ಕರ್ನಾಟಕಕ್ಕೆ ಕೊರೋನಾ ಕಂಟಕ, ಈ ವಾರ ಯಾರು ಬಿಗ್‌ಬಾಸ್ ನಿರೂಪಕ? ಏ.17ರ ಟಾಪ್ 10 ಸುದ್ದಿ!

By Suvarna NewsFirst Published Apr 17, 2021, 5:01 PM IST
Highlights

ಸಿಎಂ ಯಡಿಯೂರಪ್ಪ ಬಳಿಕ ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಕೊರೋನಾ ವಕ್ಕರಿಸಿದೆ. ಕೊರೋನಾ ಹೆಚ್ಚಾದ ಹಿನ್ನಲೆಯಲ್ಲಿ ಸಾಂಕೇತಿಕ ಕುಂಭಮೇಳಕ್ಕೆ ಮೋದಿ ಸೂಚಿಸಿದ್ದಾರೆ. ಈ ವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಇಲ್ಲ, ಮತ್ತ್ಯಾರು ಅನ್ನೋ ಕುತೂಹಲ ಮನೆ ಮಾಡಿದೆ.  ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಟೀಂ ಇಂಡಿಯಾ, ಕೊರೋನಾ ರೋಗಿಗಳಲ್ಲಿ ಉತ್ಸಾಹ ತುಂಬಲು ಡ್ಯಾನ್ಸ್  ಸೇರಿದಂತೆ ಏಪ್ರಿಲ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

'ದೇಶದಲ್ಲಿ ಏ.25ರ ವೇಳೆಗೆ ಸೋಂಕು ತಾರಕಕ್ಕೆ!'...

ನಿತ್ಯವೂ 60000 ಕೇಸುಗಳ ಮೂಲಕ ಆತಂಕ ಹುಟ್ಟುಹಾಕಿರುವ ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ತನ್ನ ಗರಿಷ್ಠ ಮಟ್ಟಮುಟ್ಟಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 3 ವಾರದ ಹಿಂದೆ ಮಹಾರಾಷ್ಟ್ರವು ಒಟ್ಟಾರೆ ಸೋಂಕಿನಲ್ಲಿ ಶೇ.60 ಪಾಲು ಹೊಂದಿತ್ತು. ಅದು ಈಗ ಶೇ.30ಕ್ಕೆ ಇಳಿದಿದೆ.

ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ, ಡಿಕೆಶಿಗೆ ಕೊರೋನಾ!...

ಮಾಜಿ ಮುಖ್ಯಮಂತ್ರಿ ಎಚ್‌.​ ಡಿ ಕುಮಾರಸ್ವಾಮಿ ಅವರಿಗೆ ಕೊರೋನಾ ಸೊಂಕು ತಗುಲಿದ್ದು, ಅವರಿಗೆ ಆಸ್ಪತ್ರೆಯಲ್ಲಿ  ಬೆಡ್​ ಬಿಸಿ ತಟ್ಟಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

ಕೊರೋನಾ ಹೆಚ್ಚಳ, ಸಾಂಕೇತಿಕ ಕುಂಭಮೇಳ: ಮೋದಿ...

ಭಾರತದಲ್ಲಿ ಹೆಚ್ಚುತ್ತಿದೆ ಕೊರೋನಾ | ಒಂದೇ ದಿನದಲ್ಲಿ 2,34,692 COVID-19 ಪ್ರಕರಣಗಳು ಪತ್ತೆ | ಕುಂಭಮೇಳ ಸಾಂಕೇತಿಕ ಆಚರಣೆ | ಮೋದಿ ಮಹತ್ವದ ಸಂದೇಶ

ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ!...

ಹೃದಯ ಸಂಬಂಧಿ ತೊಂದರೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್​​ ಚೆನ್ನೈ ಆಸ್ಪತ್ರೆಯಲ್ಲಿ ನಿಧನ| ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್​ಐಎಂಎಸ್​ ಆಸ್ಪತ್ರೆಗೆ ದಾಖಲಾಗಿದ್ದ 59 ವರ್ಷದ ನಟ|  ಇಂದು ಮುಂಜಾನೆ 4.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.

2028ರ ಒಲಿಂಪಿಕ್ಸ್‌ಗೆ ಭಾರತ ಕ್ರಿಕೆಟ್‌ ತಂಡ: ಬಿಸಿಸಿಐ ಗ್ರೀನ್ ಸಿಗ್ನಲ್‌...

2028ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತ ತಂಡವನ್ನು ಕಳಿಸಿಕೊಡಲು ಬಿಸಿಸಿಐ ಹಸಿರು ನಿಶಾನೆ ತೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಆ್ಯಪಲ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು iPhone..!...

ನಿಕ್ ಜೇಮ್ಸ್ ಎಂಬ ಯುಕೆ ಮೂಲದ ಈ ವ್ಯಾಪಾರಿಗೆ ಇದೇ ರೀತಿಯ ಅನುಭವ ಆಗಿದೆ. ಅವರ ಆರ್ಡರ್ ಸ್ಟೋರಿಯಲ್ಲಿ ಇದು ಆಶ್ಚರ್ಯಕರ ತಿರುವು ನೀಡಿದ್ದು ಈಗ ಜನರ ಗಮನವನ್ನು ಸೆಳೆದಿದೆ. ಜೇಮ್ಸ್ ಅವರು ಆರ್ಡರ್ ಮಾಡಿದ್ದು ತಿನ್ನುವ ಆ್ಯಪಲ್. ಸಿಕ್ಕಿದ್ದು ಆ್ಯಪಲ್ ಫೋನ್. ಇವರೆಂಥಾ ಅದೃಷ್ಟಶಾಲಿ ಅಲ್ವಾ ?

ಅಂಚೆ ಇಲಾಖೆ ಉಳಿತಾಯ ಖಾತೆ ಗ್ರಾಹಕರಿಗೆ ಗುಡ್‌ ನ್ಯೂಸ್!...

ಪೋಸ್ಟ್‌ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕನಿಷ್ಠ ಹಣವನ್ನೂ ನಿರ್ವಹಣೆ ಮಾಡಿರದ ಖಾತೆದಾರರಿಗೆ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ.

ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿ ಡ್ಯಾನ್ಸ್; ವಿಡಿಯೋ ವೈರಲ್!...

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಸರಿಯಾಗಿ ಆರೈಕೆ ಮಾಡಲಾಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಇದರ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿಗಳು ಮಾಡಿದ  ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಇಲ್ಲ, ಮತ್ತ್ಯಾರು ?...

ಕಿಚ್ಚನ ಬದಲು ವೀಕೆಂಡ್‌ನಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ನಡೆಸ್ಕೊಡೋದ್ಯಾರು ? ಯಾರು ಮಾಡ್ತಾರೆ ನಿರೂಪಣೆ? ಹೇಗಿರಲಿದೆ ಈ ವಾರದ ಬಿಗ್‌ಬಾಸ್ ಶೋ ? ಇಲ್ಲಿ ನೋಡಿ ವಿಡಿಯೋ

ವೆಡ್ಡಿಂಗ್ ಆ್ಯನಿವರ್ಸರಿ ದಿನವೇ ನಿಖಿಲ್ ಕುಮಾರಸ್ವಾಮಿಗೆ ಕೊರೋನಾ ಪಾಸಿಟಿವ್...!...

ಸ್ಯಾಂಡಲ್‌ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಲಡಾಖ್‌ನಲ್ಲಿ ಸಿನಿಮಾ ಹಾಡಿನ ಶೂಟಿಂಗ್‌ ಮಾಡಿದ ನಟನಿಗೆ ಇದೀಗ ವಿವಾಹ ವಾರ್ಷಿಕೋತ್ಸವ ದಿನವೇ ಕೊರೋನಾ ಪಾಸಿಟಿವ್ ಬಂದಿದೆ.

click me!