ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

By Kannadaprabha NewsFirst Published Dec 21, 2018, 6:34 PM IST
Highlights

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೆಜಿಎಫ್ ಚಿತ್ರ ಎದುರಾಗಿದ್ದ ತೊಂದರೆಗೆ ರಿಲೀಫ್ ಸಿಕಿದೆ. 

ಬೆಂಗಳೂರು, [ಡಿ.21]: ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಬಿಡುಗಡೆಗೆ ತಡೆ ಕೋರಿ ಹೂಡಿದ್ದ ದಾವೆಯನ್ನು ದೂರುದಾರ ವೆಂಕಟೇಶ್​ ಹಿಂಪಡೆದಿದ್ದಾರೆ.

"

 ಕನ್ನಡದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ  ಬಿಡುಗಡೆಗೆ ಒಂದು ಬಾಕಿ ಇರುವಾಗ ಅಂದ್ರೆ ನಿನ್ನೆ [ಗುರುವಾರ] ರಾತ್ರಿ ವೆಂಕಟೇಶ್​ ಸಿಟಿ ಸಿವಿಲ್ ಕೋರ್ಟ್ 10 ರಲ್ಲಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. 

KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ

ಈ ಸಂಬಂಧ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಚಿತ್ರವನ್ನು ಜನವರಿ 7ರ ವರೆಗೆ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು. 

ಡಿ.21ಕ್ಕೆ KGF ರಿಲೀಸ್ ಮಾಡಿಯೇ ಶತಸಿದ್ಧ: ನಿರ್ಮಾಪಕ ವಿಜಯ್ ಕಿರಗಂದೂರು

ಈ ಸಂಬಂಧ ಇಂದು [ಶುಕ್ರವಾರ] ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದೂರುದಾರರ ವೆಂಕಟೇಶ್ ಒಪ್ಪಿಗೆ ಮೇರೆಗೆ ಕೋರ್ಟ್​ ವಕೀಲ ಕೆ. ರಘುನಾಥ್ ವಿತ್ ಡ್ರಾ ಅರ್ಜಿಯನ್ನು ಸಲ್ಲಿಸಿದರು. ಈ ವೇಳೆ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಅರ್ಜಿ ಸ್ವೀಕರಿಸಿದರು.

click me!