ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

Published : Jan 14, 2025, 02:21 PM IST
ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

ಸಾರಾಂಶ

ರಕ್ಷಿತಾ ಪ್ರೇಮ್ ಸಂಕ್ರಾಂತಿಯನ್ನು ಕೆಡಿ ಚಿತ್ರತಂಡದೊಂದಿಗೆ ಆಚರಿಸಿದರು. ಗೆಳೆಯ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ ಎಂದರು. ದರ್ಶನ್ ಚೇತರಿಕೆಗೆ ಸಮಯ ಬೇಕು, ಅವರ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಆಶಿಸಿದರು. ರಕ್ಷಿತಾ, ದರ್ಶನ್ ತಮ್ಮ ಕುಟುಂಬದವರಂತೆ, ಯಾವಾಗಲೂ ಪರಸ್ಪರ ಬೆಂಬಲವಿದೆ ಎಂದರು. ವಿಜಯಲಕ್ಷ್ಮಿ ಬಲಿಷ್ಠ ಮಹಿಳೆ ಎಂದೂ ರಕ್ಷಿತಾ ತಿಳಿಸಿದರು.

ನಟಿ ರಕ್ಷಿತಾ ಪ್ರೇಮ್ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಕೆಡಿ ಚಿತ್ರತಂಡದ ಜೊತೆ ಆಚರಿಸುತ್ತಿದ್ದಾರೆ. ಈ ವೇಳೆ ತಮ್ಮ ಅಪ್ತ ಗೆಳೆಯ ದರ್ಶನ್ ಬಗ್ಗೆ ರಕ್ಷಿತಾ ಮಾತನಾಡಿದ್ದಾರೆ. ಈ ವರ್ಷ ಗೆಳೆಯನ ಜೀವನದಲ್ಲಿ ಸಂಭ್ರಮ ಮನೆ ಮಾಡಲಿ ಎಂದು ಆಶಿಸಿದ್ದಾರೆ.'ಸಡನ್ ಆಗಿ ಹುಷಾರಾಗಲು ಅಗಲ್ಲ. ತುಂಬಾ ಬೆನ್ನು ನೋವಿನಿಂದ ನರಳುತ್ತಿದ್ದಾನೆ. ನಾನು ಹೇಳಿದಂತೆ ಎಲ್ಲವೂ ಸಮಯ ತೆಗೆದುಕೊಳ್ಳುತ್ತದೆ ಹೀಗಾಗಿ ಚೇತರಿಸಿಕೊಳ್ಳಲು ದರ್ಶನ್‌ಗೂ ಸಮಯ ಬೇಕಾಗುತ್ತದೆ. ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹೊಸ ವರ್ಷ ಸಂಕ್ರಾಂತಿ ಪ್ರಯುಕ್ತ ದರ್ಶನ ಜೀವನದಲ್ಲಿ ಪ್ರತಿಯೊಂದು ಒಳ್ಳೆಯದ್ದೇ ಆಗಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಕ್ಷಿತಾ ಮಾತನಾಡಿದ್ದಾರೆ. 

'ತುಂಬಾ ವರ್ಷಗಳ ಹಿಂದೆ ನಡೆದ ವಿಚಾರ ಹೇಳುತ್ತಿದ್ದೀನಿ. ನನ್ನ ತಂದೆ ಅವರ ಮನೆಯಲ್ಲಿ ದೊಡ್ಡಮ್ಮ ಇದ್ದರು, ಅವರು ಏನೋ ಒಂದು ಚೂರು ಡಿಪ್ರೆಶನ್‌ಗೆ ಬಂದು ಅವರಿಗೆ ಅವರೇ ಬೆಂಕಿ ಹಚ್ಚಿಕೊಂಡಿದ್ದರು. ಆ ಸಮದಲ್ಲಿ ತಂದೆ ನನಗೆ ಕರೆ ಮಾಡಿಲ್ಲ ಮೊದಲು ಕಾಲ್ ಮಾಡಿದ್ದೇ ದರ್ಶನ್‌ಗೆ. ಆಗ ದರ್ಶನ್ ಬಳಿ ಮಾರುತಿ 800 ಕಾರಿತ್ತು ಅದರಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ದು ಅವನೇ. ಇವತ್ತಿನಿಂದ ಅಲ್ಲ ನನ್ನ ತಂದೆಗೆ ಕಷ್ಟ ಬಂದಾಗಿನಿಂದ ದರ್ಶನ್ ನಮ್ಮ ಜೊತೆಗಿದ್ದಾನೆ. ದರ್ಶನ್ ಬೇರೆ ಅಲ್ಲ ನಮ್ಮ ಫ್ಯಾಮಿಲಿನೇ. ನನಗೆ ಏನಾದರೂ ತೊಂದರೆ ಆದರೆ ಖಂಡಿತಾ ದರ್ಶನ್ ಬರುತ್ತಾರೆ ನನ್ನ ಪರವಿರುತ್ತಾನೆ. ಹಾಗೆಯೇ, ದರ್ಶನ್‌ಗೆ ಏನೇ ಆಗಲಿ ಅವನ ಪರ ನಾನಿದ್ದೀನಿ. ಇನ್ನು ಮುಂದೆ ಅವನಿಗೆ ಏನೂ ಆಗಲ್ಲ ಆಗಬಾರದು ಕೂಡ' ಎಂದು ರಕ್ಷಿತಾ ಹೇಳಿದ್ದಾರೆ. 

ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು

'ದರ್ಶನ್ ಜೊತೆ ಹಲವಾರು ಸಲ ನೇರವಾಗಿ ಮಾತನಾಡಲು ಆಗಲ್ಲ ಆದರೆ ವಿಜಿ ಮುಖಾಂತರ ಮಾತನಾಡುತ್ತೀನಿ. ಅವನ ಜೀವನದಲ್ಲಿ ಎಲ್ಲಾ ಸರಿ ಹೋಗುತ್ತಿದೆ ಅನಿಸುತ್ತದೆ. ದರ್ಶನ್ ಮೇಲೆ ಆರೋಪ ಬಂದಾಗ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅಣ್ಣನ ದಾರಿಯಲ್ಲಿ ಸಾಗುತ್ತಿದ್ದೀನಿ ಏಕೆಂದರೆ ಎಲ್ಲದರಲ್ಲೂ ನಾನು ಪಾಸಿಟಿವ್ ಬಗ್ಗೆ ಮಾತ್ರ ಮಾತನಾಡುತ್ತೀನಿ. ದರ್ಶನ್‌ನ ಭೇಟಿ ಮಾಡಿದಾಗ ನಾನು ಏನೂ ಮಾತನಾಡಲಿಲ್ಲ ತಬ್ಬಿಕೊಂಡು ಬಂದೆ. ದರ್ಶನ್‌ ಬಗ್ಗೆ ನಾನು ಪಾಸಿಟಿವ್ ಮಾತ್ರ ಮಾತನಾಡುವುದು. ದರ್ಶನ್ ಬಗ್ಗೆ ಹಲವರು ಮಾತನಾಡುತ್ತಾರೆ ಆದರೆ ಅಕ್ಕಪಕ್ಕದಲ್ಲಿ ಇರುವವರಿಗೆ ಮಾತ್ರ ಅವನ ನೋವು ಗೊತ್ತಾಗುತ್ತದೆ. ವಿಜಯಲಕ್ಷ್ಮಿ ತುಂಬಾ ಸ್ಟ್ರಾಂಗ್ ಮಹಿಳೆ' ಎಂದಿದ್ದಾರೆ ರಕ್ಷಿತಾ. 

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ