ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು ರಸ್ಮಲೈ ಎಂದು ಅಣಕಿಸಿದ್ದ ಎಂಎನ್ಎಸ್ ಮುಖ್ಯಸ್ಥ ರಾಜ್ ರಾಕ್ರೆಗೆ ಅದೇ ಹೇಳಿಕೆ ತಿರುಗುಬಾಣವಾಗಿದೆ.
ಇತ್ತೀಚೆಗೆ ಅಣ್ಣಾಮಲೈ ಪ್ರಚಾರ ಮಾಡಿದ್ದ ಮುಂಬೈನ ಮಲಾಡ್ ಪಶ್ಚಿಮ ಕ್ಷೇತ್ರದ ವಾರ್ಡ್ ನಂ. 35 ಮತ್ತು 47 ಎರಡೂ ಕಡೆ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ನಾಯಕರು ರಸ್ಮಲೈ ಫೋಟೋ ಹಂಚಿಕೊಂಡು ರಾಜ್ಗೆ ಟಾಂಗ್ ನೀಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡಾ ನಾನು ಇಂದು ರಸ್ಮಲೈ ಆರ್ಡರ್ ಮಾಡಿದ್ದೇನೆ ಎಂದು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಬಗ್ಗೆ ಮಾತನಾಡಲು ಅಣ್ಣಾಮಲೈ ಯಾರು? ಆತ ರಸ್ಮಲೈ ಎಂದೆಲ್ಲಾ ರಾಜ್ ವ್ಯಂಗ್ಯವಾಡಿದ್ದರು.
08:16 PM (IST) Jan 17
ಗೋಲ್ಡನ್ ಟೆಂಪಲ್ ಕೊಳದಲ್ಲಿ ಮುಖ ತೊಳೆದು ಉಗುಳಿದ ಅನ್ಯಕೋಮಿನ ವ್ಯಕ್ತಿ, ಸಿಖ್ರ ಪವಿತ್ರ ಕ್ಷೇತ್ರದಲ್ಲಿ ಕೈ ಕಾಲು ಮುಖ ತೊಳೆದು ಉಗುಳಿದ ವ್ಯಕ್ತಿ ವಿರುದ್ಧ ಭಾರಿ ಆಕ್ರೋಶ ಭುಗಿಲೆದ್ದಿದೆ.
07:30 PM (IST) Jan 17
Toll plaza, ಏಪ್ರಿಲ್ 1 ರಿಂದ ಟೋಲ್ ಪ್ಲಾಜಾ ಹೊಸ ನಿಯಮ ಜಾರಿಯಾಗುತ್ತಿದೆ. ದೇಶದ ಎಲ್ಲಾ ಟೋಲ್ ಗೇಟ್ಗಳಲ್ಲಿ ಕ್ಯಾಶ್ಲೆಸ್ ಎಂಟ್ರಿಗೆ ಮಾತ್ರ ಅವಕಾಶ. ನಗದು ಪಾವತಿ ಮಾಡುವ ವ್ಯವಸ್ಥೆ ಇರುವುದಿಲ್ಲ. ಏನಿದು ಹೊಸ ನಿಯಮ?
07:24 PM (IST) Jan 17
ಪ್ರಧಾನಿ ನರೇಂದ್ರ ಮೋದಿಯವರ ಪಶ್ಚಿಮ ಬಂಗಾಳ ಭೇಟಿಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ತೀವ್ರ ವಾಗ್ದಾಳಿಗೆ ಕಾರಣವಾಗಿದೆ. ಟಿಎಂಸಿ, ಮೋದಿಯವರನ್ನು 'ರಾಜಕೀಯ ಪ್ರವಾಸಿ' ಎಂದು ಜರಿದು, ಗಡಿ ಭದ್ರತೆ, ಗಲಭೆಗಳು ಮತ್ತು ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸರಣಿ ಪ್ರಶ್ನೆ.
05:46 PM (IST) Jan 17
05:03 PM (IST) Jan 17
11 ಮಂದಿ ಪ್ರಯಾಣಿಸುತ್ತಿದ್ದ ATR 42 ವಿಮಾನ ನಾಪತ್ತೆ, ಪರ್ವತ ಬಳಿ ಅವಶೇಷಗಳು ಪತ್ತೆಯಾಗಿದ್ದು ಪತನಗೊಂಡಿರುವುದಾಗಿ ವರದಿಯಾಗಿದೆ. ದಿಢೀರ್ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಭಾರಿ ಕಾರ್ಯಾಚರಣೆ ವೇಳೆ ಅವಶೇಷಗಳು ಪತ್ತೆಯಾಗಿದೆ.
04:07 PM (IST) Jan 17
ನೀವು IMPS ಹಣ ವರ್ಗಾವಣೆ, ಎಟಿಎಂನಿಂದ ವಿಥ್ಡ್ರಾ ಮಾಡ್ತೀರಾ? ಫೆಬ್ರವರಿ 15ರಿಂದ ಶುಲ್ಕ ಹೆಚ್ಚಳವಾಗುತ್ತಿದೆ. ಎಟಿಎಂ ಮೂಲಕ ಹಣ ಹಿಂಪಡೆಯುವುದು, ಐಪಿಎಂಪಿಸ್ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೂ ಚಾರ್ಜ್ ಅನ್ವಯ.
02:42 PM (IST) Jan 17
ಕೇಂದ್ರ ಸರ್ಕಾರವು 2026ರ ಬಜೆಟ್ನಲ್ಲಿ ವಿವಾಹಿತ ದಂಪತಿಗಳಿಗಾಗಿ ಐಚ್ಛಿಕ ಜಂಟಿ ತೆರಿಗೆ ಸಲ್ಲಿಕೆ ವ್ಯವಸ್ಥೆಯನ್ನು ಪರಿಗಣಿಸುತ್ತಿದೆ. ಯುಎಸ್ಎ ಮತ್ತು ಜರ್ಮನಿ ಮಾದರಿಯ ಈ ಪ್ರಸ್ತಾವನೆಯು ಅಂಗೀಕಾರವಾದರೆ, ದಂಪತಿ ತಮ್ಮ ಆದಾಯವನ್ನು ಒಟ್ಟುಗೂಡಿಸಿ ತೆರಿಗೆ ಸಲ್ಲಿಸಬಹುದು. ಏನಿದರ ವಿಶೇಷತೆ?
02:19 PM (IST) Jan 17
12:48 PM (IST) Jan 17
10:28 AM (IST) Jan 17
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಗಾಯಗೊಂಡ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಬದಲಿಗೆ ಕ್ರಮವಾಗಿ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಆಯ್ಕೆಯಾಗಿದ್ದಾರೆ. ಒಂದು ವರ್ಷದಿಂದ ತಂಡದಿಂದ ಹೊರಗಿದ್ದ ಶ್ರೇಯಸ್ ಅಯ್ಯರ್ಗೆ ಬುಲಾವ್ ಬಂದಿದೆ.
09:50 AM (IST) Jan 17
ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಯುಎಸ್ಎ ವಿರುದ್ಧ ಗೆದ್ದ ಭಾರತ ತಂಡ, ಸೂಪರ್-6 ಹಂತವನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶವನ್ನು ಎದುರಿಸಲಿದೆ. ವೈಭವ್ ಸೂರ್ವವಂಶಿ ಅವರಂತಹ ಆಟಗಾರರ ಮೇಲೆ ನಿರೀಕ್ಷೆ ಇದ್ದರೂ, 2020ರ ಚಾಂಪಿಯನ್ ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
08:46 AM (IST) Jan 17