ಅದೃಷ್ಟ ಬದಲಾಗಬೇಕಾದ್ರೆ ಸ್ನಾನದ ನೀರಿನಲ್ಲಿ ಈ ವಸ್ತು ಹಾಕಿ ನೋಡಿ

First Published Sep 29, 2021, 7:49 PM IST

ಪ್ರತಿಯೊಬ್ಬರೂ ಹಣ, ಗೌರವ (respect)ಪಡೆಯಲು ಬಯಸುತ್ತಾರೆ, ಆದರೆ ಕೆಲವೊಮ್ಮೆ ಎಲ್ಲಾ ಪ್ರಯತ್ನಗಳ ನಂತರವೂ ಯಶಸ್ಸನ್ನು (success) ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂತ್ರ ಮಂತ್ರಗಳು, ಜ್ಯೋತಿಷ್ಯ ಕ್ರಮಗಳು ಪರಿಣಾಮ ಬೀರುತ್ತವೆ. ಅತ್ಯಂತ ಕಡಿಮೆ ಸಮಯದಲ್ಲಿ ಗೌರವಿಸಲ್ಪಡುವ ಬಯಕೆಯನ್ನು ಪೂರೈಸಲು ಕೆಲವು ಸರಳ ಮಾರ್ಗಗಳು ಇಲ್ಲಿವೆ.  

ಇದನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ.(Mix it in bathing water)
ಬೆಳಗ್ಗೆ ಸ್ನಾನದ ನೀರಿಗೆ ಬೆಲ್ಲ, ಅರಿಶಿನ, ಜೇನುತುಪ್ಪ (honey), ಸಕ್ಕರೆ (sugar), ಉಪ್ಪು (salt) ಅಥವಾ ಹಳದಿ ಹೂವುಗಳನ್ನು ಸೇರಿಸಿ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬಹು ಬೇಗ  ಬಯಕೆ ಅಥವಾ ನಿಮ್ಮ ಆಸೆ ಈಡೇರುತ್ತದೆ ಎಂದು ಹೇಳಲಾಗುತ್ತದೆ. 

ಸೂರ್ಯನಿಗೆ ಅರ್ಗ್ಯವನ್ನು ನೀಡಿ 
ಬೆಳಿಗ್ಗೆ ಸ್ನಾನ (morning bath) ಮಾಡಿದ ನಂತರ ತಾಮ್ರದ ಪಾತ್ರದಲ್ಲಿ ನೀರನ್ನು ಸೇರಿಸಿ ಸೂರ್ಯನಿಗೆ ಅರ್ಗ್ಯವನ್ನು ನೀಡಿ. ಹಾಗೆ ಮಾಡುವುದರಿಂದ ಗೌರವವುಂಟಾಗುವುದು. ಗುರಿ ತಲುಪಲು ಸಾಧ್ಯವಾಗುವುದು ಎನ್ನಲಾಗುತ್ತದೆ. 

ಪಕ್ಷಿಗಳಿಗೆ ಆಹಾರ ನೀಡಿ (give food to animals and birds)
ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅನೇಕ ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ. ಮತ್ತೊಂದೆಡೆ, ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತೀರಿ. 

ದುರ್ಗಾ ಸಪ್ತಶತಿ ಪಾರಾಯಣ ಮಾಡಿ (Read Durga Sapashati daily)
ಗೌರವ ಪಡೆಯಲು ದುರ್ಗಾ ಸಪ್ತಶತಿಯ ದ್ವಾದಶ ಅಧ್ಯಾಯವನ್ನು ಪ್ರತಿದಿನ ಪಠಿಸಿ. ಈ ಪಠ್ಯವು ಖ್ಯಾತಿಯನ್ನು ಹೆಚ್ಚಿಸಲಿದೆ. ಆದುದರಿಂದ ಇದನ್ನು ತಪ್ಪದೆ ಮಾಡಿ. 

ರಾತ್ರಿಯಲ್ಲಿ ಈ ಪರಿಹಾರವನ್ನು ಮಾಡಿ 
ರಾತ್ರಿ ಮಲಗುವಾಗ ಒಂದು ಮಡಕೆಯಲ್ಲಿ ನೀರು (pot with water) ತುಂಬಿಸಿ ಬೆಳಿಗ್ಗೆ ಮನೆಯಿಂದ ಹೊರಗೆ ಎಸೆಯಿರಿ. ಹೀಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಒಬ್ಬ ವ್ಯಕ್ತಿಯು ದುಃಸ್ವಪ್ನಗಳನ್ನು (nightmares) ಹೊಂದುವುದನ್ನು ತಡೆಯುತ್ತದೆ. ಇದೇ ವೇಳೆ ಪ್ರತಿಷ್ಠೆಯೂ ಹೆಚ್ಚುತ್ತದೆ.
 

click me!