ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?

By Shriram BhatFirst Published Mar 31, 2024, 10:08 PM IST
Highlights

ಸಿನಿಮಾರಂಗಕ್ಕೆ ತಮ್ಮನ್ನು ಪರಿಚಯಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆ ಆರತಿ ಮದುವೆಯಾದ ಬಳಿಕ ನಟಿಯ ಸಿನಿಮಾ ಪಯಣಕ್ಕೆ ದೊಡ್ಡ ಬ್ರೇಕ್ ಬಿದ್ದುಹೋಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಆರತಿ-ಪುಟ್ಟಣ್ಣ ಮಧ್ಯೆ ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ..

ರಂಗನಾಯಕಿ, ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು, ಕಸ್ತೂರಿ ನಿವಾಸ, ಸತಿ ಸಕ್ಕೂಬಾಯಿ, ಶುಭ ಮಂಗಳ, ಬೆಕ್ಕಿನ ಕಣ್ಣು ಹೀಗೆ ಕಷ್ಟಪಟ್ಟು ಲೆಕ್ಕಹಾಕುವಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಆರತಿಯನ್ನು (Arathi)ಕನ್ನಡ ಚಿತ್ರರಂಗ ಎಂದೂ ಮರೆಯಲಾಗದು. ಒಬ್ಬೊಬ್ಬರ ವೈಯಕ್ತಿಕ ಬದುಕು ಒಂದೊಂದು ರೀತಿ, ಆದರೆ ಬಣ್ಣದ ಬದುಕಿನಲ್ಲಿ ಅಥವಾ ಬೇರೆ ಕ್ಷೇತ್ರಗಳಲ್ಲಿ ಮಾಡಿರುವ ಅವರ ಸಾಧನೆ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಇಂದು ನಟಿ ಆರತಿ ಆಧ್ಯಾತ್ಮದ ಹಾದಿಯಲ್ಲಿದ್ದು ಸಮಾಜ ಸೇವೆಯಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಾರೆ ಎನ್ನಲಾಗಿದೆ. 

ಆರತಿ ಜೀವನ ಹಲವು ಏರಪೇರುಗಳ ಪ್ರಯಾಣ. ಮೇರು ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ (Puttanna Kangal)ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಮಿಂಚಿನ ಸಂಚಾರ ತಂದ ನಟಿ ಆರತಿ. ಅಂದು ಸಹಜ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ಆರತಿ, ಆ ಕಾಲದ ಸ್ಟಾರ್ ನಟಿಯಾಗಿ ಮೆರೆದವರು. ಡಾ ರಾಜ್‌ಕುಮಾರ್ (Dr Rajkumar),ಡಾ ವಿಷ್ಣುವರ್ಧನ್ (Dr Vishnuvardhan) ಅನಂತ್‌ ನಾಗ್, ಶಂಕರ್ ನಾಗ್, ಅಂಬರೀಷ್, ರಾಮಕೃಷ್ಣ ಸೇರಿದಂತೆ ಹಲವು ನಟರೊಡನೆ ಜೋಡಿಯಾಗಿ ತೆರೆಯ ಮೇಲೆ ಮಿಂಚಿದ್ದವರು ನಟಿ ಆರತಿ. 

ಅಮೃತಂ ಕೊಟ್ಟ ಕಾಟಕ್ಕೆ ಬೇಸತ್ತು ಅತ್ಮಹತ್ಯೆ ಮಾಡಿಕೊಂಡರೇ ನಟಿ ಮಂಜುಳಾ; ಅಂಥ ದುರಂತ ಸಾವಿನ ರಹಸ್ಯವೇನು?

ಸಿನಿಮಾರಂಗಕ್ಕೆ ತಮ್ಮನ್ನು ಪರಿಚಯಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆ ಆರತಿ ಮದುವೆಯಾದ ಬಳಿಕ ನಟಿಯ ಸಿನಿಮಾ ಪಯಣಕ್ಕೆ ದೊಡ್ಡ ಬ್ರೇಕ್ ಬಿದ್ದುಹೋಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಆರತಿ-ಪುಟ್ಟಣ್ಣ ಮಧ್ಯೆ ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ, ಕಾಲಕಳೆದಂತೆ ಮನಸ್ತಾಪ ಬುಗಿಲೆದ್ದು, ಇಬ್ಬರ ನಡುವೆ ಅಂತರ ಹೆಚ್ಚುತ್ತಾ ಹೋಯಿತು. ಕಾಲಕಳೆದಂತೆ ಆರತಿ ಬಾಳಲ್ಲಿ ಇನ್ನೊಬ್ಬ ವ್ಯಕ್ತಿಯ ಆಗಮನವಾಯಿತು. ಅವರೇ ಅಂದಿನ ಶಿಕ್ಷಣ ಮಂತ್ರಿ ಎಂ ರಘುಪತಿ (M Raghupathi).

ಸರಿತಾ ಬಿಟ್ಟರೆ ಸುಧಾರಾಣಿ ನನ್ನ ಫೇವರೆಟ್ ನಟಿ; ಹೀಗಂದಿದ್ರು ಕನ್ನಡದ ಮೋಸ್ಟ್ Top ಸ್ಟಾರ್ ನಟ!

ಆರತಿ ಬಾಳಲ್ಲಿ ಬಂದ ಹೊಸ ವ್ಯಕ್ತಿಯಿಂದ ಪುಟ್ಟಣ್ಣ ಕಣಗಾಲ್ ಹಾಗೂ ಆರತಿ ದಾಂಪತ್ಯ ಸಂಪೂರ್ಣವಾಗಿ ಮುರಿದುಬಿತ್ತು. ಆ ವ್ಯಕ್ತಿ ಬೇರಾರೂ ಅಲ್ಲ, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣ ಮಂತ್ರಿಯಾಗಿದ್ದ ಎಂ ರಘುಪತಿಯವರು. ಆರತಿ ಹಾಗು ಎಂ ರಘುಪತಿಯವರ ಸ್ನೇಹ ಪುಟ್ಟಣ್ಣರಿಂದ ಆರತಿ ದೂರವಾಗಲು, ಪುಟ್ಟಣ್ಣ ಖಿನ್ನತೆಗೆ ಜಾರಲು ಕಾರಣವಾಯಿತು ಎನ್ನಲಾಗಿದೆ. 

ಶರತ್ ಸಿಗಲಿಲ್ಲ, ಗಂಗೂಲಿಯೂ ಕೈ ಹಿಡಿಯಲಿಲ್ಲ; 'ಮನೆಹಾಳಿ' ಪಟ್ಟದ ನಟಿ ನಗ್ಮಾ ಮುಂದೇನ್ ಮಾಡ್ತಾರಂತೆ?

ಬಳಿಕ, ಸ್ವಲ್ಪ ಕಾಲದಲ್ಲೇ ಪುಟ್ಟಣ್ಣ ಕಣಗಾಲ್ ತೀರಿಕೊಂಡರು. ಪುಟ್ಟಣ್ಣ ಕಾಲವಾದ ಬಳಿಕ ಆರತಿ-ರಘುಪತಿ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿದ್ದರು ಎನ್ನಲಾಗಿದೆ. ಆದರೆ, ಅವರಿಬ್ಬರ ಸ್ನೇಹ ಹೆಚ್ಚು ಕಾಲ ಬಾಳಲಿಲ್ಲ. ತದನಂತರ, ನಟಿ ಆರತಿ ಚಂದ್ರಶೇಖರ್ ದೇಸಾಯ್‌ಗೌಡರ್ ಎಂಬವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟ್ಲ್ ಆಗಿಬಿಟ್ಟರು. ಆ ಸಮಯದಲ್ಲಿ ಆರತಿ ಸಿನಿಮಾ ಪ್ರಯಾಣಕ್ಕೆ ಪೂರ್ಣ ವಿರಾಮ ಬಿದ್ದಿತ್ತು. ಅಷ್ಟರಲ್ಲಾಗಲೇ ಆರತಿ ನಿಧಾನಕ್ಕೆ ಆಧ್ಯಾತ್ಮದತ್ತ ವಾಲುತ್ತಿದ್ದರು ಎನ್ನಲಾಗಿದೆ.

'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?

ಆರತಿಗೆ ಯಶಸ್ವನಿ ಎಂಬ ಮಗಳಿದ್ದಾಳೆ. ಸದ್ಯ ನಟಿ ಆರತಿ ಸಂಸಾರ ಅಮೆರಿಕಾದಲ್ಲೇ ಇದೆ ಎನ್ನಲಾಗಿದೆ. ಆದರೆ, ಆರತಿ ಈಗ ಹೆಚ್ಚಾಗಿ ಆಧ್ಯಾತ್ಮಿಕ ನೆಲೆಯಲ್ಲಿ ಜೀವನ ಸಾಗಿಸುತ್ತಿದ್ದು, ಬದುಕಲ್ಲಿ ಶಾಂತಿ-ನೆಮ್ಮದಿ ಕಂಡುಕೊಂಡಿದ್ದಾರಂತೆ. ಕೋಲಾರದ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಹಲವರ ಬದುಕಿಗೆ ಆರತಿ ಆಧಾರವಾಗಿದ್ದಾರೆ.

ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?

ಸದ್ಯ ಆರತಿ ಯಾವುದೇ ಪ್ರಚಾರದಿಂದ ಬಹುದೂರವಿದ್ದು, ಸಿನಿರಂಗದವರ ಜತೆ ಯಾವುದೇ ಬಾಂಧವ್ಯ ಇಟ್ಟುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ, ಸಾಮಾಜಿಕ ಸೇವೆಯಲ್ಲಿ, ದೀನರಿಗೆ ದಾನಮಾಡುವಲ್ಲಿ ಆರತಿ ಹೆಚ್ಚಾಗಿ ನಿರತರಾಗಿದ್ದಾರೆ ಎಂಬ ಮಾಹಿತಿಯಿದೆ.

click me!