ಯಶ್‌ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಗೆ ತಿರುಗೇಟು ಕೊಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಪರ ನಿಂತ ಕನ್ನಡಿಗರು!

Published : Apr 02, 2025, 01:34 PM ISTUpdated : Apr 02, 2025, 02:37 PM IST
ಯಶ್‌ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಗೆ ತಿರುಗೇಟು ಕೊಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಪರ ನಿಂತ ಕನ್ನಡಿಗರು!

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್‌ನಿಂದ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಅವರು ಹೊಸ ಕಲಾವಿದರಿಗೆ ಬೆಂಬಲ ನೀಡುತ್ತಿದ್ದಾರೆ. ನಟಿ ಮಾನ್ವಿತಾ ಕಾಮತ್, ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯೊಬ್ಬರಿಗೆ ತಿರುಗೇಟು ನೀಡಿದ್ದಾರೆ. "ಇಲ್ಲಿ ಯಶ್ ಕೆಳಗೆ ಬೀಳಲು ಕಾಯುವವರೇ ಹೆಚ್ಚು, ಒಬ್ಬರ ಏಳಿಗೆಯನ್ನು ಸಹಿಸುವುದಿಲ್ಲ" ಎಂದು ಮಾನ್ವಿತಾ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರಾಕಿಂಗ್ ಸ್ಟಾರ್ ಅಂದ್ರೆ ಯಶ್. ಕೆಜಿಎಫ್‌ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ವರ್ಲ್ಡ್‌ ಸ್ಟಾರ್ ಕೂಡ ಆಗಿದ್ದಾರೆ. ಯಾರ ಸಪೋರ್ಟ್ ಇಲ್ಲದೆ ಬೆಳೆದ ಯಶ್‌ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀಡಿದ್ದಾರೆ. ಹೀಗಾಗಿ ಇಂಡಸ್ಟ್ರಿಗೆ ಈಗಷ್ಟೇ ಕಾಲಿಡುತ್ತಿರುವ ಹೊಸ ಕಲಾವಿದರಿಗೆ ಬಿಗ್ ಸಪೋರ್ಟ್ ಆಗಿ ನಿಂತಿದ್ದಾರೆ.ನಮ್ಮ ಹುಡುಗ ಅನ್ನೋ ಭಾವನೆ ಕೊಟ್ಟಿದ್ದಾರೆ ಅದಿಕ್ಕೆ ಕೊಂಚ ಸಲುಗೆ ಮೇಲೆ ನಮ್ಮ ಹುಡುಗ ಮನೆ ಮಗ ಅಂತ ಸಲುಗೆಯಲ್ಲಿ ಮಾತನಾಡುವುದು ಜಾಸ್ತಿ. ಆದರೆ ನಟಿ ಮಾನ್ವಿತಾ ಮುಂದೆ ಯಶ್ ಬಗ್ಗೆ ಮಾತನಾಡಿದ ವ್ಯಕ್ತಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಹೌದು ಮಾನ್ವಿತಾ ಕಾಮತ್‌ ಜೊತೆ ಹೀಗೆ ಒಬ್ಬರು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ನನಗೆ ಯಶ್ ಗೊತ್ತು ಹಾಗೆ ಹೀಗೆ ಅಂತ ಮಾನ್ವಿತಾ ಅಲ್ಲಿಗೆ ಸುಮ್ಮನಾಗಿದ್ದಾರೆ ಆದರೆ ಮಾತು ಮುಂದುವರೆದಾಗ ಕೊಂಚ ಜೋರ್ ಮಾಡಿದ್ದಾರೆ.'ಅವರೆಲ್ಲರೂ ಯಶ್ ಅವರು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದ ರೀತಿಯಲ್ಲಿ ಮಾತನಾಡುತ್ತಿದ್ದರು. ಟಾಕ್ಸಿಕ್‌ ಸಿನಿಮಾ ಹಿಟ್ ಆಗಬೇಖು ಅದರಿಂದ ಇನ್ನೊಂದಷ್ಟು ಕೆಲಸಗಳ ಹೊರಗಡೆ ಬರುತ್ತದೆ. ಆ ವ್ಯಕ್ತಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದು ಆದರೆ ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ ಅನ್ನೋ ಮನಸ್ಥಿತಿಯೇ ಇಲ್ಲ. ಬೇಡದೇ ಇರೋದನ್ನು ಮಾತನಾಡುತ್ತಿದ್ದರು. ಯಾರೋ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಂತ ಗೊತ್ತಾದರೆ ನಾನು ಆ ಜಾಗದಲ್ಲಿ ಇರೋದೇ ಇಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ಮಾನ್ವಿತಾ ಮಾತನಾಡಿದ್ದಾರೆ.

ಬೆಂಗಳೂರು ಬಿಸಿಲು ಕಾಟ ಸಾಕು ಅಂತ ಮಂಜಿನ ಕಡೆ ಹೊರಟ ನಟಿ ಅಮೂಲ್ಯ; ಫೋಟೋ ವೈರಲ್

'ಅವತ್ತು ಕೂಡ, ಯಾರೂ ಕೂಡ ಉದ್ದಾರ ಆಗುವುದಿಲ್ಲ ಅದಕ್ಕೆ ಕಾರಣ ಏನು ಗೊತ್ತಾ ನೀವು ಎಲ್ಲರೂ ವ್ಯಕ್ತಿ ಬೀಳುವುದನ್ನು ಕಾಯುತ್ತಿರುತ್ತೀರಾ. ಒಬ್ಬರ ಏಳಿಗೆಯನ್ನು ಸಹಿಸುವುದಿಲ್ಲ ನೀವುಗಳು. ಒಬ್ಬ ಆಕ್ಟರ್ ಜೊತೆಗೆ ಒಂದು ಪ್ರೊಡಕ್ಷನ್ ಹೌಸ್ ಬೆಳೆಯುತ್ತಿದೆ ಅಂದ್ರೆ ಅವರ ಜೊತೆ ನಿತಂಉಕೊಳ್ಳಬೇಕು ಅನ್ನೋ ಮನಸ್ಥಿತಿಯೇ ಇಲ್ಲ. ಒಟ್ಟಾರೆ ಅವರನ್ನು ನೋಡಿ ನಗಬೇಕು. ಅವರಿಗೆಲ್ಲಾ ಮಾತಿನ ಮೂಲಕ ಸರಿಯಾಗಿ ಹೇಳಿ ಬಂದೆ ಅವತ್ತು' ಎಂದು ಮಾನ್ವಿತಾ ಹೇಳಿದ್ದಾರೆ. 

ಬಟ್ಟೆ ಬದಲಾಯಿಸುತ್ತಿದ್ದ ಸ್ಟಾರ್ ನಟಿ ರೂಮಿಗೆ ನುಗ್ಗಿದ ನಿರ್ದೇಶಕ; ಅಲ್ಲಿದ್ದವರಿಗೆ ಗಾಬರಿ ಆಗುವಂತೆ ಕೂಗಿದ್ದು ನಿಜವೇ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ