'ಒಳ್ಳೆತನ ಕಟ್ಕೊಂಡು ಏನ್​ ಮಾಡ್ಲಿ, ಅವ ತುಂಬಾ ಬೋರು' ಎಂದು ನಾಲ್ಕೇ ದಿನಕ್ಕೆ ಡಿವೋರ್ಸ್​ ಕೊಟ್ಟ ಪತ್ನಿ!

Published : Jul 19, 2025, 10:42 PM IST
Divorce

ಸಾರಾಂಶ

ಗಂಡ ಒಳ್ಳೆಯನಾಗಿದ್ರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವತಿ, ಒಳ್ಳೇತನ ಕಟ್ಕೊಂಡು ಏನ್​ ಮಾಡ್ಲಿ, ಅವನು ಸಕತ್​ ಬೋರ್​ ಎಂದು ಮದ್ವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್​ಗೆ ಅರ್ಜಿ ಹಾಕಿದ್ದಾಳೆ. ಏನಿದು ಸ್ಟೋರಿ? 

ಇತ್ತೀಚಿನ ದಿನಗಳಲ್ಲಿ ಸಂಬಂಧ ಎನ್ನುವುದಕ್ಕೆ ಬೆಲೆಯೇ ಇಲ್ಲವೇ ಎನ್ನುವಂತಾಗಿದೆ. ಅದರಲ್ಲಿಯೂ ಕೆಲ ದಶಕಗಳಿಂದ ಡಿವೋರ್ಸ್​ ಎನ್ನುವುದು ಸಿಕ್ಕಾಪಟ್ಟೆ ಕಾಮನ್​ ಆಗಿಬಿಟ್ಟಿದೆ. ಚಿಕ್ಕಪುಟ್ಟ ಕಾರಣಕ್ಕೆ ವಿಚ್ಛೇದನ ಪಡೆಯುವವರ ದೊಡ್ಡ ಲಿಸ್ಟೇ ಇದೆ. ಡಿವೋರ್ಸ್​ ಪ್ರಕರಣ ಹೆಚ್ಚಾಗುತ್ತಿರುವ ಕಾರಣಕ್ಕೇನೇ ಕೌಟುಂಬಿಕ ಕೋರ್ಟ್​ಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಇದೀಗ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಒಂದು ವಿಚಿತ್ರ ಪ್ರಕರಣ ನಡೆದಿದೆ. ಅದರಲ್ಲಿ ಪತ್ನಿಯಾದವಳು ಮದುವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್​ ಕೊಟ್ಟಿದ್ದಾಳೆ. ಅದಕ್ಕೆ ಕಾರಣ ಗಂಡ ತುಂಬಾ ಸೀದಾ ಸಾದಾ ಇದ್ದು, ಬೋರಿಂಗ್​ ಕ್ಯಾರೆಕ್ಟರ್​ ಎನ್ನುವುದಕ್ಕೆ. ಅವನ ಸರಳತೆ ನನಗೆ ಇಷ್ಟವಾಗ್ತಿಲ್ಲ. ಇಂಥ ಸರಳ ಗಂಡನನ್ನು ಇಟ್ಟುಕೊಂಡು ಏನು ಮಾಡುವುದು ಎಂದು ಮಹಿಳೆ ಕೇಳಿದ್ದಾಳೆ.

ಗಂಡನಿಗೆ ತುಂಬಾ ಸಿಂಪಲ್​. ಅವನಿಗೆ ಲವ್​ನಲ್ಲಿ ಉತ್ಸಾಹವೇ ಇಲ್ಲ. ಪ್ರಣಯದ ಬಗ್ಗೆ ಏನು ಗೊತ್ತಿಲ್ಲ. ತುಂಬಾ ಬೋರಿಂಗ್​ ಕ್ಯಾರೆಕ್ಟರ್​. ಒಂದು ಸ್ವಲ್ಪವೂ ರಸಿಕತನವೇ ಇಲ್ಲ. ಇಂಥ ಗಂಡನ ಜೊತೆ ಜೀವನಪೂರ್ತಿ ಹೇಗೆ ಬಾಳುವುದು ಎಂದು ನಾಲ್ಕೇ ದಿನಕ್ಕೆ ಡಿವೋರ್ಸ್​ ಕೋರಿ ಮಹಿಳೆ ಅರ್ಜಿ ಸಲ್ಲಿಸಿದ್ದಾಳೆ. ಇವರಿಬ್ಬರನ್ನೂ ಕರೆಸಿ ಕೌನ್ಸೆಲಿಂಗ್​ ಮಾಡಿಸಲಾಯಿತಾದರೂ, ಇಂಥ ಗಂಡ ನನಗೆ ಬೇಡೇ ಬೇಡ ಎಂದು ಮಹಿಳೆ ಪಟ್ಟು ಹಿಡಿದಿದ್ದಾಳೆ. ಈತನ ಗುಣ ನನಗೆ ನಿರಾಸೆ ಮೂಡಿಸಿದೆ. ಒಳ್ಳೆಯತನ ಕಟ್ಕೊಂಡು ಏನು ಮಾಡುವುದು, ರೊಮ್ಯಾಂಟಿಕ್​ ಆಗಿಯೇ ಇಲ್ಲದಾಗ ಒಳ್ಳೆಯನತನ ಯಾವ ಮೂಲೆಗೆ ಎಂದು ಮಹಿಳೆ ಪ್ರಶ್ನಿಸಿದ್ದಾಳೆ.

ಮೊರಾದಾಬಾದ್‌ನಲ್ಲಿ ನಡೆದ ಈ ಪ್ರಕರಣದಲ್ಲಿ ವಿವಾದವನ್ನು ಪರಿಹರಿಸಲು ಪಂಚಾಯತ್, ಸ್ಥಳೀಯ ಸಮುದಾಯ ಸಭೆಗಳನ್ನು ನಡೆಸಲಾಗಿತ್ತು. ಅದು ಏನೂ ಆಗದಾಗ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಮದುವೆಯಾದ ನಾಲ್ಕೇ ದಿನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೊನೆಗೆ ವಿಚಾರಣೆ ನಡೆದು ಇದೀಗ ಡಿವೋರ್ಸ್​ ನೀಡಿದೆ ಕೋರ್ಟ್​.

ವರನ ಕುಟುಂಬವು ವಧುವಿನ ಕುಟುಂಬಕ್ಕೆ ರೂ. 6.5 ಲಕ್ಷ ದಂಡವನ್ನು ಪಾವತಿಸಲು ಆದೇಶಿಸಿದೆ. ಇದು ಭಾರಿ ಚರ್ಚೆಗೆ ಕಾರಣವೂ ಆಗಿದೆ. ಗಂಡನ ತಪ್ಪೇ ಇಲ್ಲದಿದ್ದರೂ, ಆತ ಪರಿಹಾರ ಕೊಡಬೇಕು ಎಂದರೆ ಕಾನೂನು ಇರುವುದು ಏಕೆ ಎಂದು ಪ್ರಶ್ನಿಸಲಾಗುತ್ತದೆ. ಮದುವೆಯಾಗುವುದು, ಡಿವೋರ್ಸ್​ ಪಡೆಯುವುದನ್ನೇ ಕೆಲವು ಹೆಣ್ಣುಮಕ್ಕಳು ದಂಧೆ ಮಾಡಿಕೊಳ್ಳುತ್ತಿದ್ದಾರೆ. ಗಂಡುಮಕ್ಕಳು ತಾವು ಮದುವೆಯಾಗಿರುವ ಒಂದೇ ಕಾರಣಕ್ಕೆ ದುಡಿದದ್ದನ್ನೆಲ್ಲಾ ಪರಿಹಾರದ ರೂಪದಲ್ಲಿ ಹೆಣ್ಣಿಗೆ ನೀಡಬೇಕಿರುವ ಕರ್ಮ ಬಂದಿದೆ ಎಂದು ನೆಟ್ಟಿಗರು ಕಾನೂನನ್ನು ಪ್ರಶ್ನಿಸುತ್ತಿದ್ದಾರೆ. ಇದರ ವಿರುದ್ಧ ಭಾರಿ ಅಸಮಾಧಾನ ಹೊರಹಾಕುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ