
ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಾದ 'ಜೆಂಟಲ್ಮನ್','ಕೆಜಿಎಫ್'ಗೆ ಸಾಹಿತ್ಯ ರಚಿಸಿದ ಕಿನ್ನಾಳ್ ರಾಜ್, ಮೊದಲ ಬಾರಿಗೆ ಕತೆ, ಚಿತ್ರಕಥೆ, ಸಂಭಾಷಣೆ ಬರೆಯುವುವ ಜೊತೆಗೆ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
‘ಹಿಟ್ಲರ್’ಸಿನಿಮಾ ಬಿಡುಗಡೆ ಆಗಸ್ಟ್ನಲ್ಲಿ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊನ್ನೆಯಷ್ಟೇ ಶಿವರಾಜ್ಕುಮಾರ್ 'ಹಿಟ್ಲರ್' ಸಿನಿಮಾದ ತುಣುಕುಗಳನ್ನು ವೀಕ್ಷಿಸಿ, ‘ಈ ಚಿತ್ರ ಆಗಸ್ಟ್ನಲ್ಲಿ ಬಿಡುಗಡೆಯಾಗಲಿ,’ ಎಂದು ಹೇಳುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಅನಾಥ ಹುಡುಗನೊಬ್ಬನ ಕಾನೂನು ಬಾಹಿರ ಚಟುವಟಿಕೆಗಳು, ಅವನ ದರ್ಬಾರ್ ಅನ್ನು ಈ ಚಿತ್ರ ಬಿಚ್ಚಿಡಲಿದೆ. ಭಾವನಾತ್ಮಕ ಸನ್ನಿವೇಶಗಳು, ಹಾಸ್ಯವೂ ಸೇರಿಸಿಕೊಂಡಿರುವ ಪಕ್ಕಾ ಮಾಸ್ ಚಿತ್ರ ಇದಾಗಿದೆ.
ಕೆಲವು ತಿಂಗಳ ಹಿಂದೆ ನಟ ಶ್ರೀಮುರಳಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಲೋಹಿತ್ ನಾಯಕ, ವರ್ಧನ್ ತೀರ್ಥಹಳ್ಳಿ ಚಿತ್ರದ ವಿಲನ್. ನಾಯಕಿಯಾಗಿ ಸಸ್ಯ ನಟಿಸಿದ್ದಾರೆ. ಬಲರಾಜವಾಡಿ, ವೈಭವ್ ನಾಗರಾಜ್, ವಿಜಯ್ ಚಂಡೂರ್, ಶಶಿಕುಮಾರ್, ಗಣೇಶ್ ರಾವ್ ನಟಿಸಿದ್ದಾರೆ. ಸಂಗೀತ ಆಕಾಶ್ ಪರ್ವ ಅವರದ್ದು. ಮಮತಾ ಲೋಹಿತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.