25 ವರ್ಷದ ಸಂಭ್ರಮ; ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್‌ನಿಂದ ಸುದೀಪ್‌ಗೆ ಅಭಿನಂದನೆ!

Kannadaprabha News   | Asianet News
Published : Feb 08, 2021, 09:16 AM ISTUpdated : Feb 08, 2021, 09:45 AM IST
25 ವರ್ಷದ ಸಂಭ್ರಮ; ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್‌ನಿಂದ ಸುದೀಪ್‌ಗೆ ಅಭಿನಂದನೆ!

ಸಾರಾಂಶ

ನಟ ಕಿಚ್ಚ ಸುದೀಪ್‌ ಅವರು ತಮ್ಮ 25 ವರ್ಷಗಳ ಸಿನಿಮಾ ಪ್ರಯಾಣದ ಸವಿ ನೆನಪಿನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿಕೊಂಡರು.

ಭಾನುವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸುದೀಪ್‌ ಅವರು, ಕಳೆದ 25 ವರ್ಷಗಳ ಸಿನಿ ಪಯಣವನ್ನು ನೆನಪಿಸಿಕೊಂಡರು. ತಮ್ಮ ಮೊದಲ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮೊದಲ ಶೋ ಕಂಡ ಖುಷಿಯಿಂದ ಹಿಡಿದು ಇಂದಿನ ಬುಜ್‌ರ್‍ ಖಲೀಫಾವರೆಗೂ ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ಹೇಳಿದರು. ಜೊತೆಗೆ ಈ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬೆಳವಣಿಗೆಯ ಪ್ರತಿ ಹಂತದಲ್ಲೂ ಕೈ ಹಿಡಿಯುತ್ತಿರುವ ಚಿತ್ರೋದ್ಯಮ, ಪ್ರೇಕ್ಷಕರು, ಮಾಧ್ಯಮಗಳು ಹಾಗೂ ಸ್ನೇಹಿತರು ಇವರೆಲ್ಲರೂ ನನ್ನ 25 ವರ್ಷದ ಸಿನಿಮಾ ಪಯಣದಲ್ಲಿ ಪಾಲುದಾರರು ಎಂದು ತಿಳಿಸಿದರು.

ದುಬೈನ ಬುರ್ಜ್‌ ಖಲೀಫಾದಲ್ಲಿ ಕನ್ನಡ ಧ್ವಜ: ಕಿಚ್ಚ ಸಿನಿ ಜರ್ನಿಗೆ 25 ವರ್ಷ 

ಈ ಸಂದರ್ಭದಲ್ಲಿ ನಟ ಸುದೀಪ್‌ ಅವರನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕರಾದ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ‘ವಿಕ್ರಾಂತ್‌ ರೋಣ’ ಚಿತ್ರತಂಡ, ಸುದೀಪ್‌ ಅವರ ಆತ್ಮೀಯ ಸ್ನೇಹಿತರು, ಚಿತ್ರರಂಗದವರು ಉಪಸ್ಥಿತರಿದ್ದರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಕನ್ನಡ ಕಲಾ ತಿಲಕ ಗೌರವ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?