LIVE NOW
Published : Jan 17, 2026, 07:01 AM ISTUpdated : Jan 17, 2026, 10:28 AM IST

India Latest News Live: ಕಿವೀಸ್ ಎದುರಿನ ಟಿ20 ಸರಣಿ - ಟೀಂ ಇಂಡಿಯಾಗೆ ಅಯ್ಯರ್ ಜತೆ ಮತ್ತೊಬ್ಬ ಆಟಗಾರನಿಗೆ ಅನಿರೀಕ್ಷಿತ ಎಂಟ್ರಿ?

ಸಾರಾಂಶ

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು ರಸ್‌ಮಲೈ ಎಂದು ಅಣಕಿಸಿದ್ದ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ರಾಕ್ರೆಗೆ ಅದೇ ಹೇಳಿಕೆ ತಿರುಗುಬಾಣವಾಗಿದೆ.

ಇತ್ತೀಚೆಗೆ ಅಣ್ಣಾಮಲೈ ಪ್ರಚಾರ ಮಾಡಿದ್ದ ಮುಂಬೈನ ಮಲಾಡ್‌ ಪಶ್ಚಿಮ ಕ್ಷೇತ್ರದ ವಾರ್ಡ್‌ ನಂ. 35 ಮತ್ತು 47 ಎರಡೂ ಕಡೆ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ನಾಯಕರು ರಸ್‌ಮಲೈ ಫೋಟೋ ಹಂಚಿಕೊಂಡು ರಾಜ್‌ಗೆ ಟಾಂಗ್ ನೀಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಕೂಡಾ ನಾನು ಇಂದು ರಸ್‌ಮಲೈ ಆರ್ಡರ್‌ ಮಾಡಿದ್ದೇನೆ ಎಂದು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ ಬಗ್ಗೆ ಮಾತನಾಡಲು ಅಣ್ಣಾಮಲೈ ಯಾರು? ಆತ ರಸ್‌ಮಲೈ ಎಂದೆಲ್ಲಾ ರಾಜ್‌ ವ್ಯಂಗ್ಯವಾಡಿದ್ದರು.

10:28 AM (IST) Jan 17

ಕಿವೀಸ್ ಎದುರಿನ ಟಿ20 ಸರಣಿ - ಟೀಂ ಇಂಡಿಯಾಗೆ ಅಯ್ಯರ್ ಜತೆ ಮತ್ತೊಬ್ಬ ಆಟಗಾರನಿಗೆ ಅನಿರೀಕ್ಷಿತ ಎಂಟ್ರಿ?

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಗಾಯಗೊಂಡ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಬದಲಿಗೆ ಕ್ರಮವಾಗಿ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಆಯ್ಕೆಯಾಗಿದ್ದಾರೆ. ಒಂದು ವರ್ಷದಿಂದ ತಂಡದಿಂದ ಹೊರಗಿದ್ದ ಶ್ರೇಯಸ್ ಅಯ್ಯರ್‌ಗೆ ಬುಲಾವ್ ಬಂದಿದೆ.

Read Full Story

09:50 AM (IST) Jan 17

ಅಂಡರ್-19 ವಿಶ್ವಕಪ್ - ಇಂದು ಭಾರತ vs ಬಾಂಗ್ಲಾ ಕದನ, ಸೂಪರ್-6 ಮೇಲೆ ಭಾರತದ ಕಣ್ಣು!

ಐಸಿಸಿ ಅಂಡರ್‌-19 ವಿಶ್ವಕಪ್‌ನಲ್ಲಿ ಯುಎಸ್‌ಎ ವಿರುದ್ಧ ಗೆದ್ದ ಭಾರತ ತಂಡ, ಸೂಪರ್‌-6 ಹಂತವನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶವನ್ನು ಎದುರಿಸಲಿದೆ. ವೈಭವ್‌ ಸೂರ್ವವಂಶಿ ಅವರಂತಹ ಆಟಗಾರರ ಮೇಲೆ ನಿರೀಕ್ಷೆ ಇದ್ದರೂ, 2020ರ ಚಾಂಪಿಯನ್ ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

Read Full Story

08:46 AM (IST) Jan 17

ಇಲಿಗಳು 7 ಕೋಟಿ ರು. ಮೌಲ್ಯದ 26000 ಟನ್‌ ಭತ್ತ ತಿಂದು ತೇಗಿದವಂತೆ! ಅಕ್ಕಿ ನಾಪತ್ತೆಗೆ ಸರ್ಕಾರದ ಉತ್ತರ

ಛತ್ತೀಸ್‌ಗಢದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 7 ಕೋಟಿ ರೂಪಾಯಿ ಮೌಲ್ಯದ 26,000 ಕ್ವಿಂಟಾಲ್ ಭತ್ತ ನಾಶವಾಗಿದೆ. ಇದಕ್ಕೆ ಅಧಿಕಾರಿಗಳು ಇಲಿಗಳನ್ನು ದೂಷಿಸಿದ್ದು, ಇದು ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದು ವಿಪಕ್ಷಗಳು ಆರೋಪಿಸಿ ಪ್ರತಿಭಟನೆ ಆರಂಭಿಸಿವೆ.
Read Full Story

More Trending News