ಎರಡೂವರೆ ವರ್ಷಗಳಿಂದ ಟಾಪ್‌ 3 ಸ್ಥಾನದಲ್ಲಿದ್ದ Lakshmi Baramma Serial ಅಂತ್ಯ ಆಗ್ತಿರೋದು ಯಾಕೆ?

Published : Apr 06, 2025, 05:30 PM ISTUpdated : Apr 07, 2025, 10:53 AM IST
ಎರಡೂವರೆ ವರ್ಷಗಳಿಂದ ಟಾಪ್‌ 3 ಸ್ಥಾನದಲ್ಲಿದ್ದ Lakshmi Baramma Serial ಅಂತ್ಯ ಆಗ್ತಿರೋದು ಯಾಕೆ?

ಸಾರಾಂಶ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಕ್ತಾಯವಾಗಲಿದೆ ಎಂದು ವಾಹಿನಿ ಅಧಿಕೃತವಾಗಿ ತಿಳಿಸಿದೆ. ಟಾಪ್ 3 ಧಾರಾವಾಹಿಗಳಲ್ಲಿ ಇದೂ ಒಂದಾಗಿದ್ದು, TRP ಕಾರಣ ಅಥವಾ ಕಥೆ ಮುಂದುವರೆಸಲು ಸಾಧ್ಯವಾಗದ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಲಾವಿದರ ಡೇಟ್ಸ್ ಸಮಸ್ಯೆ ಮತ್ತು ಮುಖ್ಯ ಪಾತ್ರಧಾರಿಗಳ ಬೇರೆ ಪ್ರಾಜೆಕ್ಟ್‌ಗಳಲ್ಲಿನ ಬ್ಯುಸಿಯಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿದೆ ಎಂದು ವಾಹಿನಿಯೇ ಅಧಿಕೃತವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೆ ನೀಡಿದೆ. ಇದಕ್ಕೆ ಕಾರಣ ಏನಿರಬಹುದು ಎನ್ನೋದು ಎಲ್ಲರಿಗೂ ಕಾಡುತ್ತಿದೆ. ವಾಹಿನಿಯಲ್ಲಿ ಟಾಪ್‌ 3 ಧಾರಾವಾಹಿಗಳಲ್ಲಿ ʼಲಕ್ಷ್ಮೀ ಬಾರಮ್ಮʼ ಕೂಡ ಒಂದು. ಟಿಆರ್‌ಪಿ ಕಡಿಮೆ ಆದಾಗ ಸೀರಿಯಲ್‌ ಅಂತ್ಯ ಮಾಡಲಾಗುತ್ತೆ ಅಥವಾ ಕಥೆ ಇನ್ನೂ ಮುಂದುವರೆಸಲು ಬಾರದಿದ್ದಾಗ ಈ ರೀತಿ ಮಾಡೋದುಂಟು. 

ಸೀರಿಯಲ್‌ ಅಂತ್ಯ ಯಾಕೆ?
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಒಳ್ಳೆಯ ಕತೆ ಇತ್ತು, ಇನ್ನೂ ಸಾಕಷ್ಟು ವಿಷಯ ಹೇಳಬಹುದಿತ್ತು. ಆರಂಭದಲ್ಲಿ ಸಾಕಷ್ಟು ಕಥೆ ಎಳೆದು, ಈಗ ಫಾಸ್ಟ್‌ ಆಗಿ ಸಾಗುತ್ತಿರುವ ಹಾಗೆ ಕಾಣ್ತಿದೆ. ಕಥೆಗೆ ಒಂದು ಅಂತ್ಯ ಕೊಡಲೆಂದೇ ಈ ರೀತಿ ಮಾಡುತ್ತಿರೋದು ಸ್ಪಷ್ಟವಾಗಿ ಕಾಣ್ತಿದೆ. ಹಾಗಾದರೆ ಯಾಕೆ ಈ ನಿರ್ಧಾರ ತಗೊಂಡರು ಎನ್ನೋದು ಈಗ ಇರುವ ಪ್ರಶ್ನೆ. 

ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?

ಕಲಾವಿದರು ಬೇರೆ ಕಡೆ ಬ್ಯುಸಿ! 
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌ ಅವರು ತೆಲುಗು ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ತಿಂಗಳಲ್ಲಿ ಅವರು ಒಂದಷ್ಟು ದಿನ ಬೆಂಗಳೂರು, ಹೈದರಾಬಾದ್‌ ಅಂತ ಬ್ಯುಸಿ ಇರುತ್ತಾರೆ. ಇನ್ನೊಂದು ಕಡೆ ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ ಅವರು ಸಿನಿಮಾ ಮಾಡುತ್ತಿದ್ದು, ತಮ್ಮ ಸಿನಿಮಾದಲ್ಲಿ ಅವರೇ ಹೀರೋ, ಅವರೇ ನಿರ್ಮಾಪಕರು. ಹೀಗಾಗಿ ಕೆಲಸ ಜಾಸ್ತಿ ಇರುವುದು. ಇನ್ನುಳಿದಂತೆ ಬೇರೆ ಯಾವ ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಅಷ್ಟಾಗಿ ಬ್ಯುಸಿ ಆಂದತಿಲ್ಲ. 

ಏನಾಗಿರಬಹುದು?
ಬಹುಶಃ ಡೇಟ್‌ ಸಮಸ್ಯೆಯಿಂದ ಸೀರಿಯಲ್‌ ಮುಗಿಸುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಜಾಸ್ತಿ ಇದೆ. ಲೀಡ್‌ ಪಾತ್ರಧಾರಿಗಳು ಸೀರಿಯಲ್‌ನಿಂದ ಹೊರಗಡೆ ಬಂದರೆ, ಡೇಟ್‌ ಕಡಿಮೆ ಕೊಟ್ಟರೆ ಕತೆ ಚೆನ್ನಾಗಿ ಹೋಗೋದಿಲ್ಲ. ಈ ಧಾರಾವಾಹಿ ಶುರುವಾಗಿ ಎರಡೂವರೆ ವರ್ಷಗಳಾಯ್ತು. ಈಗ ಈ ಧಾರಾವಾಹಿಯಲ್ಲಿ ಲೀಡ್‌ ಪಾತ್ರಗಳನ್ನು ಬದಲಿಸೋದು ಸುಲಭ ಇಲ್ಲ. ಪಾತ್ರ ಬದಲಾದಕೂಡಲೇ ವೀಕ್ಷಕರು ಹೊಸ ಪಾತ್ರಕ್ಕೆ ಅಷ್ಟು ಸುಲಭವಾಗಿ ಹೊಂದಿಕೊಳ್ಳೋದಿಲ್ಲ. ಪಾತ್ರ ಬದಲಾವಣೆ ಮಾಡಿ ಸೀರಿಯಲ್‌ ಮುಂದುವರೆಸೋದಕ್ಕಿಂತ, ನಿಲ್ಲಿಸೋದು ಮುಖ್ಯ ಎಂದು ಕೂಡ ನಿರ್ಧಾರಕ್ಕೆ ಬರುತ್ತಾರೆ. ಈ ಧಾರಾವಾಹಿಯಲ್ಲಿ ಹೀಗೆ ಆಗಿರುವ ಸಾಧ್ಯತೆ ಜಾಸ್ತಿ ಇದೆ. ಆದರೆ ಈ ಬಗ್ಗೆ ವಾಹಿನಿಯಾಗಲೀ, ಕಲಾವಿದರಾಗಲೀ ಯಾವುದೇ ಮಾಹಿತಿ ಕೊಟ್ಟಿಲ್ಲ. 

ಶೀಘ್ರದಲ್ಲಿ ಅಂತ್ಯ ಕಾಣಲಿದೆ ಕಲರ್ಸ್ ಕನ್ನಡದ ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮೀ ಬಾರಮ್ಮ'…!

ಕಥೆ ಏನು?
ವೈಷ್ಣವ್‌ ಹಾಗೂ ಕೀರ್ತಿ ಪ್ರೀತಿಸಿದ್ದರೂ ಮದುವೆ ಆಗೋಕೆ ಆಗಿಲ್ಲ. ವೈಷ್ಣವ್‌ ತಾಯಿ ಕಾವೇರಿಯೇ ಇವರಿಬ್ಬರ ಪ್ರೀತಿಗೆ ಕೊಳ್ಳಿ ಇಟ್ಟಳು. ಇನ್ನೊಂದು ಕಡೆ ವೈಷ್ಣವ್‌ಗೆ ಲಕ್ಷ್ಮೀ ಜೊತೆ ಮದುವೆ ಮಾಡಿಸಿದಳು. ತನ್ನ ಮಗ ಕೈತಪ್ಪಿ ಹೋಗಬಾರದು ಎನ್ನೋ ಕಾರಣಕ್ಕೆ ಕಾವೇರಿ ಈ ರೀತಿ ಮಾಡಿದ್ದಳು. ಇನ್ನು ವೈಷ್ಣವ್‌ಗೆ ತಾಯಿ ಗುಣ ಏನು ಅಂತ ಗೊತ್ತಾಗಿಲ್ಲ. ಎಲ್ಲವನ್ನು ತಿಳಿದಿರುವ ಕೀರ್ತಿ ಈಗ ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕ್ಲೈಮ್ಯಾಕ್ಸ್‌ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಸೀರಿಯಲ್‌ ಮುಕ್ತಾಯ ಆಗುತ್ತಿರೋದು ಅನೇಕರಿಗೆ ಬೇಸರ ತಂದಿದೆ. 

ಪಾತ್ರಧಾರಿಗಳು
ವೈಷ್ಣವ್-‌ ಶಮಂತ್‌ ಬ್ರೋ ಗೌಡ
ಲಕ್ಷ್ಮೀ- ಭೂಮಿಕಾ ರಮೇಶ್‌
ಕೀರ್ತಿ-ತನ್ವಿ ರಾವ್‌
ಕಾವೇರಿ- ಸುಷ್ಮಾ ನಾಣಯ್ಯ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ