ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!

Published : Mar 31, 2025, 06:18 PM ISTUpdated : Mar 31, 2025, 07:00 PM IST
ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!

ಸಾರಾಂಶ

ರಶ್ಮಿಕಾ ಮಂದಣ್ಣ ಅವರು ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಾವು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು, ಕನ್ನಡ ಮತ್ತು ಇಂಗ್ಲಿಷ್ ಬರುತ್ತಿದ್ದವು. ಹೈದರಾಬಾದ್‌ನಲ್ಲಿ ತೆಲುಗು ಕಲಿತಿದ್ದೇನೆ. ಮುಂಬೈನಲ್ಲಿ ಹಿಂದಿ ಕಲಿಯಲು ಸಿದ್ಧ ಎಂದಿದ್ದಾರೆ. ಸಲ್ಮಾನ್ ಖಾನ್ ಅವರು ರಶ್ಮಿಕಾ ಅವರ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದು ಗೊತ್ತೇ ಇದೆ. ಕನ್ನಡ ಮಾತನಾಡಲ್ಲ, ಹೈದ್ರಾಬಾದ್‌ನಲ್ಲಿ ಇರೋದು ಅಂತಾರೆ, ಹಾಗೆ ಹೀಗೆ ಎಂದು ಅವರನ್ನು ಟೀಕೆ ಮಾಡೋದು, ಕಾಮೆಂಟ್ ಮಾಡೋದು ತುಂಬಾ ಸಮಯದಿಂದ ನಡೆದೇ ಇದೆ. ರಕ್ಷಿತ್‌ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡ ದಿನಗಳಿಂದಲೂ ನಟಿ ರಶ್ಮಿಕಾ ಮಂದಣ್ಣ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡಿಬಾರದು ಎಂಬಂತೆ ನೆಟ್ಟಿಗರು ಅವರನ್ನು ಪೀಡಿಸುತ್ತಿದ್ದಾರೆ. 

ಅವರು ಯಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕು, ಯಾರೊಂದಿಗೆ ಮದುವೆಯಾಗಬೇಕು ಎಂಬುದನ್ನು ಸ್ವತಃ ಅವರು ಹಾಗೂ ಅಗತ್ಯವಿದ್ದರೆ ಅವರ ಮನೆಯವರು ನೋಡಿಕೊಳ್ಳುತ್ತಾರೆ. ಅದಕ್ಕೂ ಸೋಷಿಯಲ್ ಮೀಡಿಯಾ ಸೈನ್ಯಕ್ಕೂ ಯಾವುದೇ ಸಂಬಂಧ ಇಲ್ಲ. ಎಂಗೇಂಜ್‌ಮೆಂಟ್ ಕ್ಯಾನ್ಸಲ್ ಮಾಡಿಸಿಕೊಂಡವರೇ ಸೈಲೆಂಟ್ ಆಗಿ ತಮ್ಮ ಕೆಲಸ ತಾವು ನೋಡಿಕೊಂಡು ಹಾಯಾಗಿದ್ದಾರೆ. ಆದರೆ, ಕೆಲಸವಿಲ್ಲದ ಸೋಷಿಯಲ್ ಮೀಡಿಯಾ ಮಂದಿ ನ್ಯಾಷನಲ್ ಲೆವಲ್ ಸ್ಟಾರ್‌ಗೆ ಯಾರನ್ನು ಮದುವೆ ಆಗ್ಬೇಕು, ಯಾರನ್ನು ಮದುವೆ ಆಗ್ಬಾರ್ದು ಎನ್ನುವ ಪಾಠ ಹೇಳುತ್ತಿದ್ದಾರೆ. 

ರಶ್ಮಿಕಾ ಮಂದಣ್ಣಗೆ ಭಾರಿ ಗೌರವ ಕೊಡ್ತಿರೋ ಸಲ್ಮಾನ್‌ ಖಾನ್‌; 'ಸೋ ಸ್ವೀಟ್' ಅಂತಿರೋ ನೆಟ್ಟಿಗರು!

ಆದರೆ, ನಟಿ ರಶ್ಮಿಕಾ ಮಂದಣ್ಣ ಮಾತ್ರ ದಿನದಿನಕ್ಕೂ ತಮ್ಮ ವೃತ್ತಿಯಲ್ಲಿ ಮೇಲೇರುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ರಶ್ಮಿಕಾ ನಟನೆಯ ಜೀವನ, ಟಾಲಿವುಡ್, ಬಾಲಿವುಡ್ ತಲುಪಿದೆ. ಮುಂದೆ ಹಾಲಿವುಡ್‌ಗೆ ಹೋದರೂ ಅಚ್ಚರಿಯಿಲ್ಲ. ಇದೀಗ ಸಲ್ಮಾನ್ ಖಾನ್ ಜೊತೆ ನಟಿಸಿರುವ 'ಸಿಕಂದರ್' ಚಿತ್ರದ ಪ್ರಚಾರದ ವೇಳೆ ನಟಿ ರಶ್ಮಿಕಾ ಬಹಳಷ್ಟು ಪ್ರಬುದ್ಧವಾಗಿ ಮಾತನ್ನಾಡಿದ್ದಾರೆ. ತಾವು ಹುಟ್ಟಿ ಬೆಳೆದಿದ್ದು, ಸದ್ಯ ತಾವು ವಾಸವಾಗಿರುವುದು, ಹಾಗೂ ಈಗ ಕೆಲಸ ಮಾಡುತ್ತಿರುವ ನೆಲ, ಭಾಷೆಯ ಬಗ್ಗೆ ತುಂಬಾ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಹಾಗಾದ್ರೆ, ರಶ್ಮಿಕಾ ಅದೇನು ಹೇಳಿದ್ದಾರೆ ನೋಡಿ.. 

'ನನ್ನ ಅಭಿಪ್ರಾಯದಲ್ಲಿ, ನಾವು ಎಲ್ಲಿ ಬದುಕುತ್ತೇವೆಯೋ ಅಲ್ಲಿನ ಭಾಷೆಯನ್ನು ಕಲಿಯುವುದು ತುಂಬಾ ಅಗತ್ಯ ಹಾಗೂ ಸುಲಭ.. ನಾವು ಬೇರೆ ಭಾಷೆಯ ಜನರು ಇರುವ ನಗರದಲ್ಲಿ ಇದ್ದಾಗ, ನಮ್ಮ ಸುತ್ತಲಿನವರು ಯಾವ ಭಾಷೆಯನ್ನು ಮಾತನಾಡುತ್ತಾರೆಯೋ ಆ ಭಾಷೆಯನ್ನು ಬೇಗ ಕಲಿತು ಮಾತನಾಡಬಹುದು, ಅದು ಸುಲಭ ಆಗುತ್ತದೆ ಕೂಡ. ನಾನು ಕರ್ನಾಟಕದಲ್ಲಿ ಹುಟ್ಟಿದವಳು, ಅಲ್ಲೇ ಬೆಳೆದವಳು. ನನಗೆ ಗೊತ್ತಿದ್ದ ಎರಡೇ ಎರಡು ಭಾಷೆ ಅಂದ್ರೆ ಕನ್ನಡ ಹಾಗೂ ಇಂಗ್ಲಿಷ್, ನಾನು ಐಸಿಎಸ್‌ಸಿನಲ್ಲಿ ಓದಿದವಳು. 

ಸಲ್ಮಾನ್ ಖಾನ್‌ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?

ಈಗ, ಸದ್ಯ ನಾನು ಹೈದ್ರಾಬಾದ್‌ನಲ್ಲಿ ಇದ್ಧೇನೆ. ನನ್ನ ಅಸಿಸ್ಟಂಟ್ಸ್‌, ಸೆಕ್ಯೂರಿಟಿಸ್, ಮತ್ತು ಇಡೀ ತಂಡ ತೆಲುಗು ಭಾಷೆ ಮಾತನ್ನಾಡುತ್ತಾರೆ. ನನ್ನ ಟೀಮ್‌ ಜೊತೆ ಮಾತನಾಡಬೇಕು, ಅವರ ಜೊತೆ ಕಮ್ಯುನಿಕೇಟ್ ಮಾಡಬೇಕು ಎಂದರೆ, ನಾನು ತೆಲುಗು ಭಾಷೆಯನ್ನು ಕಲಿಯಲೇಬೇಕು ಹಾಗೂ ಅದರಲ್ಲಿ ಪ್ರಾವಿಣ್ಯತೆ ಪಡೆಯಲೇಬೇಕು. ಹೀಗಾಗಿ ನಾನು ಹೆಚ್ಚಾಗಿ ತೆಲುಗು ಮಾತನಾಡುತ್ತೇನೆ. ಇನ್ನು, ಈಗ ನಾನು ಕೆಲಸಕ್ಕಾಗಿ (ಸಿಕಂದರ್ ಸಿನಿಮಾ) ಮುಂಬೈಗೆ ಬಂದಿದ್ದೇನೆ. ನೀವು ನನಗೆ ಹಿಂದಿ ಭಾಷೆಯ ಡೈಲಾಗ್‌ಗಳನ್ನು ಕೊಟ್ಟರೆ ನಾನು ಅದರಲ್ಲಿ ತೊಡಗಿಸಿಕೊಂಡು ಪಕ್ಕಾ ಮಾತನ್ನಾಡಬಲ್ಲೆ' ಎಂದಿದ್ದಾರೆ.

ಜೊತೆಗೆ, 'ಒಮ್ಮೆ ನಾನು ಹಿಂದಿಯಲ್ಲೇ ಮಾತನಾಡಬೇಕು ಎಂದು ನೀವು ಬಯಸಿದರೆ ನಾನು ತಪ್ಪುತಪ್ಪಾಗಿ ಮಾತನಾಡಬಲ್ಲೆ. ಏಕೆಂದರೆ, ನಾನು ಆಗ ನಾನು ಆಡುವ ಮಾತುಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸತೊಡಗುತ್ತೇನೆ. ಆಗ ಸಹಜವಾಗಿಯೇ ಹೆಚ್ಚುಹೆಚ್ಚು ಮಿಸ್ಟೇಕ್‌ಗಳು ಆಗುತ್ತವೆ. ಒಮ್ಮೆ ನಾನು ಇಲ್ಲಿ ಮುಂಬೈನಲ್ಲೇ ಉಳಿಯಲು ನಿರ್ಧರಿಸಿದರೆ, ಆಗ ನಾನು ಹಿಂದಿಯಲ್ಲಿ ಸಂಪೂರ್ಣವಾಗಿ, ಪರ್ಫೆಕ್ಟ್‌ ಆಗಿ ಮಾತನಾಡಬಲ್ಲೆ' ಎಂದಿದ್ದಾರೆ. 

ಅದಕ್ಕೆ ಅಲ್ಲೇ ರಶ್ಮಿಕಾ ಪಕ್ಕದಲ್ಲಿರುವ ನಟ ಸಲ್ಮಾನ್ ಖಾನ್ ಅವರು ರಶ್ಮಿಕಾ ಮಾತಿಗೆ ತಮಾಷೆ ಮಾಡಿದ್ದಾರೆ. 'ನೋ, ಅದು ಸಾಧ್ಯ ಆಗೋದಿಲ್ಲ, ಯಾಕಂದ್ರೆ, ಇಲ್ಲಿ ನಿಮ್ಮ ಅಕ್ಕಪಕ್ಕ ಇರೋ ಸ್ಟಾರ್ ಎಲ್ರೂ ಇಂಗ್ಲಿಷ್ ಮಾತನಾಡೋರೇ ಇರೋದು..' ಎಂದಿದ್ದಾರೆ, ನಟ ಸಲ್ಮಾನ್ ಕಾನ್ ಮಾತನ್ನು ಒಪ್ಪಿದ ನಟಿ ರಶ್ಮಿಕಾ ಮಂದಣ್ಣ ಅವರು, 'ಹೌದು, ನೀವು ಹೇಳೋದು ಕೂಡ ಸರಿಯಾಗಿದೆ, ಇಲ್ಲಿ ನನ್ನ ಸುತ್ತಮುತ್ತ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ ಎಂದಿದ್ದಾರೆ.  

ಮುಂಬೈನಲ್ಲಿ ಹುಟ್ಟೂರಿನ ಬಗ್ಗೆ ಹೇಳಿದ ನಟಿ ರಶ್ಮಿಕಾ ಮಂದಣ್ಣ; ಇನ್ಮೇಲೆ ವಿವಾದಕ್ಕೆ ದಾರಿ ಎಲ್ಲಿದೆ ಹೇಳಿ..!? 

ಆದರೆ, ಸದ್ಯ ಸಿಕಂದರ್ ಚಿತ್ರಕ್ಕಿಂತಲೂ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ ಅವರ ಈ ಸಂದರ್ಶನ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ, ಆಗಲೇಬೇಕು.. ಅದರಲ್ಲಿ ನಟಿ ರಶ್ಮಿಕಾ ಅವರು 'ನಾನು ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲಿ ಎಂದಿದ್ದಾರೆ' ಈ ಸಂಗತಿ ಈಗ ದೊಡ್ಡ ಸುದ್ದಿಯಾಗಬೇಕು.. ಏಕೆಂದರೆ, ಇಷ್ಟೂ ದಿನ, ಕನ್ನಡತಿ ನಟಿ ರಶ್ಮಿಕಾ ಎಲ್ಲೂ ಕೂಡ ತಾವು ಕರ್ನಾಟಕದವರು, ಕನ್ನಡತಿ ಎಂದು ಹೇಳುತ್ತಿಲ್ಲ ಎಂದು ಆರೋಪ ಮಾಡಲಾಗುತ್ತಿತ್ತು. ಆದರೆ ಈಗ ಹೇಳಿದ್ದಾರೆ ನೋಡಿ..

ಒಟ್ಟಿನಲ್ಲಿ ಇದೀಗ ಮುಂಬೈನಲ್ಲಿ ಕುಳಿತು ನಟಿ ರಶ್ಮಿಕಾ ಅವರು 'ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು, ನನಗೆ ಮಾತನಾಡಲು ಕನ್ನಡ ಹಾಗೂ ಇಂಗ್ಲಿಷ್ ಎರಡೇ ಭಾಷೆ ಬರುತ್ತಿತ್ತು. ಆದರೆ ನಾನೀಗ ಹೈದ್ರಾಬಾದಿನಲ್ಲಿ ನೆಲೆಸುತ್ತಿದ್ದೇನೆ, ತೆಲುಗು ಭಾಷೆ ಕಲಿತುಕೊಂಡಿದ್ದೇನೆ' ಎಂದು ಹೇಳಿರುವುದು ಸುಂಟರಗಾಳಿಯಂತೆ ಸುದ್ದಿ ಆಗಬೇಕಿದೆ!.. ಆಗುವುದಾದರೆ ಎಲ್ಲವೂ ಸುದ್ದಿ ಆಗಬೇಕು.. ಏನಂತೀರಾ..?! 

ಸುಧಾರಾಣಿ ಉಟ್ಟ ಸೀರೆಯ ವಯಸ್ಸೆಷ್ಟು ಅಂತ ಗೊತ್ತಾದ್ರೆ ಕಂಗಾಲಾಗೋದು ಗ್ಯಾರಂಟಿ..!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?