ʼಬೆಳ್ತಂಗಡಿಯಲ್ಲಿ 346 ಅಸಹಜ ಸಾವಾಗಿದೆ- ನಟ ಚೇತನ್‌ ಅಹಿಂಸ ಸ್ಫೋಟಕ ಹೇಳಿಕೆ!

Published : Mar 12, 2025, 12:28 PM ISTUpdated : Mar 12, 2025, 12:30 PM IST
ʼಬೆಳ್ತಂಗಡಿಯಲ್ಲಿ 346  ಅಸಹಜ ಸಾವಾಗಿದೆ- ನಟ ಚೇತನ್‌ ಅಹಿಂಸ ಸ್ಫೋಟಕ ಹೇಳಿಕೆ!

ಸಾರಾಂಶ

dharmasthala soujanya case Updates: ಧರ್ಮಸ್ಥಳದಲ್ಲಿ ಸೌಜನ್ಯ ಅವರ ಸಾವಿಗೆ ನ್ಯಾಯ ಸಿಗಬೇಕು ಎಂಬ ಕೂಗು ಶುರು ಆಗಿದೆ. ಈ ಬಗ್ಗೆ ಚೇತನ್‌ ಅಹಿಂಸ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದು, ಸ್ಪೋಟಕ ಮಾಹಿತಿ ನೀಡಿದ್ದಾರೆ. 

ಧರ್ಮಸ್ಥಳದಲ್ಲಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಕುಮಾರಿ ಸೌಜನ್ಯ ಅವರ ಅತ್ಯಾಚಾರ, ಕೊಲೆ ಪ್ರಕರಣ ನಡೆದು ಹದಿನಾಲ್ಕು ವರ್ಷಗಳು ಕಳೆದಿವೆ. ಈ ಕೊಲೆ, ಅತ್ಯಾಚಾರ ಮಾಡಿದೋರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ದಶಕಗಳಿಂದ ಈ ಕೇಸ್‌ ಬಗ್ಗೆ ಹೋರಾಟ, ತನಿಖೆಗಳು ನಡೆಯುತ್ತಿವೆ. ಇತ್ತೀಚೆಗೆ ಸಮೀರ್‌ ಎಂಡಿ ಎನ್ನುವವರು ಧೂತ ಯೂಟ್ಯೂಬ್‌ ಚಾನೆಲ್‌ನಲ್ಲಿ ʼಊರಿಗೆ ದೊಡ್ಡವರಾದವರು ಕೊಲೆ ಮಾಡಿದರಾ?ʼ ಎನ್ನುವ ಪ್ರಶ್ನೆಯಡಿ ಒಂದು ವಿಡಿಯೋ ಅಪ್‌ಲೋಡ್‌ ಮಾಡುತ್ತಾರೆ. ಈ ವಿಡಿಯೋ ಹನ್ನೆರಡು ದಿನಕ್ಕೆ 12 ಮಿಲಿಯನ್‌ ವೀಕ್ಷಣೆ ಮಾಡಿದೆ ಎಂದರೆ ಎಷ್ಟು ಸಂಚಲನ ಮೂಡಿಸಿರಬಹುದು ಎಂದು ಒಮ್ಮೆ ಲೆಕ್ಕ ಹಾಕಿ. ಈಗ ಈ ಬಗ್ಗೆ ʼಆ ದಿನಗಳುʼ ಖ್ಯಾತಿಯ ನಟ ಚೇತನ್‌ ಅಹಿಂಸ ಅವರು ಮಾತನಾಡಿದ್ದಾರೆ.

ಚೇತನ್‌ ಅಹಿಂಸ ಅವರು ಹೇಳಿದ್ದೇನು? 
“12 ದಿನದ ಹಿಂದೆ ಧರ್ಮಸ್ಥಳದ ಸೌಜನ್ಯ ಕುರಿತು ಒಂದು ಒಳ್ಳೆಯ ವಿಡಿಯೋ ರಿಲೀಸ್‌ ಆಗಿದೆ. ನಾನು ಸೌಜನ್ಯ ಅವರ ತಾಯಿಯ ಜೊತೆ ಮಾತನಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲ ಪ್ರಕರಣಗಳು ಕನೆಕ್ಟ್‌ಆಗಿದೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಬೆಳ್ತಂಗಡಿಯಲ್ಲಿ 346 ಅಸಹಜ ಸಾವು ಆಗಿವೆ. ಯಾರ ಮೇಲೆ ಆರೋಪ ಬಂದಿದೆಯೋ ಅವರಿಗೆ ಹಣಬಲ, ರಾಜಕೀಯ ಬಲ, ಧರ್ಮ ಬಲ, ಜಾತಿ ಬಲ, ತೋಳ್ಬಲವೂ ಇದೆ. ಇವರ ವಿರುದ್ಧ ಫೈಟ್‌ಮಾಡಬೇಕಿದೆ. ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿ ಮುಂದೆ ಯಾವುದೂ ಕೂಡ ನಡೆಯೋದಿಲ್ಲ” ಎಂದು ಚೇತನ್‌ ಅಹಿಂಸ ಅವರು ಹೇಳಿದ್ದಾರೆ. 

ರಜನೀಕಾಂತ್‌ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್‌!

ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ 
“Article 19 ಪ್ರಕಾರ ನಮಗೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಬಳ್ಳಾರಿ ಪೊಲೀಸರು ಯುಟ್ಯೂಬರ್‌ ಸಮೀರ್‌ ಅವರ ವಿರುದ್ಧ ಸ್ವಯಂ ದೂರು ದಾಖಲಿಸಿದ್ದರು. ಈ ಹಕ್ಕು ಕಳೆದುಕೊಂಡಾಗಲೇ ನಮಗೆ ಇದರ ಮಹತ್ವ ಗೊತ್ತಾಗುತ್ತದೆ. ಇನ್ನು ಹೈಕೋರ್ಟ್‌ಈ ದೂರು ರದ್ದು ಮಾಡಿರೋದು ಒಳ್ಳೆಯ ಬೆಳವಣಿಗೆ. ಪ್ರಭಾವಿಗಳಿಗೆ ಎಷ್ಟು ಬೆಂಬಲ ಸಿಗ್ತಿದೆ ಎಂದು ನಿಮಗೂ ಗೊತ್ತಿದೆ. ನಾವೆಲ್ಲರೂ ಸೇರಿ ಈ ಪ್ರಕರಣಕ್ಕೆ ನ್ಯಾಯ ಕೊಡಲು ಹೋರಾಡೋಣ, ಬೇಕಿದ್ದರೆ ಜೈಲಿಗೆ ಹೋಗೋಕೂ ರೆಡಿ” ಎಂದು ಚೇತನ್‌ ಅಹಿಂಸ ಅವರು ಹೇಳಿದ್ದಾರೆ. 

ಕಾವೇರುವಂತೆ ಟ್ವೀಟ್ ಮಾಡೋ ಚೇತನ್ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕೂಲ್ ಕೂಲ್‌!

ನ್ಯಾಯದ ಪರ ಕೆಲಸ ಮಾಡಿ 
“ಸಿದ್ದರಾಮಯ್ಯನವರೇ, ಬಸವ ತತ್ವ ಅಂತೀರಾ, ಸಂವಿಧಾನ ಅಂತೀರಾ. ಆದರೆ ಆರ್ಟಿಕಲ್‌ 19 ಎತ್ತಿಹಿಡಿಯಿರಿ. ಇಂದು ದೊಡ್ಡ ಪ್ರಮಾಣದಲ್ಲಿ ಪೊಲೀಸ್‌ ಇಲಾಖೆ ಸುಧಾರಣೆ ಆಗಬೇಕು, ನ್ಯಾಯದ ಪರ ಕೆಲಸ ಮಾಡಬೇಕು” ಎಂದು ಚೇತನ್‌ ಅಹಿಂಸ ಅವರು ಮನವಿ ಮಾಡಿದ್ದಾರೆ. 

2012 ಅಕ್ಟೋಬರ್‌ 9ರಂದು ಸೌಜನ್ಯ ಅತ್ಯಾಚಾರ, ಕೊಲೆಯಾಗಿತ್ತು. ಸಮೀರ್‌ ಪರವಾಗಿ ಅನೇಕ ಯುಟ್ಯೂಬರ್‌ಗಳು ಮಾತನಾಡುತ್ತಿದ್ದು, ಈ ಕೇಸ್‌ಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. 


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ