ಲಡಾಖ್‌ಗೆ ಮೋದಿ ಭೇಟಿ, ರಾಜ್ಯಕ್ಕೆ ಎದುರಾಯ್ತು ಭಾರಿ ಮಳೆ ಭೀತಿ; ಜು.3ರ ಟಾಪ್ 10 ನ್ಯೂಸ್!

Published : Jul 03, 2020, 04:49 PM ISTUpdated : Jul 03, 2020, 04:50 PM IST
ಲಡಾಖ್‌ಗೆ ಮೋದಿ ಭೇಟಿ, ರಾಜ್ಯಕ್ಕೆ ಎದುರಾಯ್ತು ಭಾರಿ ಮಳೆ ಭೀತಿ; ಜು.3ರ ಟಾಪ್ 10 ನ್ಯೂಸ್!

ಸಾರಾಂಶ

ಗಡಿ ಸಂಘರ್ಷದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ಗೆ ದಿಡೀರ್ ಭೇಟಿ ನೀಡಿದ್ದಾರೆ. ಇತ್ತ ಭಾರತದಲ್ಲಿ ಚೀನಾ ಹೂಡಿಕೆಯನ್ನು ಬ್ಯಾನ್ ಮಾಡಲಾಗಿದೆ. ಇತ್ತ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿದೆ.  ಆಗಸ್ಟ್ 15ರಂದು ದೇಸಿ ಕೊರೋನಾ ಔಷಧ ಬಳಕೆಗೆ ಸಿದ್ದವಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಭೀತಿ ಎದುರಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ದೀಪಿಕಾ ಪಡುಕೋಣೆ ಎಕ್ಸ್ ಬಾಯ್‌ಫ್ರೆಂಡ್ ಕುರಿತ ಹೇಳಿಕೆ, ಟ್ವಿಟರ್‌ನಲ್ಲಿ ಎಡಿಟ್ ಬಟನ್ ಸೇರಿದಂತೆ ಜುಲೈ 03ರ ಟಾಪ್ 10 ಸುದ್ದಿ ಇಲ್ಲಿವೆ. 

ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ...

ಲಡಾಖ್ ಗಡಿಯಲ್ಲಿ ನಿಂತು ಭಾರತದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಫೂರ್ತಿ ತುಂಬಿದ್ದಾರೆ. ಸೈನಿಕರ ಶೌರ್ಯ ಪಾರಕ್ರಮ ಎಲ್ಲ ಕಡೆ ಕೊಂಡಾಡಲಾಗುತ್ತಿದೆ. ನಿಮ್ಮ ಸಾಹಸದ ಕತೆಗಳು ಪ್ರತಿ ಮನೆಯಲ್ಲಿಯೂ ದೇಶಭಕ್ತಿ ಬಿತ್ತಿದೆ ಎಂದು ಸೈನಿಕರಿಗೆ ವಂದನೆ ಸಲ್ಲಿಸಿದರು.

ಚೀನಾಗೆ ಹೊಡೆತದ ಮೇಲೆ ಹೊಡೆತ; ಇನ್ಮೇಲೆ ಹೂಡಿಕೆಗೆ ನೋ ಚಾನ್ಸ್‌..!

ಭಾರತದ ಗಡಿಯಲ್ಲಿ ಚೀನಾ ಸಂಘರ್ಷ ಮಾಡಿದ ನಂತರ ಕೇಂದ್ರ ಸರ್ಕಾರ ಸದ್ದಿಲ್ಲದೆ ಒಂದೊಂದೆ ಏಟುಗಳನ್ನು ನೀಡುತ್ತಾ ಬಂದಿದೆ. ಮೊದಲು ಪ್ರಮುಖ ರೈಲ್ವೆ ಯೋಜನೆಗಳಿಂದ ಮುಕ್ತಿ ನಂತರ ಚೀನಾ ಅಪ್ಲಿಕೇಶನ್ ಬ್ಯಾನ್.. ಇದೀಗ ಮತ್ತೊಂದು ಹೊಡೆತ ನೀಡಿದೆ. 

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!

ಕೊರೋನಾಗೆ ಮದ್ದು ಅರೆಯುವಲ್ಲಿ ಭಾರತ ಕೊನೆಗೂ ಯಶಸ್ವಯಾದಂತೆ ತೋರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಆಗಸ್ಟ್ 15ರಂದು ದೇಸಿ ಕೊರೋನಾ ಔಷಧ ಬಳಕೆಗೆ ಸಿದ್ದವಾಗಲಿದೆ. 

ವಿಂಡೀಸ್‌ ಮಾಜಿ ಕ್ರಿಕೆ​ಟಿಗ ಎವರ್ಟನ್‌ ವೀಕ್ಸ್‌ ನಿಧ​ನ

ವಿಂಡೀಸ್ ದಿಗ್ಗಜ ಕ್ರಿಕೆಟಿಗ ಸರ್‌.ಎ​ವ​ರ್ಟನ್‌ ವೀಕ್ಸ್‌(95) ಬುಧ​ವಾರ(ಜು.02) ನಿಧ​ನ​ರಾ​ಗಿ​ದ್ದಾರೆ. ವಿಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. 

ಶಿವಲಿಂಗ' ಚಿತ್ರದ ನಟಿ ಡ್ಯಾನ್ಸ್ ವಿಡಿಯೋ ವೈರಲ್; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚೆಲುವೆ!

2008ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಂಗಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತಮಿಳು-ತೆಲುಗು ಚಿತ್ರದ ನಟಿ ವೇದಿಕಾಕುಮಾರ್ ಡ್ಯಾನ್ಸ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.....

ಕಾಂಡೋಮ್ ಗಿಫ್ಟ್ ಕೊಡುತ್ತೇನೆಂದ ದೀಪಿಕಾಗೆ ರಣಬೀರ್ ರಿಯಾಕ್ಷನ್!

 ದೀಪಿಕಾ ತನ್ನ ಎಕ್ಸ್‌ ಬಾಯ್‌ಫ್ರೆಂಡ್‌ ಬಗ್ಗೆ ಮಾಡಿದ ಕಾಮೆಂಟ್‌ ಸದ್ದು ಮಾಡುತ್ತಿದೆ. ನಟಿಯ ಹಳೆಯ ಇಂಟರ್‌ವ್ಯೂವ್‌ವೊಂದು ಇದೀಗ‌ ವೈರಲ್‌ ಆಗಿದೆ.

ಟ್ವಿಟರ್‌ನಲ್ಲಿ ಬರಲಿದೆ ಎಡಿಟ್ ಬಟನ್, ಆದರೆ ಒಂದು ಕಂಡೀಷನ್!

ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್‌ಗೆ ಅಗ್ರಸ್ಥಾನವಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಖಾತೆ ಹೊಂದಿದ್ದು, ಟ್ವೀಟ್ ಮೂಲಕ ಸದ್ದು ಮಾಡುತ್ತಾರೆ. ಇತರ ಜಾಲತಾಣಗಳಲ್ಲಿ ಇರುವಂತೆ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಇಲ್ಲ. ಬಳಕೆ ದಾರರು ಹಲವು ಬಾರಿ ಮನವಿ ಮಾಡಿದರೂ ಟ್ವಿಟರ್ ಕಿವಿಗೆ ಹಾಕಿಕೊಂಡಿಲ್ಲ. ಇದೀಗ ದೀಢೀರ್ ಆಗಿ ಟ್ವಿಟರ್ ಎಡಿಟ್ ಆಯ್ಕೆ ನೀಡುವುದಾಗಿ ಹೇಳಿದೆ. ಆದರೆ ಒಂದು ಕಂಡೀಷನ್ ವಿಧಿಸಿದೆ.

ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇಂದಿನಿಂದ 4 ರವರೆಗೆ ಈ‌ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಕೊರೋನಾ ಬಂದ್ರೂ ಹೆಂಡ್ತಿ ಬಿಟ್ಟಿರದ ಪತಿರಾಯ: ನಿನ್ನ ಬಿಟ್ಟು ಇರಲಾರೆ ಎಂದು ಹಠ ಹಿಡಿದ ಗಂಡ..!

 ಮಹಾಮಾರಿ ಕೊರೋನಾ ಸೋಂಕಿತ ಪತ್ನಿಯೊಂದಿಗೆ ಆಸ್ಪತ್ರೆಗೆ ಹೋಗುವುದಾಗಿ ಪತಿ ರಂಪಾಟ ಮಾಡಿದ ಘಟನೆ ನಿನ್ನೆ(ಗುರುವಾರ) ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದಿದೆ. 

ಯಾಣದಲ್ಲಿ SSLC ವಿದ್ಯಾರ್ಥಿಗಳಿಗೆ ಆಪತ್ಭಾಂದವರಾದ KSRTC ಡ್ರೈವರ್, ಕಂಡಕ್ಟರ್

ಕೊರೋನಾ ಭೀತಿಯ ನಡುವೆ ಕೊನೆಯ SSLC ಪರೀಕ್ಷೆ ಬರೆದು ಮನೆ ಸೇರಬೇಕು ಎಂದು ಬಸ್‌ನಲ್ಲಿ ಹೊರಟಿದ್ದ ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗ್ಗೆಯೇ ಆಘಾತವೊಂದು ಎದುರಾಗಿತ್ತು. ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಈ ಕ್ಷಣ ನೋಡಿ ವಿದ್ಯಾರ್ಥಿಗಳು ಕಂಗಾಲಾಗಿ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ