Simple Suni: ಗಣೇಶ್ ಅಭಿನಯದ 'ಸಖತ್' ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟ ಸುಖಾಂತ್ಯ

Suvarna News   | Asianet News
Published : Nov 26, 2021, 11:49 PM IST
Simple Suni: ಗಣೇಶ್ ಅಭಿನಯದ 'ಸಖತ್' ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟ ಸುಖಾಂತ್ಯ

ಸಾರಾಂಶ

ಚಿತ್ರದಲ್ಲಿ ಕುರುಡ ಅನ್ನೋ ಪದ ಪ್ರಯೋಗ ಮಾಡಿದ್ದಾರೆ ಅದು ಸರಿಯಲ್ಲ. ಕುರುಡ ಅನ್ನೋ ಪದ ಬೇಗ ಜನರಿಗೆ ತಲುಪುತ್ತೆ ಅಂತ ಬಳಸಿದ್ದಾರೆ. ಅಂಧ, ದೃಷ್ಟಿ ವಿಶೇಷ ಚೇತನ ರೀತಿಯ ಪದಗಳನ್ನು ಬಳಸಬೇಕು ಎಂದು ಸಮಿತಿ ಅಧ್ಯಕ್ಷ ಮಧುಗಿರಿ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು (ನ.26): ನಿರ್ದೇಶಕ ಸಿಂಪಲ್​ ಸುನಿ (Simple Suni) ಮತ್ತು  ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಅಭಿನಯದ 'ಸಖತ್' (Sakath) ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟ ಸುಖಾಂತ್ಯವಾಗಿದೆ. ಹೌದು! 'ಸಖತ್' ಚಿತ್ರದಲ್ಲಿ ಅಂಧರಿಗೆ ಅವಮಾನ ಮಾಡಲಾಗಿದೆ ಎಂದು  ಸಿನಿಮಾ ಪ್ರದರ್ಶನಕ್ಕೆ ಸ್ಟೇ (Stay) ತರಲು ಅಂಧರ ಅಸೋಸಿಯೇಷನ್ (Blind Association) ಹೊರಟಿತ್ತು. ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಕ್ಷಮೆ (Forgiveness) ಯಾಚಿಸಿ ಅಂಧರ ಸಮುದಾಯಕ್ಕೆ ಸಿನಿಮಾ ತೋರಿಸಿ ಅನಂತರ ಅಂಧರ ಸಂಘದ ಸದಸ್ಯರ ಜೊತೆ ಸುದ್ದಿಗೋಷ್ಠಿಯನ್ನು ನಡೆಸಿದ್ದರು.

ಸಖತ್' ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯದ ಅಂಧರ ವಿಮೋಚನಾ ಸಮಿತಿ ಸದಸ್ಯರು, ನಮಗೆ ಸಿನಿಮಾ ತೋರಿಸಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದ್ದಾರೆ. ಇನ್ನು ಎಷ್ಟು ವರ್ಷ ಅಂತ ನಮ್ಮ ಸಮುದಾಯವನ್ನು ಹೀನಾಯವಾಗಿ ನೋಡ್ತಿರಾ? ಚಿತ್ರದಲ್ಲಿ ನಾಯಕನ ಪಾತ್ರವನ್ನು ತೋರಿಸಿರೋದು ನಮಗೆ ಖುಷಿ ಆಯ್ತು. ನಮ್ಮಲ್ಲಿ ಸಾಕಷ್ಟು ಸಾಧಕರಿದ್ದಾರೆ. ನಮ್ಮ ಕುರಿತು‌ ಸಿನಿಮಾ ಮಾಡುವಾಗ ಎಚ್ಚರ ಇರಬೇಕು ಅನ್ನೋದು ನಮ್ಮ ಕಳಕಳಿ. ಚಿತ್ರದಲ್ಲಿ 'ಕುರುಡ' ಅನ್ನೋ ಪದ ಪ್ರಯೋಗ ಮಾಡಿದ್ದಾರೆ ಅದು ಸರಿಯಲ್ಲ. ಕುರುಡ ಅನ್ನೋ ಪದ ಬೇಗ ಜನರಿಗೆ ತಲುಪುತ್ತೆ ಅಂತ ಬಳಸಿದ್ದಾರೆ. ಅಂಧ, ದೃಷ್ಟಿ ವಿಶೇಷ ಚೇತನ ರೀತಿಯ ಪದಗಳನ್ನು ಬಳಸಬೇಕು ಎಂದು ಸಮಿತಿ ಅಧ್ಯಕ್ಷ ಮಧುಗಿರಿ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

ನಡೆದಿದ್ದೇನು?: 'ಸಖತ್' ಸಿನಿಮಾ ಒಬ್ಬ ಅಂಧನ ಸುತ್ತ ಸುತ್ತುವ ಕಥೆ. ಅಂಧನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ್ದು, ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ. ಇಂದು ಚಿತ್ರ ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಸಿನಿಮಾ ಪ್ರದರ್ಶನಕ್ಕೆ ಸ್ಟೇ ತರಲು ಅಂಧರ ಅಸೋಸಿಯೇಷನ್ ಹೊರಟಿತ್ತು. ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ (ಸುನಿ) ಈ ಬಗ್ಗೆ ಪತ್ರ ಬರೆದು ಕ್ಷಮೆ ಯಾಚಿಸಿದ್ದರು. 'ಇದು ಅಂಧರ ಕುರಿತಾದ ಸಿನಿಮಾ, ಇದರಲ್ಲಿ ತಪ್ಪಾಗಿದ್ದರೆ, ನಿಮ್ಮ ಮನ ನೋಯಿಸುವ ವಿಷಯ ಇದ್ದರೆ ತಿದ್ದಿಕೊಳ್ಳುತ್ತೇವೆ. ಸಿನಿಮಾ ಬಿಡುಗಡೆ ಮುಂದುವರೆಸಲು ಅನುವು ಮಾಡಿಕೊಡಿ. ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಮ್ಮ ಚಿತ್ರತಂಡ ಹಾಗೂ ಚಿತ್ರದ ಅಭಿಮಾನಿಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ವಿನಂತಿಸಿಕೊಳ್ಳುತ್ತೇನೆ ಈ ಮೂಲಕ ಭರವಸೆ ನೀಡುತ್ತೇನೆ' ಎಂದು ನಿರ್ದೇಶಕ ಸುನಿ ಪತ್ರದಲ್ಲಿ ತಿಳಿಸಿದ್ದರು.

ಇನ್ನು ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಗಣೇಶ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಣೇಶ್​ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗಿದ್ದು, ನಿಶಾ ವೆಂಕಟ್​ ಕೋನಂಕಿ ಮತ್ತು ಸುಪ್ರಿತ್​ ಬಂಡವಾಳ ಹಾಕಿದ್ದಾರೆ. 

Sakath Song Release: ರ್‍ಯಾಪ್‌ ಹಾಡಿಗೆ ಗೋಲ್ಡನ್ ಸ್ಟೆಪ್ಸ್ ಹಾಕಿದ ಗಣೇಶ್

'ಚಮಕ್' ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದ ಗಣಿ-ಸುನಿ ಈ ಬಾರಿ 'ಸಖತ್' ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾ ಟೀಸರ್‌ಗೆ (Teaser) ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ಕಚಗುಳಿ ಇಡುವ ಡೈಲಾಗ್​ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಹಾಗೇ ಚಿತ್ರದ ಹಾಡುಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜನೆ, ಶಾಂತ್​ ಕುಮಾರ್​ ಸಂಕಲನ ಮತ್ತು ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ 'ಸಖತ್'​ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ