ವಾಸ್ತುಪ್ರಕಾರ ತೋಟ ಅಲಂಕರಿಸಿದ್ರೆ ಆರ್ಥಿಕ ಪ್ರಗತಿ..!

First Published Sep 28, 2021, 2:42 PM IST

ಪ್ರತಿಯೊಂದು ಉದ್ಯಾನ ಅಥವಾ ಹೂದೋಟ ನಮಗೆ ತಾಜಾ ಗಾಳಿ, ವಿಶ್ರಾಂತಿ ಮತ್ತು ಸಕಾರಾತ್ಮಕ ಭಾವನೆಯನ್ನು ನೀಡುತ್ತದೆ. ನಮ್ಮ ಸುತ್ತಲಿನ ಹಸಿರು ನಮ್ಮನ್ನು ತಾಜಾವಾಗಿರಿಸುತ್ತದೆ. ಆದಾಗ್ಯೂ, ಕೆಲವೊಮ್ಮೆ ನಾವು ಉದ್ದೇಶಪೂರ್ವಕವಾಗಿ ನಮ್ಮ ಮನೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸುತ್ತೇವೆ, ಮತ್ತು ಸಸ್ಯಗಳು  ಹೇಗೇಗೋ ಬೆಳೆಯುತ್ತವೆ. ವಾಸ್ತು ಪ್ರಕಾರ, ಕೆಲವೊಮ್ಮೆ ಇಂತಹ ಉದ್ಯಾನಗಳು ನಮಗೆ ಹಾನಿಕಾರಕವೆಂದು ಹೇಳಲಾಗುತ್ತದೆ. 

ವಾಸ್ತುಪ್ರಕಾರ ಮನೆಯ ತೋಟವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ನಿಯಮಗಳಿವೆ. ವಾಸ್ತು(Vaastu) ಪ್ರಕಾರ ಮನೆಯ ಹೂದೋಟ ನಿರ್ಮಿಸಿದರೆ  ಇದರಿಂದ ಮನೆಯಲ್ಲಿ ಹಸಿರು ಮತ್ತು ಆರ್ಥಿಕ ಬೆಳವಣಿಗೆಯನ್ನು ತರುತ್ತದೆ. ಇಂದಿನಿಂದಲೇ ವಾಸ್ತು ಪ್ರಕಾರ ಮನೆಯಲ್ಲಿ ಗಿಡಗಳನ್ನು ಬೆಳೆಸಿ ಅದೃಷ್ಟ ಬದಲಾಯಿಸಿ.ವಾಸ್ತು: ಈ ಚಿತ್ರಗಳು ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗೆ ಮುಕ್ತಿ!

ವಾಸ್ತು ಪ್ರಕಾರ ಮನೆಯಲ್ಲಿ ಉದ್ಯಾನ (Park) ಅಥವಾ ಹೂದೋಟಕ್ಕೆ ಅತ್ಯಂತ ಸೂಕ್ತವಾದ ದಿಕ್ಕು ಪೂರ್ವ ಅಥವಾ ಉತ್ತರ ದಿಕ್ಕು. ಈ ದಿಕ್ಕುಗಳು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತವೆ, ಆದ್ದರಿಂದ ಮನೆಯಲ್ಲಿನ  ಮುಚ್ಚಿದ ಕೋಣೆಗಳನ್ನು ತೆರೆದ ಉದ್ಯಾನವನ್ನಾಗಿ ಬದಲಾಯಿಸಬೇಕು.

ಮನೆಯ ತೋಟದಲ್ಲಿ ದೊಡ್ಡ ಮರ(Tree)ಗಳನ್ನು ನೆಡಬಾರದು, ಅವು ಮನೆಯೊಳಗೆ ಬರುವ ಧನಾತ್ಮಕ ಶಕ್ತಿಯನ್ನು ತಡೆಯುತ್ತವೆ. ಯಾವಾಗಲೂ ತೋಟಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ದಾರಿಯನ್ನು ಸ್ವಚ್ಛವಾಗಿ ಮತ್ತು ಖಾಲಿಮಾಡಿ, ಅದರ ಮೇಲೆ ಮರಗಳನ್ನು ನೆಡಬೇಡಿ.

ತೋಟದಲ್ಲಿ ಕಳ್ಳಿಯಂತಹ ಮುಳ್ಳಿನ ಗಿಡಗಳನ್ನು ನೆಡುವುದನ್ನು ತಪ್ಪಿಸಿ, ಗುಲಾಬಿ ಮುಂತಾದ ಹೂವುಗಳಿಂದ ಮುಳ್ಳುಗಳಿರುವ ಸಸ್ಯ(Plants)ಗಳನ್ನು ನೆಡಬಹುದು. ಹಣ್ಣಿನ ಗಿಡಗಳನ್ನು ನೆಡಲು ಸರಿಯಾದ ದಿಕ್ಕು ಪೂರ್ವಕ್ಕೆ, ದೊಡ್ಡ ಸಸ್ಯಗಳನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬೇಕು. ಇದನ್ನು ನೆನಪಿನಲ್ಲಿಡಿ. 
 

ಬೋನ್ಸಾಯ್ (Bonsai) ಸಸ್ಯಗಳನ್ನು ಸಹ ನೆಡಬಾರದು,  ಇವು ಕುಬ್ಜ ಗಾತ್ರದ ಸಸ್ಯಗಳಾಗಿವೆ. ಅವು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಇನ್ನು ತೋಟದ ಗೋಡೆಗಳ ಮೇಲೆ ಕುಂಡಗಳನ್ನು ಅಥವಾ ಸಸಿ ಮರಗಳನ್ನು ನೆಡಬೇಡಿ.

ಉತ್ತಮ ಸುಗಂಧವಿರುವ ಹೂ(Flowers) ಬಿಡುವ ಸಸ್ಯಗಳನ್ನು ನೆಡಬೇಕು. ಅವು ಸಕಾರಾತ್ಮಕತೆಯನ್ನು ತರುತ್ತವೆ. ಖಂಡಿತವಾಗಿಯೂ ತೋಟದ ಉತ್ತರ ಭಾಗದಲ್ಲಿ ತುಳಸಿಯನ್ನು ನೆಡಿರಿ. ಇದು ಮನೆಗೆ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ಯಾವುದೇ ನೆಗೆಟಿವ್ ಎನರ್ಜಿ ಮನೆ ಪ್ರವೇಶಿಸುವುದನ್ನು ತಡೆಯುತ್ತದೆ. 

ತೋಟವನ್ನು ಆಗಾಗ ಸ್ವಚ್ಛಗೊಳಿಸಬೇಕು, ತೋಟದಲ್ಲಿರುವ ಒಣಗಿದ ಸಸ್ಯಗಳು ಮತ್ತು ಎಲೆಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ನಿಮ್ಮ ತೋಟದಲ್ಲಿ ನೀರಿನ ಕಾರಂಜಿ(Fountain)ಗಳನ್ನು ಸ್ಥಾಪಿಸಲು ನೀವು ಬಯಸಿದರೆ, ಅದಕ್ಕೆ ಉತ್ತಮ ಸ್ಥಳವೆಂದರೆ ಉತ್ತರ.

click me!