ಬಿಸಿಲಿನ ತಾಪ ರಕ್ಷಣೆಗೆ ಜೇಬಲ್ಲಿರಲಿ ಈರುಳ್ಳಿ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟಿಪ್ಸ್​ ಕೇಳಿ

Published : Apr 27, 2026, 06:08 PM IST
Jyotiraditya Scindia

ಸಾರಾಂಶ

ಬೇಸಿಗೆಯ ತೀವ್ರ ಶಾಖದಿಂದ ಪಾರಾಗಲು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ, ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ದೇಹದ ಉಷ್ಣತೆಯನ್ನು ಹೀರಿಕೊಳ್ಳುತ್ತವೆ ಎಂಬ ನಂಬಿಕೆಯ ಮೇಲೆ ಆಧಾರಿತವಾದ ಸಾಂಪ್ರದಾಯಿಕ ಜಾನಪದ ಪರಿಹಾರವಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ಬೇಸಿಗೆಯ ಝಳ ಹೆಚ್ಚಿದೆ. ಬೇಸಿಗೆಯ ತೀವ್ರ ಶಾಖದ ಮಧ್ಯೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೂಲ್​ ಆಗಿರಲು ಒಂದು ಟಿಪ್ಸ್​ ಕೊಟ್ಟಿದ್ದಾರೆ. ಅದೇ "ನಿಮ್ಮ ಜೇಬಿನಲ್ಲಿ ಈರುಳ್ಳಿಯನ್ನು ಇಟ್ಟುಕೊಂಡಿರಿ" ಎನ್ನುವ ಟಿಪ್ಸ್ ಅದಾಗಿದೆ. ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ: ನಾನು ಸ್ವಲ್ಪ ಚಿಕ್ಕವನಂತೆ ಕಾಣುತ್ತೇನೆ, ಆದರೆ ನನ್ನ ಆತ್ಮವು ತುಂಬಾ ವಯಸ್ಸಾಗಿದೆ. ನಿಮ್ಮ ಜೇಬಿನಲ್ಲಿ ಈರುಳ್ಳಿಯನ್ನು ಇಟ್ಟುಕೊಳ್ಳಿ. ನಿಮಗೆ ಏನೂ ಆಗುವುದಿಲ್ಲ ಎಂದಿದ್ದಾರೆ ಸಚಿವರು.ಚಂಬಲ್ ಪ್ರದೇಶದ ತೀವ್ರ ಶಾಖವನ್ನು ಉಲ್ಲೇಖಿಸುತ್ತಾ, ಮೇ ಮತ್ತು ಜೂನ್‌ನಲ್ಲಿ 51 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ತಾಪಮಾನವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂದು ಜನರು ಕೇಳಿದಾಗ, ಸಚಿವರು, ಜನರು ತಮ್ಮ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಬೇಕು, ಹಾಗೆ ಮಾಡಿದರೆ ಬಿಸಿಲಿನ ಬೇಗೆಯಿಂದ ತಕ್ಕಮಟ್ಟಿಗೆ ಸಮಾಧಾನ ಸಿಗುತ್ತದೆ ಎಂದಿದ್ದಾರೆ.

ಈರುಳ್ಳಿ ಹೇಗೆ ಕೆಲಸ ಮಾಡುತ್ತದೆ?

ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುವುದು "ಶಾಖವನ್ನು ಹೀರಿಕೊಳ್ಳುತ್ತದೆ" ಅಥವಾ ಸೂರ್ಯನ ಹೊಡೆತವನ್ನು ತಡೆಯುತ್ತದೆ ಎಂದು ನಂಬಲಾದ ಸಾಂಪ್ರದಾಯಿಕ ಜಾನಪದ ಪರಿಹಾರವಾಗಿದೆ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ, ಜನರು ಹೀಗೆಯೇ ಮಾಡುತ್ತಾರೆ. ಜೇಬಿನಲ್ಲಿ ಈರುಳ್ಳಿಯನ್ನು ಹೊಂದುವುದರಿಂದ ಶಾಖದ ಹೊಡೆತದಿಂದ ನಿಮ್ಮನ್ನು ರಕ್ಷಿಸಬಹುದು ಅಥವಾ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಎಲ್ಲದಕ್ಕೂ ವೈಜ್ಞಾನಿಕ ಪುರಾವೆ ನೋಡದ ಜನರು, ತಲೆತಲಾಂತರಗಳಿಂದ ತಮಗೆ ಅನುಕೂಲ ಆಗಿರುವ ಸಂಪ್ರದಾಯಗಳನ್ನು ಮಾಡುತ್ತಲೇ ಬಂದಿದ್ದು, ಅದರಿಂದ ಪರಿಹಾರ ಕಂಡುಕೊಂಡಿದ್ದಾರೆ.

ಸಲ್ಫರ್ ಅಂಶದಿಂದ ಸಹಕಾರಿ

ಈ ಅಭ್ಯಾಸವು ಆಯುರ್ವೇದ ಮತ್ತು ಜಾನಪದದಲ್ಲಿ ಬೇರೂರಿದೆ, ಹಸಿ ಈರುಳ್ಳಿ (ವಿಶೇಷವಾಗಿ ಕೆಂಪು ಈರುಳ್ಳಿ) ಹೆಚ್ಚಿನ ದೇಹದ ಉಷ್ಣತೆಯನ್ನು ಹೀರಿಕೊಳ್ಳುವ ಬಾಷ್ಪಶೀಲ ತೈಲಗಳು ಮತ್ತು ಸಲ್ಫರ್ ಸಂಯುಕ್ತಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ಉಷ್ಣ ಹೀರಿಕೊಳ್ಳಲು ಸಹಕಾರಿ ಎನ್ನಲಾಗಿದೆ.

ಕಾರಲ್ಲಿ ಎಸಿ ಬಳಸಬೇಡಿ

ಹೆಚ್ಚಿನ ತಾಪಮಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಕುರಿತು ಸಾಂದರ್ಭಿಕವಾಗಿ ಮಾತನಾಡಿದ ಸಿಂಧಿಯಾ, ತಮ್ಮ ಕಾರಿನಲ್ಲಿ ಹವಾನಿಯಂತ್ರಣವನ್ನು ಬಳಸುವುದಿಲ್ಲ ಮತ್ತು ಹವಾನಿಯಂತ್ರಣವಿರುವ ಸ್ಥಳಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದಾಗಿ ಹೇಳಿದ್ದಾರೆ. "ನಾನು ನನ್ನ ಕಾರಿನಲ್ಲಿ ಹವಾನಿಯಂತ್ರಣವನ್ನು ಬಳಸುವುದಿಲ್ಲ, ಅಥವಾ ಹವಾನಿಯಂತ್ರಣವಿರುವ ವಾತಾವರಣದಲ್ಲಿ ನಾನು ಕುಳಿತುಕೊಳ್ಳುವುದಿಲ್ಲ. ಮತ್ತು ಜನರು ನನ್ನನ್ನು ಕೇಳಿದಾಗ, ಮೇ ಮತ್ತು ಜೂನ್‌ನಲ್ಲಿ 51 ಡಿಗ್ರಿ ಶಾಖದಲ್ಲಿಯೂ ಸಹ ಹೀಗೆ ಮಾಡುತ್ತೇನೆ ಎಂದಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ದಿನವೂ ರಜೆ ತೆಗೆದುಕೊಳ್ಳದೇ ಸದಾ ಕೆಲಸ ಮಾಡುತ್ತಿದ್ದ ಶ್ವೇತಾ : ಟೆಕ್ಕಿ ಸಾವಿನ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು?
ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ ಏನೆಲ್ಲಾ ಲಾಭ? ಇಲ್ಲಿದೆ ನೋಡಿ