ಒಣಗಿದ ಗುಲಾಬಿ ಗಿಡದಲ್ಲೂ ಗೊಂಚಲು ಗೊಂಚಲು ಹೂವು ಅರಳಲು ಈ ಸಣ್ಣ ನೀಲಿ ಗುಳಿಗೆ ಸಾಕು!

Published : Jul 08, 2026, 04:21 PM IST
Rose plant care in Kannada

ಸಾರಾಂಶ

Rose plant care in Kannada: ಬಿರುಬಿಸಿಲಿನ ತಾಪಕ್ಕೆ ಗುಲಾಬಿ ಗಿಡಗಳು ಬಾಡಿಹೋಗುವುದು ಸಹಜ. ಆದರೆ ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ ತಜ್ಞರು ಸೂಚಿಸುವ ಒಂದು 'ಸೀಕ್ರೆಟ್' ಆಹಾರವನ್ನು ಗಿಡಕ್ಕೆ ನೀಡಿದರೆ, ನಿಮ್ಮ ತೋಟದ ಗುಲಾಬಿ ಮತ್ತೆ ಚಿಗುರಿ ಹೂವಿನ ರಾಶಿಯನ್ನೇ ನೀಡುತ್ತದೆ. ಆ ರಹಸ್ಯವೇನೆಂದು ತಿಳಿಯಲು ಈ ಲೇಖನ ಓದಿ.

ತಿಯಾದ ಶಾಖ ಮತ್ತು ಬಿರುಬಿಸಿಲಿನಿಂದಾಗಿ ಗುಲಾಬಿ ಗಿಡಗಳು ಸುಟ್ಟು ಬಾಡಿಹೋಗುತ್ತವೆ. ಆದರೆ ಈಗ ಚಿಂತಿಸುವ ಅಗತ್ಯವಿಲ್ಲ. ಗಾರ್ಡನ್ ಎಕ್ಸ್‌ಪರ್ಟ್ಸ್ ಪ್ರಕಾರ, ಶ್ರಾವಣ ಮಾಸದ ಮಳೆ ಪ್ರಾರಂಭವಾಗುವ ಮುನ್ನ ಗಿಡಕ್ಕೆ ಸರಿಯಾದ ಗೊಬ್ಬರ ನೀಡಿದರೆ ದಂಡಿಯಾಗಿ ಹೂವುಗಳನ್ನು ಪಡೆಯಬಹುದು.

ಗುಲಾಬಿಯನ್ನು 'ಹೂವುಗಳ ರಾಜ' ಎಂದು ಕರೆಯಲಾಗುತ್ತದೆ. ಪ್ರತಿ ಗಾರ್ಡನಿಂಗ್ ಪ್ರಿಯನಿಗೂ ತನ್ನ ಗಿಡ ಸದಾ ಮೊಗ್ಗು ಮತ್ತು ಸುಗಂಧಿತ ಹೂವುಗಳಿಂದ ತುಂಬಿರಲಿ ಎಂಬ ಆಸೆ ಇರುತ್ತದೆ. ಆದರೆ ಮಾರ್ಚ್‌ನಿಂದ ಜೂನ್ ವರೆಗಿನ ಚಳಿಗಾಲದ ನಂತರದ ಬಿರುಬಿಸಿಲಿಗೆ ಗಿಡಗಳು ಹಳದಿಯಾಗಿ ಎಲೆಗಳು ಉದುರತೊಡಗುತ್ತವೆ ಮತ್ತು ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.

ಈಗ ಬೇಸಿಗೆ ಕಳೆದು ಮಳೆಗಾಲ ಹತ್ತಿರ ಬರುತ್ತಿದೆ. ಬಾಡಿಹೋಗಿರುವ ನಿಮ್ಮ ಗುಲಾಬಿ ಗಿಡಗಳಿಗೆ ಮರುಜೀವ ನೀಡಲು ಇದು ಸರಿಯಾದ ಸಮಯ. ತಜ್ಞರ ಪ್ರಕಾರ, ಮಳೆಗಾಲದ ತುಂತುರು ಶುರುವಾಗುವ ಮೊದಲೇ ಗಿಡಗಳಿಗೆ ಒಂದು ವಿಶೇಷ ಸೀಕ್ರೆಟ್ ಡಯಟ್ ನೀಡಬೇಕು. ಅದರಲ್ಲಿ ಪ್ರಮುಖವಾದುದು ಈ ಸಣ್ಣ "ನೀಲಿ ಗುಳಿಗೆಗಳ" ಬಳಕೆ.

ಮಳೆಗಾಲಕ್ಕೂ ಮುನ್ನ ಈ ಕೆಲಸ ಏಕೆ ಮಾಡಬೇಕು?

ಮಳೆಗಾಲವು ಗಿಡಗಳ ಹೊಸ ಬೆಳವಣಿಗೆಗೆ ಉತ್ತಮ ಸಮಯ. ಆದರೆ ಮಳೆಗಾಲ ಆರಂಭವಾಗುವ ಮೊದಲೇ ಗಿಡವನ್ನು ಸಿದ್ಧಪಡಿಸಬೇಕು. ಮಳೆ ಬರುವ ಮುನ್ನವೇ ಈ ಗೊಬ್ಬರಗಳನ್ನು ಮಣ್ಣಿಗೆ ಹಾಕಿದರೆ, ಮಳೆ ನೀರಿನೊಂದಿಗೆ ಸೇರಿ ಅವು ನೇರವಾಗಿ ಬೇರುಗಳನ್ನು ತಲುಪುತ್ತವೆ. ಇದರಿಂದ ಗಿಡದಲ್ಲಿ ಅಸಂಖ್ಯಾತ ಹೊಸ ರೆಂಬೆಗಳು ಮತ್ತು ಮೊಗ್ಗುಗಳು ಮೂಡುತ್ತವೆ.

ಮೊದಲು ಮಣ್ಣನ್ನು ಹದ ಮಾಡಿ (Digging)

ಗೊಬ್ಬರ ಹಾಕುವ ಮೊದಲ ನಿಯಮವೆಂದರೆ ಮಣ್ಣನ್ನು ಗಾಳಿಯಾಡುವಂತೆ ಮಾಡುವುದು. ಕುಂಡದ ಮೇಲ್ಪದರ ಗಟ್ಟಿಯಾಗಿದ್ದರೆ, ಗಿಡದ ಮುಖ್ಯ ಬೇರಿನಿಂದ 2-3 ಇಂಚು ದೂರದಲ್ಲಿ ಮಣ್ಣನ್ನು ಅಗೆದು ಸಡಿಲಗೊಳಿಸಿ. ಇದರಿಂದ ಬೇರುಗಳಿಗೆ ಆಮ್ಲಜನಕ ಸಿಗುತ್ತದೆ ಮತ್ತು ನಾವು ಹಾಕುವ ಗೊಬ್ಬರ ನೇರವಾಗಿ ಬೇರುಗಳಿಗೆ ತಲುಪುತ್ತದೆ.

ಶಿಲೀಂಧ್ರದಿಂದ ರಕ್ಷಿಸಲು 'ಫಂಗಿಸೈಡ್' (Fungicide) ಬಳಕೆ

ಮಳೆಗಾಲದಲ್ಲಿ ತೇವಾಂಶ ಹೆಚ್ಚಾದಂತೆ ಬೇರುಗಳು ಕೊಳೆಯುವ ಅಥವಾ ಶಿಲೀಂಧ್ರ (Fungus) ತಗುಲುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು, ಮಣ್ಣು ಅಗೆದ ನಂತರ ಒಂದು ಸಣ್ಣ ಚಮಚದಷ್ಟು 'Saaf' ಅಥವಾ ಯಾವುದೇ ಗುಣಮಟ್ಟದ ಶಿಲೀಂಧ್ರನಾಶಕ ಪುಡಿಯನ್ನು ಮಣ್ಣಿನ ಸುತ್ತಲೂ ಹರಡಿ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಬೇರುಗಳನ್ನು ರಕ್ಷಿಸುತ್ತದೆ.

ಬೂದಿಯ ಬಳಕೆ (Wood Ash)

ಶಿಲೀಂಧ್ರನಾಶಕದ ನಂತರ ಒಂದು ಚಮಚ ಬೂದಿಯನ್ನು ಬಳಸಿ. ಬೂದಿಯಲ್ಲಿ ಪೊಟ್ಯಾಶಿಯಂ ಮತ್ತು ಫಾಸ್ಫರಸ್ ಸಮೃದ್ಧವಾಗಿದ್ದು, ದೊಡ್ಡ ಗಾತ್ರದ ಗುಲಾಬಿ ಹೂವುಗಳು ಬಿಡಲು ಇವು ಅತಿ ಮುಖ್ಯ. ಅಲ್ಲದೆ, ಬೂದಿಯು ನೈಸರ್ಗಿಕ ಕೀಟನಾಶಕವಾಗಿಯೂ ಕೆಲಸ ಮಾಡಿ ಇರುವೆಗಳನ್ನು ದೂರವಿಡುತ್ತದೆ.

ನೀಲಿ ಗುಳಿಗೆಗಳು ಅಂದರೆ 'ಸೀ-ವೀಡ್' ಗೊಬ್ಬರ (Seaweed Fertilizer)

ಈಗ ಗಿಡಕ್ಕೆ ಹಾಕಬೇಕಾದ ಅತ್ಯಂತ ಮುಖ್ಯವಾದ ವಸ್ತು 'ಸೀ-ವೀಡ್' ಗೊಬ್ಬರ. ಇವು ಸಮುದ್ರದ ಅಡಿಯಲ್ಲಿ ಬೆಳೆಯುವ ಪಾಚಿಗಳಿಂದ ತಯಾರಿಸಿದ ಸಂಪೂರ್ಣ ಸಾವಯವ ಗೊಬ್ಬರ. ಇವು ಮಾರುಕಟ್ಟೆಯಲ್ಲಿ ಸಣ್ಣ ನೀಲಿ ಅಥವಾ ಕಪ್ಪು ಬಣ್ಣದ ಗುಳಿಗೆಗಳ ರೂಪದಲ್ಲಿ ಸಿಗುತ್ತವೆ. ಕುಂಡದ ಮಣ್ಣಿಗೆ ಒಂದು ಚಮಚ ಈ ನೀಲಿ ಗುಳಿಗೆಗಳನ್ನು ಹಾಕಿ. ಇದರಲ್ಲಿ 60ಕ್ಕೂ ಹೆಚ್ಚು ಪೋಷಕಾಂಶಗಳು ಮತ್ತು ಬೆಳವಣಿಗೆಯ ಹಾರ್ಮೋನುಗಳಿದ್ದು, ಇವು ಬಾಡಿಹೋಗಿರುವ ಗಿಡಕ್ಕೆ ಹೊಸ ಚೈತನ್ಯ ನೀಡುತ್ತವೆ.

ತಜ್ಞರ ಸಲಹೆ

ಈ ಮೇಲಿನ ಎಲ್ಲಾ ಪದಾರ್ಥ ಹಾಕಿದ ನಂತರ, ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೂಡಲೇ ಗಿಡಕ್ಕೆ ನೀರು ಹಾಕಿ. ನೀರು ತಗುಲುತ್ತಿದ್ದಂತೆ ಈ ನೀಲಿ ಗುಳಿಗೆಗಳು ಕರಗಲು ಆರಂಭಿಸುತ್ತವೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ನಿಮ್ಮ ಗುಲಾಬಿ ಗಿಡವು ಹೂವುಗಳಿಂದ ನಳನಳಿಸುತ್ತದೆ.

ಇಲ್ಲಿದೆ ನೋಡಿ ವಿಡಿಯೋ 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಕ್ಕು ಬೇಡ, ಬೋನು ಬೇಡ.. ಇದೊಂದು ಟ್ರಿಕ್‌ ಇದ್ರೆ ಸಾಕು.. ಮನೆ ಹತ್ರ ಇಲಿ ಸುಳಿಯೋದೂ ಇಲ್ಲ
Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!