ಅಣ್ಣಾಮಲೈಗೆ ಹೊಸ ಜವಾಬ್ದಾರಿ, IPL ವೇಳಾಪಟ್ಟಿಗೆ ಅಂತಿಮ ತಯಾರಿ: ಆ.25ರ ಟಾಪ್ 10 ಸುದ್ದಿ!

Published : Aug 25, 2020, 04:50 PM ISTUpdated : Aug 25, 2020, 04:53 PM IST
ಅಣ್ಣಾಮಲೈಗೆ ಹೊಸ ಜವಾಬ್ದಾರಿ, IPL ವೇಳಾಪಟ್ಟಿಗೆ ಅಂತಿಮ ತಯಾರಿ: ಆ.25ರ ಟಾಪ್ 10 ಸುದ್ದಿ!

ಸಾರಾಂಶ

ಮಾಜಿ ಐಪಿಎಲ್ ಅಧಿಕಾರಿ, ಕರ್ನಾಟಕದ ಸಿಂಗಂ ಅನ್ನೋ ಖ್ಯಾತಿಯ ಅಣ್ಣಾಮಲೈ ಬಿಜೆಪಿ ಸೇರಿಕೊಂಡಿದ್ದಾರೆ. ಇದಕ್ಕೆ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೂ ಕೊರೋನಾ ಸೋಂಕು ದೃಢಪಟ್ಟಿದೆ. ಐಪಿಎಲ್ ವೇಳಾಪಟ್ಟಿ ಕುರಿತು ಬ್ರಿಜೇಶ್ ಪಟೇಲ್ ಸುಳಿವು ನೀಡಿದ್ದಾರೆ. ಜಿಯೋದಿಂದ ಉಚಿತ ಐಪಿಎಲ್ ಪ್ಲಾನ್, ಅನಾರೋಗ್ಯದ ಮಧ್ಯೆ ಸರ್ವಾಧಿಕಾರಿ ಕಿಮ್ ಸಾವಿನ ಸುದ್ದಿ ಸೇರಿದಂತೆ ಆಗಸ್ಟ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.  

ಮೋದಿ ಮೇಲಿನ ದ್ವೇಷಕ್ಕೆ ಭಾರತಕ್ಕೇ ಕೊಳ್ಳಿ: ದೇಶದ ನೆಮ್ಮದಿ ಕದಡಲು ನಿಗೂಢ ಸಂಚು!...

ಮೋದಿ ಮೇಲಿನ ದ್ವೇಷಕ್ಕೆ ಭಾರತಕ್ಕೇ ಕೊಳ್ಳಿ ಇಡುವ ಪ್ಲಾನ್ ಮಾಡಿದ್ದಾರಾ ಝಾಕಿರ್ ನಾಯ್ಕ್. ಭಾರತೀಯ ಮುಸಲ್ಮಾನರು ಅವರು ಹೇಳಿದಂತೆ ಕೇಳಿದ್ರೆ, ಹಿಂದೂಸ್ತಾನದಲ್ಲಿ ಹಿಂದೂಗಳೇ ಇರಲ್ವಂತೆ.

ಅಣ್ಣಾಮಲೈ ಬಿಜೆಪಿಗೆಯೇ ಸೇರಿದ್ಯಾಕೆ? ಅವರ ಬಾಯಿಂದಲೇ ಕೇಳಿ...

ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಗೆ ಸೇರಿದ್ಯಾಕೆ ಎನ್ನುವುದನ್ನ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಕೊರೋನಾ ಸೋಂಕು!...

ರಾಜ್ಯದಲ್ಲಿ ಕೊರೋನಾ ಆತಂಕ ದಿನೇ ದಿನೇ ಹೆಚ್ಚುತ್ತಿದ್ದು, ಸದ್ಯ ರಾಜಕಾರಣಿಗಳಲ್ಲೂ ಈ ಮಹಾಮಾರಿ ಕಾಣಿಸಿಕೊಳ್ಳಲಾರಂಭಿಸಿದೆ. ಸಿಎಂ ಯಡಿಯೂರಪ್ಪ, ಶ್ರೀರಾಮುಲು, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೂ ಕೊರೋನಾ ಸೋಂಕು ದೃಢಪಟ್ಟಿದೆ.

IPL ಸಂಪೂರ್ಣ ವೇಳಾಪಟ್ಟಿ ಪ್ರಕಟ ಯಾವಾಗ..? ಬ್ರಿಜೇಶ್ ಪಟೇಲ್‌ ಕೊಟ್ರು ಸುಳಿವು...

ಐಪಿಎಲ್ ಆರಂಭದ ದಿನಾಂಕ ನಿಗಧಿಯಾಗಿದ್ದರೂ ಸಂಪೂರ್ಣ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಯಾವಾಗ ಸಂಪೂರ್ಣ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಬಹುದು ಎನ್ನುವ ಸುಳಿವನ್ನು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬಿಚ್ಚಿಟ್ಟಿದ್ದಾರೆ. 

ಐಶ್ವರ್ಯಾ ರೈ ಫ್ಯಾನ್ಸ್‌ಗೆ ಬೀಗ್ ಟ್ರೀಟ್: ಅತಿ ಲೋಕ ಸುಂದರಿಯ ಫೋಟೋಸ್

ಐಶ್ವರ್ಯಾ ರೈ ಬಚ್ಚನ್ ವಿಶ್ವದ ಅತ್ಯಂತ ಸುಂದರಿ ಯುವತಿ ಎಂದು ಗುರುತಿಸಲ್ಪಟ್ಟಾಗ ಐಶ್ ವಯಸ್ಸು 21. 1994ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಸುಂದರವಾರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮೂಲತಃ ಮಂಗಳೂರಿನವರಾದ ಐಶ್ವರ್ಯಾ ರೈ ಅವರ ಬಲು ಅಪರೂಪದ ಫೋಟೋಸ್ ಇಲ್ಲಿದೆ ನೋಡಿ.

ಬೆಂಗ್ಳೂರು ಗಲಭೆ: ಪುಂಡರ ಪೋಷಕರಿಂದ ತನಿಖೆಗೆ ಅಡ್ಡಿ...

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರನ್ನು ಡೈವರ್ಟ್‌ ಮಾಡಲು, ಅಡ್ಡಿಪಡಿಸಲು ಪುಂಡರ ಪೋಷಕರು ಪ್ಲಾನ್ ಮಾಡಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿದೆ. ಹೇಬಿಯಸ್ ಕಾರ್ಪಸ್ ಬಳಿಕ, ಮಾನವ ಆಯೋಗಕ್ಕೂ ದೂರು ನೀಡಿದ್ದಾರೆ. SC, ST ಕಮಿಷನ್, ಪೊಲೀಸ್ ಕಮಿಷನರ್‌ಗೂ ದೂರು ನೀಡಿದ್ದಾರೆ. 

ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್‌ ನೋಡಿ..!...

ಕೆಟ್ ಧನ್ ಧನಾ ಧನ್, ಜಿಯೋ ಧನ್ ಧನಾ ಧನ್ ಹೆಸರಿನಲ್ಲಿ ಹೊಸದೊಂದು ಆಫರ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಕರೋನಾದಿಂದಾಗಿ ಯುಎಇ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳನ್ನು ಯಾವುದೇ ಅಡೆತಡೆಗಳು ಇಲ್ಲದೇ ಆನ್‌ಲೈನಿನಲ್ಲಿ ನೋಡಲು ತನ್ನ ಚಂದದಾರರಿಗೆ ಜಿಯೋ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.

64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ...

ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..!

ಅನಾರೋಗ್ಯದ ಮಧ್ಯೆ ಸರ್ವಾಧಿಕಾರಿ ಕಿಮ್ ಸಾವಿನ ಸುದ್ದಿ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಕೋಮಾಗೆ ಜಾರಿದ್ದಾರೆಂಬ ಸುದ್ದಿ ವೈರಲ್ ಆದಬೆನ್ನಲ್ಲೇ ಅವರು ಮೃತಪಟ್ಟಿದ್ದಾರೆಂಬ ಮಾಹಿತಿ ಭಾರೀ ಸಂಚಲನ ಹುಟ್ಟು ಹಾಕಿದೆ. ತಜ್ಞರೇ ಈ ಬಗ್ಗೆ ಮಾತನಾಡುತ್ತಿದ್ದು, ಇದಕ್ಕೆ ಕಾರಣವನ್ನೂ ಸ್ಪಷ್ಟಪಡಿಸಿದ್ದಾರೆ

ಹೆಚ್ಚವರಿ ಫೀಚರ್ಸ್, ಕೆಲ ಬದಲಾವಣೆಯೊಂದಿಗೆ ನೂತನ ಹೊಂಡಾ ಜಾಝ್ ಆ.26ಕ್ಕೆ ಬಿಡುಗಡೆ!...

2020 ಹೊಂಡಾ ಜಾಝ್ ಬಿಡುಗಡೆ ಸಜ್ಜಾಗಿದೆ. ನಾಳೆ(ಆ.26) ಹೊಚ್ಚ ಹೊಸ ಜಾಝ್ ಮಾರುಕಟ್ಟೆ ಪ್ರವೇಶಿಸಲಿದೆ. ಹೆಚ್ಚುವರಿ ಫೀಚರ್ಸ್, ಸನ್‌ರೂಫ್, CVT ಟ್ರಾನ್ಸ್‌ಮಿಶನ್ ಸೇರಿದಂತೆ ಹಲವು ಬದಲಾವಣೆಗಳು ನೂತನ ಜಾಝ್ ಕಾರಿನಲ್ಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ