ವಿಭಿನ್ನ ಬರ್ತಡೇ ಗಿಫ್ಟ್‌ ಸ್ವೀಕರಿಸಿದ ಆರೋಹಿ ನಾರಾಯಣ್; ಇಷ್ಟೊಂದು ರೊಮ್ಯಾಂಟಿಕ್ಕಾ?

Suvarna News   | Asianet News
Published : Jan 28, 2020, 08:42 AM IST
ವಿಭಿನ್ನ ಬರ್ತಡೇ ಗಿಫ್ಟ್‌ ಸ್ವೀಕರಿಸಿದ ಆರೋಹಿ ನಾರಾಯಣ್; ಇಷ್ಟೊಂದು ರೊಮ್ಯಾಂಟಿಕ್ಕಾ?

ಸಾರಾಂಶ

ಹೊಸ ವರ್ಷ 2020 ನನಗೆ ನಿಜಕ್ಕೂ ಲಕ್ಕಿ... - ಇದು ನಟಿ ಆರೋಹಿ ನಾರಾಯಣ್‌ ವಿಶ್ವಾಸದ ಮಾತು. ಅವರು ಹೀಗೆ ಹೇಳಲು ಕಾರಣ ಈ ವರ್ಷದಲ್ಲಿ ತೆರೆ ಕಾಣಲಿರುವ ಚಿತ್ರಗಳು ಹಾಗೂ ಅವರಿಗೀಗ ಸಿಗುತ್ತಿರುವ ಅವಕಾಶ. ಸದ್ಯಕ್ಕೀಗ ಆರೋಹಿ ನಾರಾಯಣ್‌ ‘ಭೀಮಸೇನ ನಳಮಹಾರಾಜ’ ಹಾಗೂ ಶಿವಾಜಿ ಸುರತ್ಕಲ್‌ ಚಿತ್ರಗಳಲ್ಲಿ ಅಭಿನಯಿಸಿದ್ದು, ಅವೆರಡು ಚಿತ್ರಗಳು ಈಗ ರಿಲೀಸ್‌ಗೆ ರೆಡಿ ಆಗಿವೆ. ಈ ನಡುವೆಯೇ ಆರೋಹಿ ಮತ್ತೊಂದು ಪುಷ್ಕರ್‌ ನಿರ್ಮಾಣದ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅದು ಅವರ ಹುಟ್ಟುಹಬ್ಬಕ್ಕೆ ಸಿಕ್ಕ ಕೊಡುಗೆ.

ಬರ್ತಡೇ ಡೇ ಗಿಫ್ಟ್‌....

ಆರೋಹಿ ನಾರಾಯಣ್‌ ಜ.26ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ಇದೇ ವರ್ಷ ಶುರುವಾಗುವ ಹೊಸದೊಂದು ರೊಮ್ಯಾಂಟಿಕ್‌ ಚಿತ್ರಕ್ಕೆ ತಾವು ನಾಯಕಿ ಆಗಲಿದ್ದೀರಿ ಎಂಬ ಆಶ್ವಾಸನೆ ಮೂಲಕ ಬತ್‌ರ್‍ಡೇ ವಿಶ್‌ ಮಾಡಿದ್ದಾರೆ. ಇದರಿಂದ ಆರೋಹಿ ನಾರಾಯಣ್‌ ಫುಲ್‌ಖುಷ್‌ ಆಗಿದ್ದಾರೆ.

ನೆನಪಿರಲಿ ಪ್ರೇಮ್‌ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ

ಶಿವಾಜಿಯಲ್ಲಿ ಮಹತ್ವದ ಪಾತ್ರ

ಆರೋಹಿ ನಾರಾಯಣ್‌ ಅಭಿನಯಿಸಿರುವ ಎರಡು ಚಿತ್ರಗಳ ಪೈಕಿ ಶಿವಾಜಿ ಸುರತ್ಕಲ್‌ ಫೆ.21ಕ್ಕೆ ರಿಲೀಸ್‌ ಆಗುತ್ತಿದೆ. ‘ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಇನ್ವೆಸ್ಟಿಗೇಟಿವ್‌ ಸಿನಿಮಾ. ಕತೆಯ ಪ್ರತಿ ಸನ್ನಿವೇಶವೂ ಥ್ರಿಲ್ಲಿಂಗ್‌ ಆಗಿದೆ. ಇಲ್ಲಿ ನನಗೆ ಮಹತ್ವದ ಪಾತ್ರವೇ ಸಿಕ್ಕಿದೆ. ಸಿಕ್ಕಿರುವ ಅವಕಾಶದಲ್ಲಿ ನಟಿಯಾಗಿ ನನ್ನನ್ನು ನಾನು ಗುರುತಿಸಿಕೊಳ್ಳಲು ಸಾಧ್ಯವಾಗುವಂತಹ ಪಾತ್ರ. ಅದಕ್ಕೆ ನ್ಯಾಯ ಒದಗಿಸಿದ್ದೇನೆ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ ಆರೋಹಿ.

ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!

ನಳಮಹಾರಾಜನ ಮೇಲೆ ನಂಬಿಕೆ...

ಆರೋಹಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸಿರುವ ಸಿನಿಮಾ ‘ಭೀಮಸೇನ ನಳಮಹಾರಾಜ’. ‘ನನ್ನ ಸಿನಿ ಜರ್ನಿಗೆ ಇದೊಂದು ಮಹತ್ವದ ಚಿತ್ರ. ಅದಕ್ಕೆ ಕಾರಣ ಚಿತ್ರದ ಕತೆ ಹಾಗೂ ನನ್ನ ಪಾತ್ರವೂ ಸೇರಿದಂತೆ ಮೇಕಿಂಗ್‌ ದೃಷ್ಟಿಯಿಂದಲೂ ಹೌದು’ ಎನ್ನುವುದು ಆರೋಹಿ ನಾರಾಯಣ್‌ ವಿಶ್ವಾಸ, ನಂಬಿಕೆ, ಭರವಸೆಯ ಮಾತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?