ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಟೆಸ್ಟ್‌: ಕಡಿಮೆ ಪಾಸಿಟಿವಿಟಿ!

Published : Nov 24, 2020, 07:13 AM ISTUpdated : Nov 24, 2020, 08:14 AM IST
ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಟೆಸ್ಟ್‌: ಕಡಿಮೆ ಪಾಸಿಟಿವಿಟಿ!

ಸಾರಾಂಶ

ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಟೆಸ್ಟ್‌: ಕಡಿಮೆ ಪಾಸಿಟಿವಿಟಿ| ಪ್ರತಿ ಲಕ್ಷ ಜನರಲ್ಲಿ 16360 ಮಂದಿಗೆ ಕೋವಿಡ್‌ ಪರೀಕ್ಷೆ| ಪಾಸಿಟಿವಿಟಿ ದರ ಶೇ.3.2ರಿಂದ ಶೇ.1.8ಕ್ಕೆ ಇಳಿಮುಖ| 

ನವದೆಹಲಿ(ನ.24): ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತಿಂಗಳ ಹಿಂದಿನವರೆಗೂ ಎರಡನೇ ಸ್ಥಾನ ಅಲಂಕರಿಸಿ ಆತಂಕ ಮೂಡಿಸಿದ್ದ ಕರ್ನಾಟಕದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ದೇಶದಲ್ಲೇ ಅತಿ ಹೆಚ್ಚು ಕೊರೋನಾ ಟೆಸ್ಟ್‌ಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಆದಾಗ್ಯೂ ಪಾಸಿಟಿವಿಟಿ ದರ ತೀರಾ ಕಡಿಮೆ ಇರುವುದು ಆಶಾದಾಯಕವಾಗಿದೆ.

ಮತ್ತೆ 3 ಅಂಕಿಗಿಳಿದ ಸೋಂಕಿತರ ಸಂಖ್ಯೆ : ಗುಣಮುಖರು ಏರಿಕೆ

6.11 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಪ್ರತಿ ಲಕ್ಷ ಜನರಲ್ಲಿ ಭಾನುವಾರ 16360 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ದೇಶದ ಯಾವುದೇ ರಾಜ್ಯದಲ್ಲೂ ಇಷ್ಟುಪರೀಕ್ಷೆ ಮಾಡಲಾಗಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿ 2.90 ಲಕ್ಷ ಜನರಿದ್ದು, ಪ್ರತಿ ಲಕ್ಷ ಜನರಿಗೆ ಸರಾಸರಿ 14769 ಪರೀಕ್ಷೆಗಳನ್ನು ಮಾಡಲಾಗಿದೆ. ಕೊರೋನಾ ಟೆಸ್ಟಿಂಗ್‌ನಲ್ಲಿ ಅದು 2ನೇ ಸ್ಥಾನದಲ್ಲಿದೆ.

ಕೊರೋನಾ ಟೆಸ್ಟ್‌ಗಳು ಅಧಿಕ ಪ್ರಮಾಣದಲ್ಲಿದ್ದರೂ, ಪಾಸಿಟಿವಿಟಿ ದರ ಕಡಿಮೆ ಇರುವುದು ಗಮನಾರ್ಹ. ಪ್ರತಿ 100 ಮಂದಿಗೆ ಕೊರೋನಾ ಟೆಸ್ಟ್‌ ಮಾಡಿದಾಗ ಆ ಪೈಕಿ ಎಷ್ಟುಮಂದಿಗೆ ಸೋಂಕು ದೃಢಪಡುತ್ತದೆ ಎನ್ನುವುದನ್ನು ಪಾಸಿಟಿವಿಟಿ ದರ ಎನ್ನಲಾಗುತ್ತದೆ. ಅ.26ರಿಂದ ನ.8ರ 14 ದಿನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.3.2ರಷ್ಟಿದ್ದ ಪಾಸಿಟಿವಿಟಿ ದರ ನ.8ರಿಂದ ನ.21ರವರೆಗಿನ 14 ದಿನಗಳ ಅವಧಿಯಲ್ಲಿ ಶೇ.1.8ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರತಿ 100 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕರ್ನಾಟಕದಲ್ಲಿ ಇಬ್ಬರಿಗಿಂತ ಕಡಿಮೆ ಜನರಲ್ಲಿ ಸೋಂಕು ದೃಢಪಡುತ್ತಿದೆ.

ಹೊಸ ಆಶಾಕಿರಣ; ಕೇವಲ 2 ಡೋಸ್‌ನಲ್ಲಿ ಆಕ್ಸಫರ್ಡ್ ಲಸಿಕೆ ಶೇ.70 ರಷ್ಟು ಪರಿಣಾಮಕಾರಿ!

ಆದರೆ ಇದೇ ಅವಧಿಯಲ್ಲಿ ಹಿಮಾಚಲದಲ್ಲಿ ಪಾಸಿಟಿವಿಟಿ ದರ ಶೇ.8.1ರಿಂದ ಶೇ.15.3ಕ್ಕೆ, ದೆಹಲಿಯಲ್ಲಿ ಶೇ.11.3ರಿಂದ ಶೇ.12.8ಕ್ಕೆ, ರಾಜಸ್ಥಾನದಲ್ಲಿ ಶೇ.9.1ರಿಂದ ಶೇ.11.1ಕ್ಕೆ, ಹರಾರ‍ಯಣದಲ್ಲಿ ಶೇ.8ರಿಂದ ಶೇ.10.5ಕ್ಕೆ, ಕೇರಳದಲ್ಲಿ ಶೇ.12.1ರಿಂದ ಶೇ.10ಕ್ಕೆ ಏರಿಕೆಯಾಗಿದೆ. ತನ್ಮೂಲಕ ಈ ರಾಜ್ಯಗಳು ಸದ್ಯದ ಮಟ್ಟಿಗೆ ಕೊರೋನಾ ಹಾಟ್‌ಸ್ಪಾಟ್‌ ಆಗಿವೆ.

ಅಸ್ಸಾಂ, ಬಿಹಾರದಲ್ಲಿ ಪಾಸಿಟಿವಿ ದರ ಶೇ.1ಕ್ಕಿಂತ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಕೆಲ ತಿಂಗಳ ಹಿಂದೆ ಶೇ.18ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇ.8ಕ್ಕೆ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹಾವಳಿ ಪ್ರಕಾರ 14 ದಿನಗಳ ಕಾಲ ಪಾಸಿಟಿವಿಟಿ ದರ ಶೇ.5ಕ್ಕಿಂತ ಮೇಲಿದ್ದರೆ ಅದನ್ನು ಅಪಾಯಕಾರಿ ವಲಯ ಎಂದು ಪರಿಗಣಿಸಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಕರ್ನಾಟಕ ಸುರಕ್ಷಿತ ವಲಯದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!