ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!

ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!

Published : Apr 22, 2026, 12:22 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್​ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ. 

ಇತ್ತೀಚಿಗೆ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌ ನಲ್ಲಿ ಕುಲಕರ್ಣಿ ಅಂಡ್ ಗ್ಯಾಂಗ್​ನ ಇರಿಸಲಾಗಿದ್ದು, ಇದರ ಪಕ್ಕದಲ್ಲೇ ದರ್ಶನ್ ಸೆಲ್ ಕೂಡ ಇದೆ. ಅಚ್ಚರಿ ಅಂದ್ರೆ ವಿನಯ್ ಕುಲಕರ್ಣಿ ಪಾಲಿಗೆ ದರ್ಶನ್ ಅತ್ಯಾಪ್ತ ಆಗಿದ್ದವರು. ಒಬ್ಬರು ಅಪರಾಧಿ ಆದ್ರೆ ಇನ್ನೊಬ್ರು ಆರೋಪಿಯಾಗಿ ಜೈಲ್​ನಲ್ಲಿ ಮುಖಾಮುಖಿ ಆಗಿದ್ದಾರೆ.

ಕ್ವಾರಂಟೈನ್‌ ಸೆಲ್​ನಲ್ಲಿ ಕುಲಕರ್ಣಿ.. ಪಕ್ಕದಲ್ಲಿ ದರ್ಶನ್; ಜೈಲಿನಲ್ಲಿ ಮುಖಾಮುಖಿ ಆದ ದರ್ಶನ್ & ಕುಲಕರ್ಣಿ..!
ಇತ್ತೀಚಿಗೆ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಗಿತ್ತು. ಕುಲಕರ್ಣಿ ಮತ್ತು ಇತರ 16 ಜನ ಅಪರಾಧಿಗಳನ್ನ ಪರಪ್ಪನ ಅಗ್ರಗಾರಕ್ಕೆ ತರಲಾಗಿದೆ. ದರ್ಶನ್ ಇರುವ ಸೆಲ್​ ಪಕ್ಕದ ಕ್ವಾರಂಟೈನ್‌ ಸೆಲ್​ನಲ್ಲಿ  ಅವರನ್ನ ಇರಿಸಲಾಗಿದೆ.

ದರ್ಶನ್ ಮತ್ತು ಕುಲಕರ್ಣಿ ಆಪ್ತರಾಗಿದ್ದವರು. ದರ್ಶನ್ ರೀತಿಯೇ ವಿನಯ್ ಕುಲಕರ್ಣಿ ಕೂಡ ಫಾರ್ಮ್ ಹೌಸ್ ಮಾಡಿ, ಹಲವು ಪ್ರಾಣಿಗಳನ್ನ ಸಾಕಿಕೊಂಡಿದ್ರು. ಕುಲಕರ್ಣಿ ಫಾರ್ಮ್​ಗೆ ಹಿಂದೊಮ್ಮೆ ದರ್ಶನ್ ವಿಸಿಟ್ ಮಾಡಿದ್ರು. ಆಗ ಖುದ್ದು ಕುಲಕರ್ಣಿ ನಾನು ದರ್ಶನ್ ಸ್ಹೇಹಿತರು ಅಂತ ಹೇಳಿಕೊಂಡಿದ್ರು.

ಈಗ ನೋಡಿದ್ರೆ ಈ ಸ್ನೇಹಿತರು ಜೈಲಿನಲ್ಲಿ ಮುಖಾಮುಖಿ ಆಗೋ ಸ್ಥಿತಿ ಬಂದುಬಿಟ್ಟಿದೆ. ಒಬ್ರು ಅಪರಾಧಿಯಾದ್ರೆ, ಇನ್ನೊಬ್ರು ಆರೋಪಿ. ದೋಸ್ತಿಗಳು ಜೈಲಿನಲ್ಲಿ ಅಕ್ಕ ಪಕ್ಕದ ಸೆಲ್​ನಲ್ಲಿ ಕಳೆಯುವ ಸ್ಥಿತಿ ಬಂದಿದೆ.

ಕುಲಕರ್ಣಿಗೆ ಶಿಕ್ಷೆ.. ದರ್ಶನ್​ಗೆ ಹೆಚ್ಚಾಯ್ತು ಢವ ಢವ..!
ಹೌದು ವಿನಯ್ ಕುಲಕರ್ಣಿ, ಆಡಳಿತ ಪಕ್ಷದಲ್ಲಿ ಶಾಸಕರಾಗಿದ್ದು ಕೂಡ ಕಾನೂನಿನ ಎದುರು ತಪ್ಪಿಸಿಕೊಳ್ಳೋದಕ್ಕೆ ಆಗಲಿಲ್ಲ. ಯೊಗೇಶ್ ಗೌಡ ಕೊಲೆ ಆರೋಪದಲ್ಲಿ ವಿನಯ್ ಌಂಡ್ ಗ್ಯಾಂಗ್​ಗೆ ಜೀವಾವಧಿ ಶಿಕ್ಷೆಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಘೋಷಣೆ ಮಾಡಿದೆ.

ಕುಲಕರ್ಣಿಯಂತೆ ದರ್ಶನ್ ಮೇಲೂ ಕೊಲೆ ಆರೋಪ ಇದೆ. ಸೇಮ್ ಯೋಗೇಶ್ ಗೌಡ ಕೇಸ್​ನಲ್ಲಿ ಆದಂತೆ ರೇಣುಕಾಸ್ವಾಮಿ ಕೊಲೆ ಬಳಿಕ , ಬೇರೆಯವರನ್ನ ಠಾಣೆಗೆ ಸರೆಂಡರ್ ಮಾಡಿಸಲಾಗಿತ್ತು. ಆದ್ರೆ ಪೊಲೀಸರು ಅದರ ಹಿಂದಿನ ಸೂತ್ರಧಾರಿಗಳನ್ನ ಹಿಡಿದು ಜೈಲಿಗಟ್ಟಿದ್ರು.

ಜೈಲು ಸೇರಿ 5 ತಿಂಗಳಲ್ಲಿ ದರ್ಶನ್​ಗೆ ಹೈಕೋರ್ಟ್ ಬೇಲ್ ಕೊಟ್ಟಿತ್ತು. ಆದ್ರೆ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅಪೀಲ್ ಮಾಡಿ, ಬೇಲ್​ನ ರದ್ದು ಮಾಡಿಸ್ತು. ಇದೀಗ 7 ತಿಂಗಳಿಂದ ದರ್ಶನ್ ಪರಪ್ಪನ ಅಗ್ರಹಾರ ವಾಸಿ ಆಗಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್​​ ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್​ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ. ಒಟ್ನಲ್ಲಿ ಪಕ್ಕದ ಸೆಲ್​ನಲ್ಲಿರೋ ಪಕ್ಕಾ ಸ್ನೇಹಿತನಿಂದ ದರ್ಶನ್ ಆತಂಕ ಹೆಚ್ಚಾಗಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
Read more