ PR, Campaigning, Paid Trends, Negative Narratives ಕೂಡ ಆಟದ ಭಾಗವಾಗಿಬಿಟ್ಟಿದೆ ಅನ್ನೋದು ನೋವಿನ ಸಂಗತಿ. ಕೆಲವರು ಬ್ರ್ಯಾಂಡೆಡ್‌ ಕಾರ್‌, ದೊಡ್ಡ ದೊಡ್ಡ ಅಭಿಯಾನ, ಬಹಳಷ್ಟು ಪಿಆರ್‌ ಎಜೆನ್ಸಿಗಳನ್ನು ಇಡ್ಕೊಂಡು… ಇತರ ಸ್ಪರ್ಧಿಗಳ ಬಗ್ಗೆ ನೆಗೆಟಿವ್‌ ಕಥೆ ಹೇಳೋದು ನೋಡಿ ಮಾಡಿ ತಮ್ಮ ಪ್ರಯೋಜನ ಪಡೆಯೋದು…

ಇದು ಬಿಗ್‌ ಬಾಸ್‌ ಶೋಗೆ ಎಷ್ಟು ಸರಿ ಅಂತ ನನಗೆ ಪ್ರಶ್ನೆ ಬರುತ್ತಿದೆ. PR ಇಲ್ಲದೇ, ಹಣ ಇಲ್ಲದೇ, ಹೊರಗಿನ ಬೆಂಬಲ ಇಲ್ಲದೇ ಹೌಸ್ ಒಳಗೆ ತಮ್ಮ ಪ್ರತಿಭೆ, ಅಸ್ತಿತ್ವ, ಜರ್ನಿಯಿಂದ ಜನರ ಮನಸ್ಸು ಗೆದ್ದವರು. ನನ್ನ ದೃಷ್ಟಿಯಲ್ಲಿ ಬಿಗ್‌ ಬಾಸ್‌ ಟೈಟಲ್‌ಗೆ ಇರೋದು…

PR ಟ್ರೆಂಡ್ ಆಗಬಹುದು… ಆದರೆ ಗೆಲುವು ಮಾತ್ರ ಪ್ರತಿಭೆಗೆ. ಈ ಸೀಸನ್‌ನಲ್ಲಿ ನನಗೆ ಆ ನಿಜವಾದ ವೈಬ್ ಕೊಟ್ಟವರು‌ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ.

ಗಿಲ್ಲಿ ನಟ ಮನರಂಜನೆ ಮಾಡೋದು ಸಹಜವಾಗಿ ಆಗಿ ಬರುತ್ತೆ. ಅವನ ವೇದಿಕೆ ಮೇಲೆ ಮಾತ್ರ ಅಲ್ಲ… ನಿಶ್ಯಬ್ದದಲ್ಲೂ ಕಾಣತ್ತೆ. ಅವನು ಶೋವನ್ನಯ ಕ್ಯಾರಿ ಮಾಡಿದ್ದಾನೆ ಅನ್ನೋದು ವೀಕ್ಷಿಕರಿಗೆ ಸ್ಪಷ್ಟವಾಗಿ ಕಾಣ್ತಿದೆ.

ರಕ್ಷಿತಾ ಶೆಟ್ಟಿ – composure, dignity, emotional strength… ನೀವು ಎಷ್ಟು ಕೆಣಕಿದರೂ ಕೂಡ ಹಳೆಯ ತಪ್ಪುಗಳನ್ನ ಇಟ್ಟುಕೊಂಡು ಆಟ ಆಡಲ್ಲ. ಆಕೆಯ ಜರ್ನಿ ತುಂಬಾ ಸತ್ಯವಾಗಿದೆ.

ಇದಕ್ಕೆ ವಿರುದ್ಧವಾಗಿ… ಏನಾದ್ರೂ ಸ್ಪರ್ಧಿ ಜನಪ್ರಿಯತೆ ಪಡೆದಿದ್ದರೂ ಕೂಡ. ಅದು PR-driven ಆಗಿದ್ರೆ, ವೀಕ್ಷಕರ ವಿಶ್ವಾಸವು ಕಡಿಮೆ ಆಗುತ್ತೆ. Paid trends ಅಲ್ಲ… ಜನಮನ ಗೆಲ್ಲೋದು ಪ್ರತಿಭೆ

ಬಿಗ್‌ ಬಾಸ್ ಅಂದರೆ‌ ಮಾರ್ಕೇಟಿಂಗ್‌ ಸ್ಪರ್ಧೆ ಅಲ್ಲ. ಇದು ಕ್ಯಾರೆಕ್ಟರ್ + ಕೊಡುಗೆ + ಜರ್ನಿ. ಕೊನೆಗೆ ಹೇಳೋದು ಒಂದೇ…

ಕಪ್‌ ಪಡೆಯಲು ಅರ್ಹತೆ ಹೊಂದಿರೋದು ಆಗಿರೋದು, ಮನೆ ಒಳಗೆ ಗೆದ್ದವರು. PR, ಬ್ರ್ಯಾಂಡಿಂಗ್ ಅಥವಾ ನೆಗೆಟಿವ್ ಮೂಲಕ ಹೊರಗೆ ಗೆದ್ದವರು ಅಲ್ಲ. ಹೈಪ್ ಅಲ್ಲ…‌ ಹೃದಯ ಗೆಲ್ಲೋದು ಜರ್ನಿ. ನಿಮಗೆ ಏನನ್ಸುತ್ತೆ? ಈ ಸೀಸನ್‌ನಲ್ಲಿ ನಿಮ್ಮ ವಿಜೇತರು ಯಾರು? ಇನ್ನೊಂದು ಮಾತು… PR ಏನೇ ಮಾಡಲಿ… paid trends ಏನೇ ಓಡಲಿ…ನೆಗೆಟಿವ್‌ ನಿರೂಪಣೆ ಏನೇ ಕಟ್ಟಲಿ

ಏಕೆಂದರೆ ಪ್ರತಿಭೆ ಅನ್ನೋದು ಯಾವತ್ತೂ ತಪ್ಪಿಸಿಕೊಳ್ಳಲಾಗದ ಸತ್ಯ. ಅದು ನಿಧಾನ ಆಗಿರಬಹುದು… ಆದರೆ ಜನಮನ ಗೆಲ್ಲೋದು ಪ್ರತಿಭೆ, ಜರ್ನಿ ಮಾತ್ರ. ಕೊನೆಗೆ ಗೆಲ್ಲೋದು ಪ್ರತಿಭೆಯೇ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಅಯ್ಯೋ..! ಕಾವ್ಯ ಶೈವ ಬದಲು ಟಾಸ್ಕ್‌ಗಳನ್ನು ಆಡುತ್ತಿದ್ದ ಪ್ರಬಲ ಸ್ಪರ್ಧಿಯೇ ಔಟ್‌ ಆದ್ರು!
BBK 12: ಕೊನೆಯ ಕಿಚ್ಚನ ಪಂಚಾಯಿತಿ; ರಕ್ಷಿತಾ ಶೆಟ್ಟಿ ಬಳಿ ಸತ್ಯ ಹೇಳಿಸಿದ Kiccha Sudeep!