ಸಾಧು ಒಬ್ಬರು ಗಂಗಾ ನೀರು ಕೊಟ್ಟಮೇಲೆ ತಾಯಿ ನೆಮ್ಮದಿಯಾಗಿ ಉಸಿರುಬಿಟ್ಟರು: ದುನಿಯಾ ವಿಜಯ್

Published : Feb 02, 2024, 04:43 PM IST
ಸಾಧು ಒಬ್ಬರು ಗಂಗಾ ನೀರು ಕೊಟ್ಟಮೇಲೆ ತಾಯಿ ನೆಮ್ಮದಿಯಾಗಿ ಉಸಿರುಬಿಟ್ಟರು: ದುನಿಯಾ ವಿಜಯ್

ಸಾರಾಂಶ

ವಾರಣಾಸಿಯಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಟ.....

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತಾ ಭೀಮಾ ಸಿನಿಮಾ ತಯಾರಿಯಲ್ಲಿದೆ. ನಟ ಮತ್ತು ನಿರ್ದೇಶನ ಮಾಡುತ್ತಿರುವ ದುನಿಯಾ ವಿಜಯ್ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಕೊಡುವುದರಲ್ಲಿ ಅನುಮಾನವಿಲ್ಲ. ಸಿನಿಮಾ ಕೆಲಸವಾಗಿ ವಿಜಯ್ ಊರೂರು ಸುತ್ತಾಡುತ್ತಿದ್ದಾರೆ. ತಮ್ಮ ಸಿನಿಮಾ ಕೆಲಸ ಅಲ್ಲದೆ ಹಿರಿಮಗಳು ಮೋನಿಕಾ ವಿಜಯ್‌ರನ್ನು ಕೂಡ ಲಾಂಚ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಹಲವು ಶೈಲಿಯಲ್ಲಿ ಫೋಟೋಶೂಟ್ ನಡೆದಿದೆ. 

ಕೆಲವು ದಿನಗಳ ಹಿಂದೆ ದುನಿಯಾ ವಿಜಯ್ ವಾರಣಾಸಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸದ್ದು ಮಾಡಿತ್ತು. ಮಣಿಕರ್ಣಿಕಾ ಬಳಿ ವಿಜಯ್ ಏನು ಮಾಡುತ್ತಿದ್ದಾರೆ ಎಂದು ಹಲವು ಪ್ರಶ್ನಿಸಿದ್ದರು. 'ನನ್ನಲ್ಲೂ ಆಧ್ಯಾತ್ಮಿಕವಿದೆ, ನನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ತಿಳಿದಿದೆ' ಎಂದು ವಿಜಯ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.

ಖೈದಿಗಳನ್ನು ಬಿಡುಗಡೆ ಮಾಡಿಸಿದ್ದು ಪ್ರಚಾರಕ್ಕೆ ಅಲ್ಲ: ದುನಿಯಾ ವಿಜಯ್

'ನನ್ನ ತಾಯಿಯ ಕೊನೆ ದಿನಗಳು ಬಹಳ ಕಷ್ಟವಾಗಿತ್ತು, ಉಸಿರಾಡುವುದಕ್ಕೂ ಕಷ್ಟ ಪಡುತ್ತಿದ್ದರು. 12 ದಿನಗಳ ನರಳಾಟದ ನಂತರ ಒಬ್ಬರು ಸಾಧು ಬಂದು ಗಂಗಾ ನೀರನ್ನು ಕೊಟ್ಟರು. ಅದನ್ನು ಕುಡಿದು ಮರು ದಿನವೇ ನೆಮ್ಮದಿಯಾಗಿ ಉಸಿರುಬಿಟ್ಟರು. ಈ ರೀತಿ ಮಿರಾಕಲ್‌ಗಳನ್ನು ಹೇಗೆ ವಿವರಿಸುವುದು? ಆಕೆಯ ನೆನಪುಗಲ್ಲಿ ನಾನು ಈ ಸಲ ವಾರಣಾಸಿಗೆ ಪ್ರಯಾಣ ಮಾಡಿ ಗಂಗಾ ನದಿಯಲ್ಲಿ ಮುಳಿಗಿ ಬಂದೆ' ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ನೀನು ಯಾರಾದರೆ ನನಗೇನು? ಯೋಗ್ಯತೆ ಉಳಿಸಿಕೊಳ್ಳಬೇಕು; ಮಕ್ಕಳ ಬಗ್ಗೆ ದುನಿಯಾ ವಿಜಯ್

ಮಣಿಕರ್ಣಿಕಾ ಘಾಟ್‌ನಲ್ಲಿ ಸಾಧುಗಳು ಅಘೋರಿಗಳ ಸಮ್ಮುಖದಲ್ಲಿ ಧ್ಯಾನ ಮಾಡಿದ್ದಾರೆ ದುನಿಯಾ ವಿಜಯ್. 'ಪವಿತ್ರವಾದ ಜಾಗದಲ್ಲಿ ತುಂಬಾ ಎನರ್ಜಿ ಫೀಲ್ ಅಗುತ್ತದೆ. ಅಲ್ಲಿಂದ ಬರುತ್ತಿದ್ದಂತೆ ಫುಲ್ ಎನರ್ಜಿಯಿಂದ ಬಂದು ಕೆಲಸಗಳನ್ನು ಶುರು ಮಾಡುತ್ತಿರುವೆ. ನನ್ನ ಕೆಲಸ ವಿಚಾರಗಳಲ್ಲಿ ಚೆನ್ನಾಗಿ ನಡೆಯುತ್ತಿದೆ' ಎಂದಿದ್ದಾರೆ ವಿಜಯ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?