ಪುನೀತ್‌ ಪ್ರತಿಮೆ ಬಳಿ ಹಾಕಿದ್ದ ರಾಜಕೀಯ, ಧಾರ್ಮಿಕ ಕಟೌಟ್‌ ತೆರವುಗೊಳಿಸಿದ ಅಭಿಮಾನಿಗಳು

Published : Aug 05, 2023, 11:51 AM ISTUpdated : Aug 05, 2023, 11:53 AM IST
ಪುನೀತ್‌ ಪ್ರತಿಮೆ ಬಳಿ ಹಾಕಿದ್ದ ರಾಜಕೀಯ, ಧಾರ್ಮಿಕ ಕಟೌಟ್‌ ತೆರವುಗೊಳಿಸಿದ ಅಭಿಮಾನಿಗಳು

ಸಾರಾಂಶ

ನಗರದ ಹೃದಯ ಭಾಗವಾದ ಎನ್‌.ಆರ್‌. ವೃತ್ತದ ಬಳಿ ಇರುವ ಪುನೀತ್‌ ರಾಜಕುಮಾರ್‌ ಪ್ರತಿಮೆ ಸುತ್ತ ಯಾರು ಕಟೌಟ್‌ ಇತರ ಜಾಹಿರಾತುಗಳು ಹಾಕಬೇಡಿ ಎಂದು ಮನವಿ ಮಾಡಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪದೇ ಪದೇ ಕಟೌಟ್‌ ಹಾಕುತ್ತಿದ್ದು, ಹೀಗಾಗಿ ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದಿಂದ ಶುಕ್ರವಾರ ಕಟೌಟ್‌ ತೆರವುಗೊಳಿಸಲಾಗಿದೆ.

ಹಾಸನ (ಆ.5):  ನಗರದ ಹೃದಯ ಭಾಗವಾದ ಎನ್‌.ಆರ್‌. ವೃತ್ತದ ಬಳಿ ಇರುವ ಪುನೀತ್‌ ರಾಜಕುಮಾರ್‌ ಪ್ರತಿಮೆ ಸುತ್ತ ಯಾರು ಕಟೌಟ್‌ ಇತರ ಜಾಹಿರಾತುಗಳು ಹಾಕಬೇಡಿ ಎಂದು ಮನವಿ ಮಾಡಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪದೇ ಪದೇ ಕಟೌಟ್‌ ಹಾಕುತ್ತಿದ್ದು, ಹೀಗಾಗಿ ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದಿಂದ ಶುಕ್ರವಾರ ಕಟೌಟ್‌ ತೆರವುಗೊಳಿಸಲಾಗಿದೆ.

ಕೆಲ ತಿಂಗಳಷ್ಟೆಎನ್‌.ಆರ್‌.ವೃತ್ತದಲ್ಲಿ ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆ ಅನಾವರಣ ಮಾಡಲಾಗಿದ್ದು, ಈ ವೇಳೆ ಈ ಭಾಗದಲ್ಲಿ ಯಾರು ಜಾಹಿರಾತು ಹಾಕಬಾರದೆಂದು ಜಿಲ್ಲಾಧಿಕಾರಿ ಹಾಗೂ ನಗರಸಭೆಗೆ ಮನವಿ ನೀಡಿದಾಗ ಸಹಕಾರ ನೀಡಿದ್ದರು. ಆದರೆ ಮತ್ತೆ ಮತ್ತೆ ಈ ಭಾಗದಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳು ಹಾಕುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಹೀಗಾಗಿ ಇಲ್ಲಿ ಅಳವಡಿಸುವ ಕಟೌಟ್‌ಗಳನ್ನು ತೆರವು ಮಾಡುತ್ತಿದ್ದು, ಮುಂದೆ ಇದೇ ರೀತಿ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.

ಅತ್ತೆ ಸ್ಟ್ರಿಕ್ಟ್‌ ಆಗಿದ್ದರು ಬಜೆಟ್‌ ಹಿಡಿತದಲ್ಲಿರುತ್ತಿತ್ತು, ನಾನು ಅಪ್ಪು ತರ ಫುಲ್ ಫ್ರೀ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಡಾ.ಶಿವರಾಜಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ರತೀಶ್‌ ಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್‌ ಪ್ರತಿಮೆ ಆವರಣದಲ್ಲಿ ಯಾರು ಬ್ಯಾನರ್‌ ಹಾಕಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದರೂ ಗಮನಹರಿಸದೇ ಆಗಾಗ್ಗೆ ಬ್ಯಾನರ್‌ ಕಟೌಟ್‌ ಹಾಕುತ್ತಿರುವುದು ಬೇಸರದ ಸಂಗತಿ. ಈ ವಿಚಾರವಾಗಿ ಜಿಲ್ಲಾಧಿಕಾರಿ ಮತ್ತು ನಗರಸಭೆಯಿಂದಲೂ ಸೂಚನೆ ಕೊಡಲಾಗಿದ್ದರೂ ಮತ್ತೆ ಮತ್ತೆ ಹಾಕಲಾಗುತ್ತಿದೆ ಎಂದು ದೂರಿದರು. ದಯಮಾಡಿ ಯಾರು ಪ್ಲೆಕ್ಸ್‌ ಹಾಕಬೇಡಿ. ಮುಂದೆ ಕಟೌಟ್‌ ಹಾಕಿದರೆ ಪುನೀತ್‌ ಅಭಿಮಾನಿಗಳ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಅಭಿಮಾನಿ ಸಂಘದ ಶಂಕರ್‌, ಹಿರೆಮಗಳೂರು ರವಿ ಜೀವನ್‌, ಕುಮಾರ್‌ ಇತರರು ಉಪಸ್ಥಿತರಿದ್ದರು.

 

Puneeth Rajkumarಗೆ ಕೆಫೆ ತೆರೆಯೋ ಕನಸಿತ್ತು! ಅಶ್ವಿನಿ ಬಿಚ್ಚಿಟ್ಟ ಹೊಸ ಸಂಗತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್