ಪಂಚಭಾಷಾ ಧಾರಾವಾಹಿ 'ಜ್ಯೋತಿ'ಯಲ್ಲಿ ಕನ್ನಡತಿ ಮೇಘಶ್ರೀ!

Suvarna News   | Asianet News
Published : Aug 01, 2021, 09:10 AM ISTUpdated : Aug 01, 2021, 09:29 AM IST
ಪಂಚಭಾಷಾ ಧಾರಾವಾಹಿ 'ಜ್ಯೋತಿ'ಯಲ್ಲಿ ಕನ್ನಡತಿ ಮೇಘಶ್ರೀ!

ಸಾರಾಂಶ

ತಮಿಳು ಧಾರಾವಾಹಿ ಲೋಕಕ್ಕೆ ಕಾಲಿಟ್ಟ 'ಇವಳು ಸುಜಾತ' ನಟಿ ಮೇಘಶ್ರೀ. 

'ನಾಗಕನ್ನಿಕೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘಶ್ರೀ 'ಇವಳು ಸುಜಾತ' ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮೇಘಶ್ರೀ ಇದೀಗ ತಮಿಳು ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ತಮಿಳಿನಲ್ಲಿ ಚಿತ್ರೀಕರಣವಾಗುತ್ತಿರುವ 'ಜ್ಯೋತಿ' ಧಾರಾವಾಹಿಯಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕನ್ನಡ, ತೆಲುಗು, ಮಲೆಯಾಳಂ ಮತ್ತು ಬೆಂಗಾಲಿ ಭಾಷೆಗೆ ಡಬ್ ಮಾಡಲಾಗುತ್ತದೆ. ರಾಣಿಯಾಗಿ ಮತ್ತು ನಾಗಕನ್ನಿಕೆ ಪಾತ್ರದಲ್ಲಿ ಮೇಘ ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಮತ್ತು ತಂಡ ಮೆಚ್ಚಿಕೊಂಡ ಮೇಘಶ್ರೀ ಧಾರಾವಾಹಿಗಾಗಿ ಕತ್ತಿ ಫೈಟ್ ನಂತಹ ಸ್ಟಂಟ್‌ಗಳನ್ನು ಮಾಡಿದ್ದಾರೆ. 

ನನ್ನನ್ನು ಹಿಂಬಾಲಿಸಬೇಡಿ, ನಾನು ಕಳದೋಗಿರುವೆ; ಕಿರುತೆರೆ ನಟಿ ಮೇಘಶ್ರೀ ಮನದಾಳದ ಮಾತು!

'ವಾರ್ಡ್ ನಂಬರ್ 11' ಮತ್ತು 'ಮನಸ್ಸಾಗಿದೆ' ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ಮೇಘ 'ಓಲ್ಡ್‌ಮಾಂಕ್' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದರ ಜೊತೆಗೆ ಹೆಸರಿಡದ ಭೋಜ್‌ಪುರಿ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಮೂಲಕ ಭೋಜ್‌ಪುರಿ ಸಿನಿ ಇಂಡಸ್ಟ್ರಿಗೂ ಎಂಟ್ರಿ ಕೊಡುತ್ತಿದ್ದಾರೆ. ಒಂದೇ ಸಮಯಕ್ಕೆ ತಮಿಳು ಹಾಗೂ ಭೋಜಪುರಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮೇಘಶ್ರೀ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?