CD ಹಿಂದಿರುವ 'ಮಹಾನಾಯಕ', ಪದ ಬಳಸಿದರೆ ಮುಖಕ್ಕೆ ಉಗೀರಿ; ಪ್ರಥಮ್ ಆಕ್ರೋಶ!

By Suvarna NewsFirst Published Mar 30, 2021, 9:30 AM IST
Highlights

ದೊಡ್ಡ ಚರ್ಚೆ ಹುಟ್ಟು ಹಾಕಿರುವ ಸಿಡಿ ಪ್ರಕರಣದ ಬಗ್ಗೆ ನಟ ಒಳ್ಳೆ ಹುಡುಗ ಪ್ರಥಮ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮತ್ತೆ'ಮಹಾನಾಯಕ' ಹೀಗೆ ಮಾಡಿ ಎಂದು ಜನರಿಗೆ ಪಾಠ ಮಾಡಿದ್ದಾರೆ.
 

ಸ್ಯಾಂಡಲ್‌ವುಡ್‌ ಹೀರೋ, ಬಿಗ್ ಬಾಸ್‌ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಸಮಾಜದ ಹಾಗೂ ಹೋಗುಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚರ್ಚೆ ಮಾಡುತ್ತಿರುತ್ತಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಈ ರೀತಿ ಮಾಡಿದರೆ ಬೆಸ್ಟ್‌, ಎಂದು ಸಾರ್ವಜನಿಕರಿಗೆ ಸಲಹೆ ನೀಡುತ್ತಾರೆ. ಅದೆಷ್ಟೋ ವಿಚಾರದಲ್ಲಿ ಪ್ರಥಮ್ ಪ್ರಾಕ್ಟಿಕಲ್ ಥಿಂಕಿಂಗ್ ವರ್ಕೌಟ್ ಆಗಿದೆ. ಈಗ ಅದೇ ರೀತಿ ಸಿಡಿ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. 

ಸಿಡಿ ಪ್ರಸಂಗದ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದಿಷ್ಟು..! 

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾಧ್ಯಮಗಳಲ್ಲಿ ಸಿಡಿ ಹಿಂದಿರುವ ಮಹಾನಾಯಕ ಎಂದು ತೋರಿಸಲಾಗುತ್ತಿದೆ. ಈ ವಿಚಾರದಲ್ಲಿ ಮಹಾನಾಯಕನ ಪದ ಬಳಕೆ ಬಗ್ಗೆ ಪ್ರಥಮ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

'ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ಗೆ ಗೌರವದಿಂದ ಮಹಾನಾಯಕ ಅಂತಿದ್ರು. ಈಗ ಸಿಡಿ ಮಾಡೋರನ್ನ ಮಹಾನಾಯಕ ಅಂತಿದ್ದಾರೆ. ಯಾವ ಪದ ಯಾರಿಗೆ ಬಳಸಬೇಕು, ಅನ್ನೋ ಕನಿಷ್ಠ ಜ್ಞಾನವೂ ಬೇಡ್ವಾ? ಅಂಬೇಡ್ಕರ್ ಪೋಟೋ ವಿರೂಪವಾದಾಗ ಅಗೌರವ ಅಗೋಲ್ಲ, ಇಂಥ ಪದಗಳನ್ನು ಅಶ್ಲೀಲ ಸಿಡಿ ಕೇಸ್‌ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ. ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆ ಉಗೀರಿ,' ಎಂದು ಪ್ರಥಮ್ ಟ್ಟೀಟ್ ಮಾಡಿದ್ದಾರೆ.

'ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ : ಎಫ್‌ಐಆರ್‌ ಹಾಕಿ'

ಮಹಾನಾಯಕ ಎಂದು ಕರೆಯಿಸಿಕೊಳ್ಳಲು ಅರ್ಹತೆ ಇರಬೇಕು. ಸುಖಾ ಸುಮ್ಮನೆ ಹಾಗೆ ಬಳಸಬಾರದು ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಪ್ರಥಮ್ ಪರ ನಿಂತಿದ್ದಾರೆ.

click me!