
ಆಚಾರ್ಯ ಚಾಣಕ್ಯ ಭಾರತದ ಮಹಾನ್ ವಿದ್ವಾಂಸರು. ದೇಶ ಬೇರೆ ಬೇರೆ ರಾಜ್ಯಗಳಾಗಿ ಹಂಚಿಹೋಗಿದ್ದಾಗ, ಅದನ್ನೆಲ್ಲಾ ಒಗ್ಗೂಡಿಸಿ ಅಖಂಡ ಭಾರತವನ್ನು ಕಟ್ಟಿದವರು. ಅವರು ಹೇಳಿದ ನೀತಿಗಳು ಇವತ್ತಿಗೂ ನಮ್ಮ ಜೀವನಕ್ಕೆ ತುಂಬಾ ಉಪಯುಕ್ತ. ಗಂಡ-ಹೆಂಡತಿ ಸಂಬಂಧದಲ್ಲಿ ಯಾಕೆ ಬಿರುಕು ಮೂಡುತ್ತೆ, ದೂರ ಯಾಕೆ ಹೆಚ್ಚಾಗುತ್ತೆ ಅನ್ನೋದಕ್ಕೂ ಚಾಣಕ್ಯರು ಕಾರಣಗಳನ್ನು ತಿಳಿಸಿದ್ದಾರೆ. ಆ ನಾಲ್ಕು ಕಾರಣಗಳು ಇಲ್ಲಿವೆ...
ಒಬ್ಬರ ಜೊತೆ ಒಬ್ಬರು ಮಾತು ಬಿಟ್ಟರೆ...
ಯಾವುದೇ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಮಾತುಕತೆ ತುಂಬಾನೇ ಮುಖ್ಯ ಅಂತಾರೆ ಚಾಣಕ್ಯ. ಯಾವಾಗ ಗಂಡ-ಹೆಂಡತಿ ಒಬ್ಬರಿಗೊಬ್ಬರು ಮಾತಾಡೋದನ್ನೇ ನಿಲ್ಲಿಸುತ್ತಾರೋ ಅಥವಾ ಬರೀ ಬೇಕು-ಬೇಡ ಅನ್ನೋ ಅಗತ್ಯದ ಮಾತುಗಳನ್ನಷ್ಟೇ ಆಡ್ತಾರೋ, ಆಗ ಅವರ ನಡುವೆ ಅಂತರ ಹೆಚ್ಚಾಗಲು ಶುರುವಾಗುತ್ತೆ. ದಿನ ಕಳೆದಂತೆ ಈ ದೂರ ದೊಡ್ಡದಾಗಿ, ಬೇರೆಯಾಗೋ ಹಂತಕ್ಕೂ ತಲುಪಬಹುದು. ಅದಕ್ಕೆ, ಗಂಡ-ಹೆಂಡತಿ ಮಧ್ಯೆ ಮಾತುಕತೆ ಯಾವಾಗ್ಲೂ ಇರಬೇಕು.
ಒಬ್ಬರ ಮೇಲೊಬ್ಬರು ಅನುಮಾನಪಟ್ಟರೆ...
ಮದುವೆ ಅನ್ನೋದು ನಿಂತಿರೋದೇ ನಂಬಿಕೆ ಮೇಲೆ. ಹೀಗಿರುವಾಗ, ಗಂಡ ಅಥವಾ ಹೆಂಡತಿ ಸುಖಾಸುಮ್ಮನೆ ತಮ್ಮ ಸಂಗಾತಿ ಮೇಲೆ ಅನುಮಾನ ಪಡಲು ಶುರು ಮಾಡಿದ್ರೆ, ಆ ಸಂಬಂಧ ಹೆಚ್ಚು ದಿನ ಉಳಿಯಲ್ಲ. ಗಂಡ-ಹೆಂಡತಿ ಒಬ್ಬರಿಗೊಬ್ಬರು ಯಾವುದೇ ವಿಷಯ ಮುಚ್ಚಿಡಬಾರದು. ಇಂತಹ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ಜಗಳಕ್ಕೆ ಕಾರಣವಾಗಬಹುದು. ಎಲ್ಲಿ ನಂಬಿಕೆ ಇರಲ್ವೋ, ಅಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆ ಕೂಡಾ ನಿಧಾನವಾಗಿ ಕಮ್ಮಿಯಾಗುತ್ತೆ ಅನ್ನೋದು ಚಾಣಕ್ಯರ ಮಾತು.
ಅಹಂಕಾರ ಹೆಚ್ಚಾದಾಗ...
ಸಂಬಂಧದಲ್ಲಿ ಪ್ರೀತಿಗಿಂತ ಅಹಂಕಾರವೇ ದೊಡ್ಡದಾದ್ರೆ, ದೂರ ಆಗೋದು ಗ್ಯಾರಂಟಿ. ಇದೇ ಮಾತು ಗಂಡ-ಹೆಂಡತಿ ಸಂಬಂಧಕ್ಕೂ ಅನ್ವಯಿಸುತ್ತೆ. ತಾನು ಹೇಳಿದ್ದೇ ಸರಿ ಅನ್ನೋದು, ತಪ್ಪು ಮಾಡಿದ್ರೂ ಕ್ಷಮೆ ಕೇಳದೇ ಇರೋದು, ಪ್ರತಿಯೊಂದು ವಿಷಯದಲ್ಲೂ ತನ್ನನ್ನೇ ದೊಡ್ಡವನು/ದೊಡ್ಡವಳು ಅಂದುಕೊಳ್ಳುವುದು... ಇವೆಲ್ಲಾ ಚೆನ್ನಾಗಿರೋ ಸಂಸಾರವನ್ನು ಹಾಳುಮಾಡಬಲ್ಲದು. ಹಾಗಾಗಿ ಗಂಡ-ಹೆಂಡತಿ ಇಬ್ಬರೂ ಇಂತಹ ಅಹಂಕಾರದಿಂದ ದೂರ ಇರಬೇಕು.
ಚಾಣಕ್ಯ ನೀತಿ ಪ್ರಕಾರ, ಗಂಡ-ಹೆಂಡತಿ ಒಬ್ಬರಿಗೊಬ್ಬರು ಗೌರವ ಕೊಡಬೇಕು. ಒಬ್ಬರ ಭಾವನೆ, ಯೋಚನೆ ಅಥವಾ ಪ್ರಯತ್ನಗಳಿಗೆ ಬೆಲೆ ಸಿಗದಿದ್ದಾಗ, ಮನಸ್ಸಲ್ಲಿ ಅಸಮಾಧಾನ ಹುಟ್ಟಿಕೊಳ್ಳುತ್ತೆ. ಇದೇ ಅಸಮಾಧಾನ ಸಮಯ ಕಳೆದಂತೆ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಗಂಡ-ಹೆಂಡತಿ ಈ ತಪ್ಪನ್ನು ಕೂಡಾ ಮಾಡಬಾರದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.