
ಬೆಂಗಳೂರು (ಮಾ. 24): ಐಪಿಎಲ್ ಪಂದ್ಯ ಶುರುವಾದ ಆರಂಭದಲ್ಲೇ ಆರ್ ಸಿಬಿ ಸೋತು ಬೇಸರದಲ್ಲಿದ್ದರೇ ಪಡ್ಡೆಹುಲಿ ಚಿತ್ರ ತಂಡ ಮಾತ್ರ ಆರ್ ಸಿಬಿ ಬಗ್ಗೆ ಹಾಡೊಂದನ್ನು ಬರೆದಿದೆ.
ಬಾಲಿವುಡ್ ’ಕ್ವೀನ್’ ತಿರಸ್ಕರಿಸಿದ ಈ ಐದು ಚಿತ್ರಗಳು ಸೂಪರ್ ಹಿಟ್
ಐಪಿಎಲ್ ಹೋಗಲಿ ಆರ್ ಸಿಬಿ ಬೀಳಲಿ ಈ ಸಲ ಕಪ್ ನಮ್ದೆ ಎಂಬ ವಿಡಿಯೋ ಸಾಂಗ್ ವೊಂದನ್ನು ಬಿಡುಗಡೆ ಮಾಡಿದೆ. ಚೂರು ಚೂರಾಗಿದೆ ಎನ್ನುವ ಶೀರ್ಷಿಕೆಯಲ್ಲಿ ಈ ಹಾಡು ಶುರುವಾಗುತ್ತದೆ. ಐಪಿಎಲ್ ಹೋಗಲಿ ಆರ್ ಸಿಬಿ ಬೀಳಲಿ ಈ ಸಲ ಕಪ್ ನಮ್ದೆ ಎಂದು ನಾಯಕ ನಾಯಕಿಗೆ ಹೇಳುತ್ತಾನೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿ ಆರ್ ಬಾಬಿ ಈ ಹಾಡನ್ನು ಹಾಡಿದ್ದಾರೆ.
ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ರಿವೀಲ್!
ಈ ಸಾಂಗಿನಲ್ಲಿ ನಾಯಕ ಶ್ರೇಯಸ್ ಹಾಗೂ ನಾಯಕಿ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ನೃತ್ಯ ಸಂಯೋಜನೆ ಮಾಡಿದವರು ಜಾನಿ ಮಾಸ್ಟರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.