413 ಎಪಿಸೋಡ್‌ಗೆ Ninagagi Serial ಅಂತ್ಯ; ಕಟ್ಟ ಕಡೆಯ ಎಪಿಸೋಡ್‌ನಲ್ಲಿ ಏನಾಗಲಿದೆ?

Published : Oct 05, 2025, 06:14 PM IST
ninagagi serial kannada climax episode update

ಸಾರಾಂಶ

Ninagagi Serial Climax Episode: ನಿನಗಾಗಿ ಧಾರಾವಾಹಿ ಮುಕ್ತಾಯ ಆಗಲಿದ್ದು, ಕೊನೆಯ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬ ಪ್ರಶ್ನೆ ಎದುರಾಗಬಹುದು. ಜೀವ ಹಾಗೂ ರಚನಾ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಸಿಗಲಿದೆಯಾ? 

ಕಲರ್ಸ್‌ ಕನ್ನಡ ವಾಹಿನಿಯ ನಿನಗಾಗಿ ಧಾರಾವಾಹಿಯು ( Ninagagi Serial ) ಅಂತ್ಯ ಆಗುತ್ತಿದೆ. ಹೌದು, ಇಂದು ಈ ಸೀರಿಯಲ್‌ನ ಕೊನೆಯ ಸಂಚಿಕೆ ಪ್ರಸಾರ ಆಗಲಿದೆ. 413 ಎಪಿಸೋಡ್‌ಗೆ ಈ ಸೀರಿಯಲ್‌ ಮುಕ್ತಾಯ ಆಗಲಿದೆ.

ಈ ಧಾರಾವಾಹಿ ಕಥೆ ಏನು?

ಜೀವ ಒಂದು ಫುಡ್‌ ಟ್ರಕ್‌ ನಡೆಸುತ್ತಿದ್ದನು. ರಚನಾ ಲೇಡಿ ಸೂಪರ್‌ ಸ್ಟಾರ್‌ ಆಗಿ ಮೆರೆಯುತ್ತಿದ್ದಳು. ರಚನಾಗೆ ಸಿಂಪಲ್‌ ಆಗಿರೋದು, ಮನೆಯಲ್ಲಿ ಗೃಹಿಣಿಯಾಗಿರೋಕೆ ಇಷ್ಟವೇ ಇಲ್ಲ. ಆದರೆ ಅವಳ ತಾಯಿ ಎಂದು ಮುಖವಾಡ ಹಾಕಿಕೊಂಡೋಳು, ಮಗಳ ಕೈಯಲ್ಲಿ ನಟನೆ ಮಾಡಿಸಿ, ದುಡ್ಡು ಮಾಡುತ್ತಿದ್ದಳು. ಇದು ಅವಳಿಗೆ ಇಷ್ಟವೇ ಇರಲಿಲ್ಲ. ಜೀವನಿಗೆ ಕೃಷ್ಣಾ ಎನ್ನುವ ಮಗಳಿದ್ದಳು. ಕೃಷ್ಣಾಗೂ, ರಚನಾಗೂ ಒಂದು ನಂಟು ಬೆಳೆಯುವುದು.

ಹೀಗಿರುವಾಗ ರಚನಾಗೆ ಮದುವೆ ಮಾಡಬೇಕು ಎಂದು ತಾಯಿ ವಜ್ರೇಶ್ವರಿ ರೆಡಿ ಆಗುತ್ತಾಳೆ. ರಚನಾಗೆ ಈ ಮದುವೆ ಇಷ್ಟವಿರೋದಿಲ್ಲ. ವಿಧಿಯು ಜೀವ ಹಾಗೂ ರಚನಾಳನ್ನು ಒಂದು ಮಾಡಿ ಮದುವೆ ಮಾಡಿಸುವುದು. ರಚನಾಗೆ ಜೀವನನ್ನು ಕಂಡರೆ ಇಷ್ಟ ಇರೋದಿಲ್ಲ, ಜೀವನಿಗೂ ರಚನಾ ಕಂಡರೆ ಇಷ್ಟವಿರೋದಿಲ್ಲ. ಇವರಿಬ್ಬರು ಹಾವು ಮುಂಗುಸಿ ಥರ ಕಿತ್ತಾಡುತ್ತಿರುತ್ತಾರೆ. ಆಮೇಲೆ ಈ ಜೋಡಿಗೆ ಲವ್‌ ಆಗುವುದು.

ಅದಾದ ಬಳಿಕ ಜೀವ ಇತಿಹಾಸ ತೆರೆದುಕೊಳ್ಳುವುದು. ಜೀವ ದೊಡ್ಡ ಮನೆತನಕ್ಕೆ ಸೇರಿದವನು, ಮೊದಲ ಪತ್ನಿ ಮಾಧುರಿಯ ಕೊಲೆ ರಹಸ್ಯದ ಬಗ್ಗೆ ಎಪಿಸೋಡ್‌ ಪ್ರಸಾರ ಆಗುವುದು. ರಚನಾ ತಾನೇ ಮಾಧುರಿಗೆ ಅಪಘಾತ ಮಾಡಿ ಸಾಯಿಸಿದ್ದೀನಿ ಅಂತ ಅಂದುಕೊಂಡಿರುತ್ತಾಳೆ. ಆದರೆ ವಾಸ್ತವದಲ್ಲಿ ಕೊಲೆಗಾರ ಯಾರು ಎನ್ನೋದು ರಿವೀಲ್‌ ಆಗಬೇಕು.

ಜೀವ ತಮ್ಮ ಕೂಡ ಆಸ್ತಿಗಾಗಿ ಮಾಡಬಾರದ ಕೆಲಸವನ್ನು ಮಾಡುತ್ತಾನೆ. ಇನ್ನೊಂದು ಕಡೆ ಜೀವ ದೊಡ್ಡಮ್ಮನ ಮಗಳು ದೇವಿ ಕೂಡ ಈ ಮನೆ ಹಾಳಾಗಲು ಪ್ರಯತ್ನಪಟ್ಟಿರುತ್ತಾಳೆ. ಇನ್ನು ಜೀವ ತಾಯಿ ಕೂಡ ಮನೆಯಲ್ಲಿ ಸೆರೆಯಾಳಾಗಿರುತ್ತಾಳೆ, ಅವಳ ಮಾನಸಿಕ ಆರೋಗ್ಯ ಹಾಳಾಗಲು ದೇವಿ ಇಲ್ಲಸಲ್ಲದ ಮೆಡಿಸಿನ್‌ ಕೊಡುತ್ತಿರುತ್ತಾಳೆ.

ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ?

ಮಾಧುರಿಯನ್ನು ಕೊಂದಿದ್ದು ದೇವಿ ಎನ್ನೋದು ರಿವೀಲ್‌ ಆಗುವುದು. ಇನ್ನು ಜೀವ ತಮ್ಮಂದಿರು ಕೂಡ ಒಳ್ಳೆಯವರಾಗುತ್ತಾರೆ. ಜೀವ ತಾಯಿ ಕೂಡ ರೂಮ್‌ನಿಂದ ಹೊರಗಡೆ ಬಂದು ಆರಾಮಾಗಿ ಇರುತ್ತಾಳೆ. ಒಟ್ಟಾರೆಯಾಗಿ ರಚನಾಳಿಂದ ಇಡೀ ಮನೆ ಮತ್ತೆ ಮೊದಲಿನ ಹಾಗೆ ಆಗುವುದು. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು. ಒಟ್ಟಿನಲ್ಲಿ ಜೀವ ತಂದೆ ಕನಸು ಕಂಡಂತೆ ಎಲ್ಲರೂ ಖುಷಿಯಿಂದ ಒಟ್ಟಾಗಿ ಬಾಳುತ್ತಾರೆ.

ಪಾತ್ರಧಾರಿಗಳು

ರಚನಾ ಪಾತ್ರದಲ್ಲಿ ನಟಿ ದಿವ್ಯಾ ಉರುಡುಗ ನಟಿಸಿದ್ದಾರೆ. ಈ ಹಿಂದೆ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಶೋನಲ್ಲಿ ಭಾಗವಹಿಸಿದ್ದರು. ಅದಾದಮೇಲೆ ಅವರು ಸಿನಿಮಾಗಳತ್ತ ಹೆಚ್ಚು ಮುಖ ಮಾಡಿದ್ದರು. ನಟ ರಿತ್ವಿಕ್‌ ಮಠದ್‌ ಕೂಡ ‘ಅನುರೂಪ’, ‘ಗಿಣಿರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ‘ಮಾರ್ನಮಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?