'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಚಿತ್ರಕ್ಕೆ ಪುನೀತ್‌ ಗಾಯನ!

Suvarna News   | Asianet News
Published : Mar 18, 2021, 10:35 AM ISTUpdated : Mar 18, 2021, 10:50 AM IST
'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಚಿತ್ರಕ್ಕೆ ಪುನೀತ್‌ ಗಾಯನ!

ಸಾರಾಂಶ

ಮತ್ತೊಮ್ಮೆ ಹೊಸಬರ ಚಿತ್ರಕ್ಕೆ ಹಾಡುವ ಮೂಲಕ ಪುನೀತ್‌ರಾಜ್‌ಕುಮಾರ್‌, ತಮ್ಮ ಗಾಯನ ಪಯಣ ಮುಂದುವರಿಸಿದ್ದಾರೆ. 

ಇತ್ತೀಚೆಗೆ ಅವರು ಹಾಡಿದ್ದು ‘ಅಲ್ಲೇಡ್ರಾಅಲ್ಲೇ ಬಹುಮಾನ’ ಚಿತ್ರಕ್ಕಾಗಿ. ತ್ರಿವೇಣಿ ಕೃಷ್ಣ ಹಾಗೂ ಶೌರ್ಯ ಜೋಡಿಯಾಗಿ ಅಭಿನಯಿಸಿರುವ ಚಿತ್ರವಿದು.

ಈ ಚಿತ್ರದಲ್ಲಿ ಬರುವ ‘ನಾಚಿಕೆಯು ಇನ್ನು ನನ್ನೆದುರು ಏಕೆ ಈ ಪ್ರಾಯ ಚಾಟಿ ಬೀಸಲು’ ಎಂದು ಸಾಗುವ ಹಾಡಿಗೆ ಪುನೀತ್‌ ರಾಜ್‌ಕುಮಾರ್‌ ಧ್ವನಿಯಾಗಿದ್ದಾರೆ. ಅಪ್ಪು ಕಂಠದಲ್ಲಿ ಈ ರೊಮ್ಯಾಂಟಿಕ್‌ ಹಾಡು ಚೆನ್ನಾಗಿ ಮೂಡಿ ಬಂದಿದ್ದು, ಕೇಳುಗರಿಗೆ ತುಂಬಾ ಇಷ್ಟವಾಗುತ್ತದೆಂಬ ನಂಬಿಕೆ ಚಿತ್ರತಂಡದ್ದು. ಈ ಹಾಡನ್ನು ಕುಲುಮನಾಲಿ, ಹಿಮಾಚಲ ಪ್ರದೇಶದ ಸುತ್ತಮುತ್ತ ಕಿರಣ್‌ ಹಂಪಾಪುರ ಹಾಗೂ ಸತೀಶ್‌ ರಾಜೇಂದ್ರನ್‌ ಛಾಯಾಗ್ರಾಹಣದಲ್ಲಿ, ನಾಗರಾಜ್‌ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಪಂಚ್‌ ಶಕ್ತಿ ಕಿರುಚಿತ್ರ ಶೀಘ್ರದಲ್ಲೇ ಬಿಡುಗಡೆ!

ರತ್ನತೀರ್ಥ ಈ ಚಿತ್ರದ ನಿರ್ದೇಶಕರು. ಬಿಜೆ ಪ್ರಶಾಂತ್‌ ಈ ಚಿತ್ರ ನಿರ್ಮಿಸಿದ್ದಾರೆ. ರಘು ಶಾಸ್ತ್ರಿ ಸಾಹಿತ್ಯ ಬರೆದಿದ್ದು, ವಿಜಯರಾಜ್‌ ಸಂಗೀತ ನೀಡಿದ್ದಾರೆ. ಶಂಕರ್‌ ಅಶ್ವತ್‌್ಥ, ರಘು ರಾಮನಕೊಪ್ಪ, ಕುರಿಬಾಂಡ್‌ ರಂಗಸ್ವಾಮಿ, ವಿಜಯ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?