
ಮೇಷ : ನೆನ್ನೆಯ ದಿನ ಸ್ಥಗಿತಗೊಂಡಿದ್ದ ಕಾರ್ಯಗಳಿಗೆ ಇಂದು ಚಾಲನೆ, ಗ್ರಹಣ ಬಾಧೆಯಿಂದ ಹೊರಬಂದಿದ್ದೀರಿ, ಸುಬ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ
ವೃಷಭ : ಹಿರಿಯರ ಆರೋಗ್ಯದಲ್ಲಿ ಏರುಪೇರು, ಅಂದುಕೊಂಡಂತೆ ಏನೂ ನಡೆಯುವುದಿಲ್ಲ, ಅಷ್ಟಮ ಶನಿ ಜೊತೆಗೆ ಬಾಧಾಧಿಪತಿಯೂ ಶನಿಯೇ ಆಗಿರುವುದರಿಂದ ಭಾಗ್ಯ ನಷ್ಟ, ಶನಿ ದೋಷನಿವಾರಣೆಗೆ ನವಗ್ರಹ ದರ್ಶನ ಮಾಡಿ
ಮಿಥುನ : ಕುಟುಂಬ ಸ್ಥಾನದಲ್ಲಿರುವ ರಾಹು-ಚಂದ್ರರ ಯುತಿ ಕೌಟುಂಬಿಕ ಕಲಹಕ್ಕೆ ಕಾರಣವಾಗಲಿದೆ, ಧನ ವ್ಯಯ, ವಿಷ್ಣು ಸಹಸ್ರನಾಮ ಪಠಣ ಮಾಡಿ
ಕಟಕ : ಮನೋ ಕ್ಷೋಭೆ, ಆರೋಗ್ಯದಲ್ಲಿ ವ್ಯತ್ಯಯ, ಧ್ಯಾನ-ಜಪಾದಿಗಳಿಂದ ಸಮಾಧಾನ
ಸಿಂಹ : ರಾಶ್ಯಾಧಿಪತಿ ಶತ್ರು ಸ್ಥಾನದಲ್ಲಿ ಕೂತಿರುವುದರಿಂದ ಶತ್ರ ಕಾಟ, ರೋಗ ಬಾಧೆ, ಪರಿಹಾರಕ್ಕಾಗಿ ಸುದರ್ಶನ ಹೋಮಾದಿಗಳನ್ನು ಮಾಡಿಸಿ
ಕನ್ಯಾ : ರಾಶ್ಯಾಧಿಪತಿಯು ಪಂಚಮ ಸ್ಥಾನದಲ್ಲಿ ಕೂತಿರುವುದರಿಂದ ಪ್ರತಿಭಾ ಪ್ರದರ್ಶನ, ಮಕ್ಕಳಿಂದ ಸಹಾಯ ಹಸ್ತ, ನರಸಿಂಹ ಸ್ಮರಣೆ ಮಾಡಿ
ತುಲಾ : ಸಮಾಧಾನದ ದಿನ, ಕಾರ್ಯದಲ್ಲಿ ಸಹೋದರರ ಸಹಕಾರ, ಗೋವಿಗೆ ಅಕ್ಕಿ - ಬೆಲ್ಲವನ್ನು ಸಮರ್ಪಿಸಿ
ವೃಶ್ಚಿಕ : ಯೋಗ ಪಟುಗಳಿಗೆ ಉತ್ತಮ ದಿನ, ಹವಳ ಬಣ್ಣದ ವಸ್ತ್ರ ದಾನ ಮಾಡಿದಲ್ಲಿ ಕಷ್ಟ ಪರಿಹಾರ
ಧನಸ್ಸು : ನಿಮ್ಮ ಕಾರ್ಯದಲ್ಲಿ ಯಶಸ್ಸು, ಬರಬೇಕಾದ ಹಣ ಮರಳಿ ಬರಲಿದೆ, ಸಾಧ್ಯವಾದರೆ ಭಗವದ್ಗೀತೆಯ ಪುಸ್ತಕವನ್ನು ಓದುವವರಿಗೆ ದಾನ ಮಾಡಿ
ಮಕರ : ರಾಶ್ಯಾಧಿಪತಿ ವ್ಯಯದಲ್ಲಿರುವುದಲ್ಲದೆ, ಕುಜ ದೃಷ್ಟಿಯಿಂದಲೂ ಬಾಧಿಸಲ್ಪಡುತ್ತೀರಿ, ಎಳ್ಳೆಣ್ಣೆ, ಅಥವಾ ಎಳ್ಳಿನ ದಾನ ಮಾಡಿ
ಕುಂಭ : ಮರಳು - ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ, ಮಿತ್ರರಿಂದ ಸಹಾಯ, ಬಂಧುಗಳ ಆಗಮನ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ
ಮೀನ : ಔದುಂಬರ ವೃಕ್ಷಕ್ಕೆ ಪ್ರತಿನಿತ್ಯ 21 ಪ್ರದಕ್ಷಿಣೆ ಮಾಡುವುದರಿಂದ ಕಾರ್ಯ ವಿಘ್ನಗಳು ದೂರಾಗಲಿವೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.