
ಈ ಸಾಫ್ಟ್ವೇರ್ ಹೇಗೆ ಕೆಲಸ ಮಾಡುತ್ತದೆ?
- ಈ ಹೊಸ ಸಾಫ್ಟ್ವೇರ್ ಒಳಗೊಂಡ ಉಪಕರಣವನ್ನು ಚಿತ್ರಮಂದಿರದಲ್ಲಿರುವ ಸ್ಪೀಕರ್ಗಳ ಬಳಿ ಅಳವಡಿಸಲಾಗುತ್ತದೆ. ಚಿತ್ರಮಂದಿರದ ಸೀಟು, ಅದರ ವಿಸ್ತೀರ್ಣ, ಸೌಂಡ್ ವ್ಯಾಪ್ತಿಯನ್ನು ಆಧರಿಸಿ ಈ ಡಿವೈಸ್ಗಳನ್ನು ಅಳವಡಿಸಬೇಕು.
- ಈ ಡಿವೈಸ್ನಿಂದಾಗಿ ಯಾರಾದರೂ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದರೂ ಆಡಿಯೋ ಕೇಳಿಸುವುದಿಲ್ಲ. ಕೇವಲ ದೃಶ್ಯಗಳನ್ನು ಮಾತ್ರ ಸೆರೆ ಹಿಡಿಯಬಹುದು.
ಫೇಸ್ಬುಕ್ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!
- ದೃಶ್ಯಗಳನ್ನು ಸೆರೆ ಹಿಡಿಯಲು ಮೊಬೈಲ್ ಕ್ಯಾಮೆರಾ ಆನ್ ಮಾಡಿದರೆ ಆ ಮಾಹಿತಿಯನ್ನು ತಕ್ಷಣ ತಲುಪಿಸುವಂತಹ ಕ್ಯಾಮೆರಾ ಕೂಡ ಈ ಹೊಸ ಸಾಫ್ಟ್ವೇರ್ ಜತೆ ಅಳವಡಿಸಲಾಗುತ್ತದೆ. ಹಾಗಾಗಿ ಯಾರಾದರೂ ಕದ್ದು ರೆಕಾರ್ಡ್ ಮಾಡಿದರೂ ತಕ್ಷಣ ತಿಳಿಯುತ್ತದೆ.
- ಸದ್ಯಕ್ಕೆ ಪ್ರಾಯೋಗಿಕವಾಗಿ ಬೆಂಗಳೂರಿನ ಚಿತ್ರಮಂದಿರಗಳಿಗೆ ಈ ಹೊಸ ಸಾಫ್ಟ್ವೇರ್ ಡಿವೈಸ್ಗಳನ್ನು ಅಳವಡಿಸಲಾಗುತ್ತದೆ.
- ಪ್ರಯೋಗ ಯಶಸ್ವಿಯಾದರೆ ಮುಂದೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೂ ಈ ಸಾಫ್ಟ್ವೇರ್ ಬರಲಿದೆ.
-ಈ ಸಾಫ್ಟ್ವೇರ್ ಐಡಿಯಾ ಕೊಟ್ಟಿದ್ದು ರಾಹುಲ್ ರೆಡ್ಡಿ. ಇಂಜಿನಿಯರ್ ಅಶ್ವಿನ್ ಈ ಸಾಫ್ಟ್ವೇರ್ ಡೆವಲಪ್ ಮಾಡಿದ್ದಾರೆ. ಕಾಂಟ್ರಪೈನ್ ಸಂಸ್ಥೆ ಈ ಸಾಫ್ಟ್ವೇರ್ ಸಿದ್ಧಪಡಿಸಿದೆ.
ಇವರ ಹೆಸರು ಕೇಳಿದ್ರೆ ಸೂಪರ್ ಸ್ಟಾರ್ ಗಳೇ ಹೆದರುತ್ತಾರೆ!
ನ.26ರಂದು ಬಿಡುಗಡೆ
ಈ ಹೊಸ ತಂತ್ರಜ್ಞಾನ ನ.26ರಂದು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಚಾಲನೆ ನೀಡಲಿದ್ದಾರೆ. ಖ್ಯಾತ ಉದ್ಯಮಿ ನಂದೀಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ನಿರ್ಮಾಪಕ ಜಯಣ್ಣ, ಉಮಾಪತಿ ಶ್ರೀನಿವಾಸಗೌಡ, ಬಾ ಮ ಹರೀಶ್, ನಿರ್ದೇಶಕರುಗಳಾದ ರಾಜೇಂದ್ರಸಿಂಗ್ಬಾಬು, ದಿನಕರ ತೂಗುದೀಪ, ಬಿಆರ್ ಕೇಶವ, ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ಸಾರಾ ಗೋವಿಂದು, ಸಾಧು ಕೋಕಿಲಾ ಉಪಸ್ಥಿತರಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.