ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

Published : Dec 21, 2018, 06:34 PM ISTUpdated : Dec 21, 2018, 07:27 PM IST
ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

ಸಾರಾಂಶ

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೆಜಿಎಫ್ ಚಿತ್ರ ಎದುರಾಗಿದ್ದ ತೊಂದರೆಗೆ ರಿಲೀಫ್ ಸಿಕಿದೆ. 

ಬೆಂಗಳೂರು, [ಡಿ.21]: ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಬಿಡುಗಡೆಗೆ ತಡೆ ಕೋರಿ ಹೂಡಿದ್ದ ದಾವೆಯನ್ನು ದೂರುದಾರ ವೆಂಕಟೇಶ್​ ಹಿಂಪಡೆದಿದ್ದಾರೆ.

"

 ಕನ್ನಡದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ  ಬಿಡುಗಡೆಗೆ ಒಂದು ಬಾಕಿ ಇರುವಾಗ ಅಂದ್ರೆ ನಿನ್ನೆ [ಗುರುವಾರ] ರಾತ್ರಿ ವೆಂಕಟೇಶ್​ ಸಿಟಿ ಸಿವಿಲ್ ಕೋರ್ಟ್ 10 ರಲ್ಲಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. 

KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ

ಈ ಸಂಬಂಧ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಚಿತ್ರವನ್ನು ಜನವರಿ 7ರ ವರೆಗೆ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು. 

ಡಿ.21ಕ್ಕೆ KGF ರಿಲೀಸ್ ಮಾಡಿಯೇ ಶತಸಿದ್ಧ: ನಿರ್ಮಾಪಕ ವಿಜಯ್ ಕಿರಗಂದೂರು

ಈ ಸಂಬಂಧ ಇಂದು [ಶುಕ್ರವಾರ] ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದೂರುದಾರರ ವೆಂಕಟೇಶ್ ಒಪ್ಪಿಗೆ ಮೇರೆಗೆ ಕೋರ್ಟ್​ ವಕೀಲ ಕೆ. ರಘುನಾಥ್ ವಿತ್ ಡ್ರಾ ಅರ್ಜಿಯನ್ನು ಸಲ್ಲಿಸಿದರು. ಈ ವೇಳೆ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಅರ್ಜಿ ಸ್ವೀಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!