ಕಾಂಡೋಮ್ ಆ್ಯಡ್ ಮೂಲಕ ಸದ್ದು ಮಾಡಿದ್ದ ನಟ ಧರ್ಮೇಂದ್ರನ 'ಸಂಸ್ಕಾರಿ' ಸೊಸೆ!

Published : Dec 04, 2024, 12:53 PM ISTUpdated : Dec 04, 2024, 01:05 PM IST
ಕಾಂಡೋಮ್ ಆ್ಯಡ್ ಮೂಲಕ ಸದ್ದು ಮಾಡಿದ್ದ ನಟ ಧರ್ಮೇಂದ್ರನ  'ಸಂಸ್ಕಾರಿ' ಸೊಸೆ!

ಸಾರಾಂಶ

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಕುಟುಂಬದ ಒಬ್ಬ ಸೊಸೆ ಕೂಡ ಫಿಲ್ಮ್ ಮತ್ತು ಟಿವಿ ಇಂಡಸ್ಟ್ರಿಯ ಭಾಗವಾಗಿದ್ದರು. ಮಿಸ್ ಇಂಡಿಯಾ ಆಗಿದ್ದ ದೀಪ್ತಿ ಭಟ್ನಾಗರ್ ಅನೇಕ ಚಿತ್ರಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಒಂದು ವಿವಾದಾತ್ಮಕ ಜಾಹೀರಾತು ಅವರ ವೃತ್ತಿಜೀವನದ ಮೇಲೆ ಕಪ್ಪು ಚುಕ್ಕೆ ಇರಿಸಿತ್ತು.

ಮುಂಬೈ (ಡಿ.4): ಧರ್ಮೇಂದ್ರ ಬಾಲಿವುಡ್‌ನ ಸೂಪರ್‌ಸ್ಟಾರ್ ಮತ್ತು ಅವರ ಕುಟುಂಬದ ಅನೇಕ ಜನರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಪುತ್ರಿ ಈಶಾ ಡಿಯೋಲ್, ಪತ್ನಿ ಹೇಮಾ ಮಾಲಿನಿ ಅಥವಾ ಅವರ ಸೋದರಳಿಯ ಅಭಯ್ ಡಿಯೋಲ್ ಎಲ್ಲರೂ ಜನಪ್ರಿಯ ನಟರು. ಆದರೆ ಧರ್ಮೇಂದ್ರ ಕುಟುಂಬದ ಒಬ್ಬ ಸೊಸೆ ಕೂಡ ಚಿತ್ರರಂಗ ಮತ್ತು ಟಿವಿ ಉದ್ಯಮದಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ ಎನ್ನುವುದು ಕೇಳಿ ಅಚ್ಚರಿಯಾಗಬಹುದು.. ಈ ನಟಿ ಟಿವಿಯಲ್ಲಿ ಜನಪ್ರಿಯ ಕಾರ್ಯಕ್ರಮದ ಭಾಗವಾಗಿದ್ದರು. ಎಲ್ಲರ ದೃಷ್ಟಿಯಲ್ಲಿ ಆಕೆ ಸಂಸ್ಕಾರಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟಿವಿಯಲ್ಲೂ ಕೂಡ ಅವರು ಮಾಡಿದ್ದ ಪಾತ್ರ ಅಂಥದ್ದೇ ಆಗಿತ್ತು. ಆದರೆ, ಟಿವಿಯಲ್ಲಿ ಬಂದ ಒಂದೇ ಒಂದು ಜಾಹೀರಾತು ಆಕೆಯ ಸಂಸ್ಕಾರಿ ಇಮೇಜ್‌ಅನ್ನು ಸಂಪೂರ್ಣವಾಗಿ ಹಾಳು ಮಾಡಿತ್ತು.

ಯಾರೀಕೆ: ನಾವು ಹೇಳುತ್ತಿರುವ ಧರ್ಮೇಂದ್ರ ಅವರ ಸೊಸೆಯ ಹೆಸರು ದೀಪ್ತಿ ಭಟ್ನಾಗರ್. ದೀಪ್ತಿ ಅವರು ಧರ್ಮೇಂದ್ರನ ಸೋದರಸಂಬಂಧಿ ವೀರೇಂದ್ರ ಆರ್ಯ ಅವರ ಪುತ್ರ ರಣದೀಪ್ ಆರ್ಯ ಅವರನ್ನು ವಿವಾಹವಾಗಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಸಂಬಂಧದಿಂದಾಗಿ ಅವರು ಧರ್ಮೇಂದ್ರನಿಗೆ ಸೊಸೆ ಮತ್ತು ಸನ್ನಿ ಡಿಯೋಲ್, ಬಾಬಿ ಡಿಯೋಲ್ ಅವರ ಅತ್ತಿಗೆ. 

ಮಿಸ್ ಇಂಡಿಯಾ ಆಗಿದ್ದ ದೀಪ್ತಿ ಭಟ್ನಾಗರ್: ದೀಪ್ತಿ ಭಟ್ನಾಗರ್ ಮಿಸ್ ಇಂಡಿಯಾ ಆಗಿದ್ದವರು. 1999 ರಲ್ಲಿ ಮಿಸ್ ಇಂಡಿಯಾ ಆಗಿ ಆಯ್ಕೆಯಾದಾಗ ಅವರಿಗೆ 18 ವರ್ಷ. ಸೌಂದರ್ಯ ಸ್ಪರ್ಧೆಯನ್ನು ಗೆದ್ದ ನಂತರ ಅವರು ನಟನಾ ಜಗತ್ತಿನಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮುಂಬೈಗೆ ಬಂದರು. ಮುಂಬೈಗೆ ಬಂದ 11 ತಿಂಗಳ ನಂತರ ಅವರು ಮುಂಬೈನಲ್ಲಿ ಸ್ವಂತ ಮನೆ ಖರೀದಿ ಮಾಡಿದ್ದರು. ವಿಶೇಷವೆಂದರೆ ಆಗ ಅವರಿಗೆ ಕೇವಲ 22 ವರ್ಷ.

ಜೆಡಬ್ಲ್ಯು ಕೆಲ್ಲಿ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲಿದ್ಯಾ? ಇದ್ದಲ್ಲಿ ಲಕ್ಷಾಧಿಪತಿ ಆಗಬಹುದು..

1998 ರಲ್ಲಿ ಟಿವಿ ನಟಿಯಾದ ದೀಪ್ತಿ ಭಟ್ನಾಗರ್: ದೀಪ್ತಿ ಭಟ್ನಾಗರ್ 1995 ರಲ್ಲಿ 'ರಾಮ್ ಶಾಸ್ತ್ರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು 'ಕಾಲಿಯಾ', 'ಹಮ್ಸೆ ಬಡ್ಕರ್ ಕೌನ್', 'ಸುಲ್ತಾನ್' (ತೆಲುಗು) ಮತ್ತು 'ಚೋರಿ ಚೋರಿ ಚುಪ್ಕೆ ಚುಪ್ಕೆ' ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. 1998 ರಲ್ಲಿ 'ಯೇ ಹೈ ರಾಜ್' ಕಾರ್ಯಕ್ರಮದ ಮೂಲಕ ಅವರು ಟಿವಿಯಲ್ಲಿ ಪಾದಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅವರು ರೂಬಿ ಭಾಟಿಯಾ ಅವರ ಬದಲಿಗೆ ಕಾಣಿಸಿಕೊಂಡಿದ್ದರು.  ಇದರಲ್ಲಿ ಅವರದು ಮಹಿಳಾ ಪೊಲೀಸ್ ಅಧಿಕಾರಿಯ ಪ್ರಮುಖ ಪಾತ್ರವಾಗಿತ್ತು. ಆದರೆ ದೀಪ್ತಿ ಅವರಿಗೆ ನಿಜವಾದ ಗುರುತಿಸುವಿಕೆ ಸಿಕ್ಕಿದ್ದು 'ಯಾತ್ರಾ' ಎಂಬ ಟ್ರಾವೆಲ್‌ ಪ್ರೋಗ್ರಾಮ್‌ ತಂದಾಗ. ಈ ಕಾರ್ಯಕ್ರಮದ ಮೂಲಕ ಅವರು ದೇಶದ ವಿವಿಧ ದೇವಾಲಯಗಳ ಬಗ್ಗೆ ಹೇಳುತ್ತಿದ್ದರು. ನಂತರ 'ಮುಸಾಫಿರ್ ಹೂಂ ಯಾರೋ' ಮೂಲಕ ಅಂತಾರಾಷ್ಟ್ರೀಯ ಪ್ರವಾಸಗಳ ಬಗ್ಗೆ ತಿಳಿಸುವ ಕಾರ್ಯಕ್ರಮ ನಡೆಸಿಕೊಟ್ಟರು. ಈ ಎರಡೂ ಕಾರ್ಯಕ್ರಮಗಳು ದೀಪ್ತಿ ಭಟ್ನಾಗರ್ ಅವರ ಹೋಮ್ ಪ್ರೊಡಕ್ಷನ್‌ನವು ಮತ್ತು ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾದವು. ನಂತರ ದೀಪ್ತಿ ಸ್ಟಾರ್ ಪ್ಲಸ್‌ನ ಕಾಲ್ಪನಿಕ ಕಾರ್ಯಕ್ರಮ 'ಕಭಿ ಆಯೇ ನಾ ಜುದಾಯಿ' ಅನ್ನು ನಿರ್ಮಿಸಿದರು.

ಪ್ಯೂರ್‌ ಅಂದ್ಕೊಂಡು ಬಾಟಲ್‌ ನೀರು ಕುಡಿತೀರಾ, ಇದು 'ತುಂಬಾ ಡೇಂಜರ್‌' ಎಂದ FSSAI

ಕಾಂಡೋಮ್ ಜಾಹೀರಾತು ಮಾಡಿ ಸಿಕ್ಕಿಬಿದ್ದ ದೀಪ್ತಿ ಭಟ್ನಾಗರ್: ದೀಪ್ತಿ ಭಟ್ನಾಗರ್ ಟಿವಿಯಲ್ಲಿ ಕಾಂಡೋಮ್ ಜಾಹೀರಾತು ಮಾಡಿದ್ದರು, ಇದರಿಂದಾಗಿ ಅವರು ತೀವ್ರ ಟೀಕೆಗೆ ಗುರಿಯಾದರು. ಈ ಜಾಹೀರಾತಿನಲ್ಲಿ ದೀಪ್ತಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಇದು ಟಿವಿಯಲ್ಲಿ ತೋರಿಸಲಾದ ಅತ್ಯಂತ ವಿವಾದಾತ್ಮಕ ದೃಶ್ಯಗಳಲ್ಲಿ ಒಂದಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!