
ಹವಾಮಾನ ಬದಲಾದಂತೆ ಆರೋಗ್ಯದಲ್ಲಿ ಏರುಪೇರು ಶುರುವಾಗುತ್ತೆ. ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಕಾಣಿಸಿಕೊಳ್ಳುತ್ತೆ. ಮಳೆಗಾಲದಲ್ಲಿ ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಆದ್ರೆ ನೋವು ಸಹಿಸೋದು ಕಷ್ಟ. ಮಾತನಾಡುವಾಗ ಮಾತ್ರವಲ್ಲ ಆಹಾರ ಸೇವನೆ ಮಾಡುವಾಗ್ಲೂ ಯಮಯಾತನೆ ಅನುಭವಿಸಬೇಕು. ನಿಮಗೂ ಗಂಟಲು ನೋವು ಕಾಡ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.
ಆಚಾರ್ಯ ಬಾಲಕೃಷ್ಣ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗಂಟಲು ನೋವಿಗೆ ಪರಿಹಾರ ಸೂಚಿಸಿದ್ದಾರೆ. ನೀವು ಯಾವುದೇ ಔಷಧಿ ಇಲ್ದೆ ಮನೆಯಲ್ಲಿಯೇ ಇದನ್ನು ಮಾಡ್ಬಹುದು.
ಮನೆ ಮದ್ದಿಗೆ ಅಗತ್ಯ ಇರುವ ಪದಾರ್ಥ : ಉಪ್ಪು, ಶುಂಠಿ ರಸ, ನಿಂಬೆ ರಸ ಮತ್ತು ನೀರು.
ಮಾಡುವ ವಿಧಾನ : ನೀವು ಮೊದಲು, ಅರ್ಧ ಕಪ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಶುಂಠಿ ರಸ ಮತ್ತು ನಿಂಬೆ ರಸವನ್ನು ಸೇರಿಸಿ. ಒಂದು ಚಿಟಿಕೆ ಉಪ್ಪು ಸೇರಿಸಿ. ನಂತ್ರ ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ಇದನ್ನು ಕುಡಿಯಿರಿ. ನಿಯಮಿತವಾಗಿ ನೀವು ಇದನ್ನು ಕುಡಿಯುತ್ತ ಬಂದಲ್ಲಿ ಗಂಟಲು ನೋವು ಮತ್ತು ಊತ ಕಡಿಮೆಯಾಗುತ್ತದೆ.
ಗಂಟಲು ನೋವಿಗೆ ನೀವು ಜೇನುತುಪ್ಪ ಬಳಸಬಹುದು. ಇದು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಇದು ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಕೂಡ ಒಂದು ಪರಿಹಾರವಾಗಿದೆ. ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಉಪ್ಪು ನೀರಿನಂತೆ, ಅಡಿಗೆ ಸೋಡಾದಿಂದ ಗಾರ್ಗ್ಲಿಂಗ್ ಮಾಡಬಹುದು. ಬೆಳ್ಳುಳ್ಳಿಯ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನೋಯುತ್ತಿರುವ ಗಂಟಲಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿಯನ್ನು ಅಗಿಯುವುದು ಅಥವಾ ಬಿಸಿ ನೀರಿಗೆ ಸೇರಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ನೀವು ಯಾವುದೇ ಮನೆ ಮದ್ದು ಸೇವನೆ ಮಾಡಿದ್ರೂ ಗಂಟಲಿಗೆ ವಿಶ್ರಾಂತಿ ನೀಡುವುದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.